ಆ್ಯಪ್ನಗರ

ಅಸಭ್ಯ ವರ್ತನೆ: ಅಮಾನತು ಶಿಕ್ಷೆಯಿಂದ ತಾತ್ಕಾಲಿಕವಾಗಿ ಪಾರಾದ ಗಂಭೀರ್

ವರ್ಷಾರಂಭದಲ್ಲಿ ದಿಲ್ಲಿ ರಣಜಿ ತಂಡದ ಕೋಚ್‌ ಕೆ.ಪಿ. ಭಾಸ್ಕರ್‌ ವಿರುದ್ಧ ಅನುಚಿತ ವರ್ತನೆ ತೋರಿದ್ದ ಭಾರತದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ಗೆ ಪ್ರಥಮ ದರ್ಜೆ ಕ್ರಿಕೆಟ್‌ನ ನಾಲ್ಕು ಪಂದ್ಯಗಳ ನಿಷೇಧ ಹೇರಲಾಗಿದ್ದು, ಸದ್ಯಕ್ಕೆ ಶಿಕ್ಷೆಯನ್ನು ತಡೆಹಿಡಿಯಲಾಗಿದೆ.

TNN 18 Jun 2017, 7:44 am

ಹೊಸದಿಲ್ಲಿ: ವರ್ಷಾರಂಭದಲ್ಲಿ ದಿಲ್ಲಿ ರಣಜಿ ತಂಡದ ಕೋಚ್‌ ಕೆ.ಪಿ. ಭಾಸ್ಕರ್‌ ವಿರುದ್ಧ ಅನುಚಿತ ವರ್ತನೆ ತೋರಿದ್ದ ಭಾರತದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ಗೆ ಪ್ರಥಮ ದರ್ಜೆ ಕ್ರಿಕೆಟ್‌ನ ನಾಲ್ಕು ಪಂದ್ಯಗಳ ನಿಷೇಧ ಹೇರಲಾಗಿದ್ದು, ಸದ್ಯಕ್ಕೆ ಶಿಕ್ಷೆಯನ್ನು ತಡೆಹಿಡಿಯಲಾಗಿದೆ.

Vijaya Karnataka Web gautam gambhir escapes punishment after justice sen overturns four match ban
ಅಸಭ್ಯ ವರ್ತನೆ: ಅಮಾನತು ಶಿಕ್ಷೆಯಿಂದ ತಾತ್ಕಾಲಿಕವಾಗಿ ಪಾರಾದ ಗಂಭೀರ್


ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಆಡಳಿತಾಧಿಕಾರಿ ನ್ಯಾಯಾಧೀಶ ವಿಕ್ರಮ್‌ಜಿತ್‌ ಸೇನ್‌, ಮದನ್‌ ಲಾಲ್‌, ರಾಜೇಂದ್ರ ಆರ್‌. ರಾಥೋರ್‌ ಮತ್ತು ವಕೀಲ ಸೋನಿ ಸಿಂಗ್‌ ನೇತೃತ್ವದ ತನಿಖಾ ಸಮಿತಿ, ಗೌತಮ್‌ ಗಂಭೀರ್‌ 'ಗಂಭೀರ ಮತ್ತು ಅನುಚಿತ' ವರ್ತನೆ ತೋರಿರುವುದು ಸಾಬೀತಾಗಿದೆ ಎಂದು ಹೇಳಿದೆ.

ಆದಾಗ್ಯೂ, ಸೇನ್‌ ಈ ಆದೇಶವನ್ನು ಗಂಭೀರ್‌ ಒಪ್ಪಿಕೊಂಡರೆ ಮತ್ತು ಇಂತಹ ಘಟನೆಗಳು ಮತ್ತೆ ಪುನರಾವರ್ತನೆಯಾಗದಿದ್ದರೆ 2019ರ ಮೇ 30ಕ್ಕೆ ಅಂತ್ಯಗೊಳ್ಳುವಂತೆ ಎರಡು ವರ್ಷಗಳವರೆಗೆ ಈ ಶಿಕ್ಷೆಯನ್ನು ತಡೆಹಿಡಿಯಲು ಸೇನ್ ನಿರ್ಧರಿಸಿದ್ದಾರೆ. ಹೀಗಾಗಿ ಗಂಭೀರ್ ಸದ್ಯಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.

ಭುವನೇಶ್ವರದಲ್ಲಿ ನಡೆದ ವಿಜಯ್‌ ಹಜಾರೆ ಟ್ರೋಫಿಯಲ್ಲಿ ದಿಲ್ಲಿ ತಂಡದ ಹೋರಾಟ ಕೊನೆಗೊಂಡ ನಂತರ ಕೋಚ್‌ ಭಾಸ್ಕರ್‌ ಮತ್ತು ಗಂಭೀರ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಗಂಭೀರ್‌, ಭಾಸ್ಕರ್‌ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದರು. ಹೀಗಾಗಿ ಘಟನೆಯನ್ನು ತನಿಖೆಗೆ ವಹಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌