ಆ್ಯಪ್ನಗರ

ಭಾರತೀಯ ಕ್ರಿಕೆಟನ್ನು ದೇವರೇ ಕಾಪಾಡಬೇಕು...

ಸ್ವಹಿತಾಸಕ್ತಿ ಸಂಘರ್ಷದ ಆರೋಪದಡಿ ಕ್ರಿಕೆಟ್‌ ದಿಗ್ಗಜ ರಾಹುಲ್‌ ದ್ರಾವಿಡ್‌ಗೆ ಬಿಸಿಸಿಐ ನೋಟಿಸ್‌ ನೀಡಿರುವ ಹಿನ್ನೆಲೆಯಲ್ಲಿ 'ಭಾರತೀಯ ಕ್ರಿಕೆಟನ್ನು ದೇವರೇ ರಕ್ಷಿಸಬೇಕು' ಎಂದು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ.

PTI 8 Aug 2019, 5:00 am
ದ್ರಾವಿಡ್‌ಗೆ ಬಿಸಿಸಿಐ ಸ್ವಹಿತಾಸಕ್ತಿ ಸಂಘರ್ಷದ ನೋಟಿಸ್‌ ನೀಡಿದ್ದಕ್ಕೆ ಗಂಗೂಲಿ ಅಸಮಾಧಾನ
Vijaya Karnataka Web god help indian cricket ganguly on dravids conflict notice
ಭಾರತೀಯ ಕ್ರಿಕೆಟನ್ನು ದೇವರೇ ಕಾಪಾಡಬೇಕು...

ಹೊಸದಿಲ್ಲಿ :
ಸ್ವಹಿತಾಸಕ್ತಿ ಸಂಘರ್ಷದ ಆರೋಪದಡಿ ಕ್ರಿಕೆಟ್‌ ದಿಗ್ಗಜ ರಾಹುಲ್‌ ದ್ರಾವಿಡ್‌ಗೆ ಬಿಸಿಸಿಐ ನೋಟಿಸ್‌ ನೀಡಿರುವ ಹಿನ್ನೆಲೆಯಲ್ಲಿ 'ಭಾರತೀಯ ಕ್ರಿಕೆಟನ್ನು ದೇವರೇ ರಕ್ಷಿಸಬೇಕು' ಎಂದು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಗಂಗೂಲಿ ಹೇಳಿಕೆಗೆ ಭಾರತ ತಂಡದ ಮಾಜಿ ಸದಸ್ಯ ಹರ್ಭಜನ್‌ ಸಿಂಗ್‌ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ ಆಜೀವ ಸದಸ್ಯ ಸಂಜಯ್‌ ಗುಪ್ತಾ ಮಾಡಿರುವ ಸ್ವಹಿತಾಸಕ್ತಿ ಸಂಘರ್ಷ ಆರೋಪದ ಹಿನ್ನೆಲೆಯಲ್ಲಿ ಬಿಸಿಸಿಐನ ನೀತಿ ಸಂಹಿತೆ ಅಧಿಕಾರಿ ನಿವೃತ್ತ ನ್ಯಾಯಾಧೀಶ ಡಿ.ಕೆ.ಜೈನ್‌ ಭಾರತ ತಂಡದ ಮಾಜಿ ನಾಯಕ ದ್ರಾವಿಡ್‌ಗೆ ನೋಟಿಸ್‌ ನೀಡಿದ್ದಾರೆ.
ಈ ಸಂಬಂಧ ಗಂಗೂಲಿ ಟ್ವೀಟ್‌ ಮಾಡಿದ್ದು, ''ಭಾರತೀಯ ಕ್ರಿಕೆಟಿನಲ್ಲಿ ಈಗ ಹೊಸದೊಂದು ಫ್ಯಾಷನ್‌ ಶುರುವಾಗಿದೆ. ಸದಾ ಸುದ್ದಿಯಲ್ಲಿರಲು 'ಸ್ವಹಿತಾಸಕ್ತಿ ಸಂಘರ್ಷ' ಅತ್ಯುತ್ತಮ ಮಾರ್ಗವಾಗಿದೆ. ಭಾರತೀಯ ಕ್ರಿಕೆಟನ್ನು ದೇವರೇ ಕಾಪಾಡಬೇಕು. ಬಿಸಿಸಿಐ ನೀತಿ ಸಂಹಿತೆ ಅಧಿಕಾರಿಯಿಂದ ದ್ರಾವಿಡ್‌ಗೂ ಹಿತಾಸಕ್ತಿ ನೋಟಿಸ್‌ ರವಾನಿಸಲಾಗಿದೆ,' ಎಂದು ಬರೆದುಕೊಂಡಿದ್ದಾರೆ.
ಗಂಗೂಲಿ ಟ್ವೀಟ್‌ಗೆ ಭಾರತ ತಂಡದ ಮಾಜಿ ಆಫ್‌ಸ್ಪಿನ್ನರ್‌ ಹರ್ಭಜನ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ''ಇದು ನಿಜವೇ? ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಭಾರತೀಯ ಕ್ರಿಕೆಟಿನಲ್ಲಿ ದ್ರಾವಿಡ್‌ಗಿಂತ ಉತ್ತಮ ವ್ಯಕ್ತಿ ಸಿಗಲು ಸಾಧ್ಯವಿಲ್ಲ. ಕ್ರಿಕೆಟ್‌ ದಂತಕಥೆಗೆ ನೋಟಿಸ್‌ ನೀಡುವ ಮೂಲಕ ಅವರನ್ನು ಅಗೌರವಿಸಿದಂತಾಗಿದೆ,'' ಎಂದು ಭಜಿ ಪ್ರತಿಕ್ರಿಯಿಸಿದ್ದಾರೆ.
ಡಿ.ಕೆ.ಜೈನ್‌ ನೀಡಿರುವ ನೋಟಿಸ್‌ಗೆ ಉತ್ತರಿಸಲು ದ್ರಾವಿಡ್‌ ಎರಡು ವಾರ ಕಾಲಾವಕಾಶ ಕೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌