ಆ್ಯಪ್ನಗರ

ವಿಶ್ವಕಪ್‌ಗೂ ಮುನ್ನ ಸರಿಯಾದ ಸಂಯೋಜನೆಗೆ ಅವಕಾಶ: ರೋಹಿತ್

ಬಹುನಿರೀಕ್ಷಿತ ಏಷ್ಯಾ ಕಪ್‌ ಆರಂಭವಾಗಲಿರುವಂತೆಯೇ ಟೀಮ್ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿ ಕೊಂಚ ಕಳೆಗುಂದುವಂತೆ ಮಾಡಿದೆ. ಆದರೂ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಅವರಿಗೆ ತಮ್ಮ ನಾಯಕತ್ವವನ್ನು ಪರೀಕ್ಷಿಸುವ ಸರಿಯಾದ ಸಂದರ್ಭವಾಗಿರಲಿದೆ.

TOI.in 15 Sep 2018, 3:59 pm
ದುಬೈ: ಬಹುನಿರೀಕ್ಷಿತ ಏಷ್ಯಾ ಕಪ್‌ ಆರಂಭವಾಗಲಿರುವಂತೆಯೇ ಟೀಮ್ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿ ಕೊಂಚ ಕಳೆಗುಂದುವಂತೆ ಮಾಡಿದೆ. ಆದರೂ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಅವರಿಗೆ ತಮ್ಮ ನಾಯಕತ್ವವನ್ನು ಪರೀಕ್ಷಿಸುವ ಸರಿಯಾದ ಸಂದರ್ಭವಾಗಿರಲಿದೆ.
Vijaya Karnataka Web rohit-dhoni


ಈ ನಡುವೆ ದುಬೈಗೆ ತಲುಪಿರುವ ಟೀಮ್ ಇಂಡಿಯಾ ಪೂರ್ವ ತಯಾರಿ ನಡೆಸುತ್ತಿದೆ. ಇದರಂತೆ ಪ್ರಶಸ್ತಿ ಅನಾವರಣದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಏಷ್ಯಾ ಕಪ್ ಪ್ರಾಮುಖ್ಯತೆ ಬಗ್ಗೆ ರೋಹಿತ್ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಹಿನ್ನಲೆಯಲ್ಲಿ ಟೀಮ್ ಇಂಡಿಯಾ ಸರಿಯಾದ ಸಂಯೋಜನೆ ರೂಪಿಸಲು ಏಷ್ಯಾ ಕಪ್ ಉತ್ತಮ ಅವಕಾಶವಾಗಿರಲಿದೆ ಎಂದು ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಆರಂಭಿಕರಾಗಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೊತೆಗೆ ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇರಲಿದ್ದಾರೆ. ಇದರಿಂದಾಗಿ ಪರಿಪೂರ್ಣ ಮಧ್ಯಮ ಕ್ರಮಾಂಕವನ್ನು ರೂಪಿಸುವುದು ಟೀಮ್ ಇಂಡಿಯಾ ಯೋಜನೆಯಾಗಿರಲಿದೆ.

ಪ್ರತಿಯೊಂದು ತಂಡವು ಉತ್ತಮ ಮನೋಸ್ಥಿತಿಯೊಂದಿಗೆ ವಿಶ್ವಕಪ್‌ಗೆ ಸಜ್ಜಾಗುತ್ತಿದೆ. ಆದರೂ ಈ ಬಗ್ಗೆ ಹೆಚ್ಚೇನು ತಲೆಕೆಡಿಸುತ್ತಿಲ್ಲ. ನಿಸ್ಸಂಶಯವಾಗಿಯೂ ವಿಶ್ವಕಪ್‌ಗೂ ಮೊದಲು ಸರಿಯಾದ ತಂಡ ರೂಪಿಸಲು ಅತ್ಯುತ್ತಮ ಅವಕಾಶವಾಗಿರಲಿದೆ ಎಂದರು.

ಸದ್ಯ ಏಷ್ಯಾ ಕಪ್ ಮೇಲೆ ಸಂಪೂರ್ಣ ಗಮನ ಕೇಂದ್ರಿಕರಿಸಿದ್ದೇವೆ. ಒಮ್ಮೆಗೆ ಒಂದು ಪಂದ್ಯವನ್ನು ಮಾತ್ರ ತೆಗೆದುಕೊಳ್ಳಲು ಬಯಸುತ್ತೇವೆ. ವಿಶ್ವಕಪ್‌ಗೂ ಇನ್ನು ಸಾಕಷ್ಟು ದೂರವಿಲ್ಲದಿದ್ದರೂ ಅದಕ್ಕೂ ಮೊದಲು ನಡೆಯಲಿರುವ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲು ಆಟಗಾರರಿಗೆ ಅವಕಾಶ ದೊರಕಲಿದೆ ಎಂದರು.

ಏಷ್ಯಾ ಕಪ್‌ನಲ್ಲಿ ಸೆಪ್ಟೆಂಬರ್ 18ರಂದು ಹಾಂಕಾಂಗ್ ವಿರುದ್ಧ ಭಾರತ ತನ್ನ ಅಭಿಯಾನವನ್ನು ಆರಂಭಿಸಲಿದೆ. ಬಳಿಕ ಸಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಸೆ.19ರಂದು ಹೈ ವೋಲ್ಟೇಜ್ ಪಂದ್ಯದಲ್ಲಿ ಭಾಗವಹಿಸಲಿದೆ.

ಅದೇ ಹೊತ್ತಿಗೆ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಎದುರು ನೋಡುತ್ತಿರುವಾಗಿ ರೋಹಿತ್ ಸೇರಿಸಿದರು. ಸಂಪೂರ್ಣ ಟೂರ್ನಿಯ ಮೇಲೆ ಗಮನ ಕೇಂದ್ರಿತರಾಗಿದ್ದೇವೆ. ಹಾಗಾಗಿ ಪ್ರತಿ ಪಂದ್ಯವೂ ಮುಖ್ಯ. ಎಲ್ಲ ರಾಷ್ಟ್ರಗಳು ಪ್ರಶಸ್ತಿಗಾಗಿ ಸೆಣಸಲಿದೆ. ಹಾಗೆಯೇ ಮತ್ತೆ ದುಬೈನಲ್ಲಿ ಆಡಲು ಖುಷಿಯಾಗುತ್ತಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌