ಆ್ಯಪ್ನಗರ

ಧೋನಿ ಐಪಿಎಲ್ ಗೆದ್ದಿರುವುದು ಶ್ರೇಷ್ಠ: ರಾಹುಲ್

''ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಹಿಂತಿರುಗಿ ಮತ್ತೆ ಐಪಿಎಲ್ ಗೆದ್ದಿರುವುದು ಶ್ರೇಷ್ಠ'' ಎಂದು ಕೆಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

Times Now 2 Jun 2018, 3:19 pm
ಹೊಸದಿಲ್ಲಿ: ''ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಹಿಂತಿರುಗಿ ಮತ್ತೆ ಐಪಿಎಲ್ ಗೆದ್ದಿರುವುದು ಶ್ರೇಷ್ಠ'' ಎಂದು ಕೆಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web ms-dhoni-04


ಎರಡು ವರ್ಷಗಳ ಬಳಿಕ ಐಪಿಎಲ್‌ಗೆ ಹಿಂತಿರುಗಿದ ಚೆನ್ನೈ ಸೂಪರ್ ಕಿಂಗ್ಸ್, ಧೋನಿ ನಾಯಕತ್ವದಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಆಲಂಕರಿಸಿತ್ತು.

''ಮಹಿ ಭಾಯಿ ಬ್ಯಾಟಿಂಗ್ ಮಾಡಿದ್ದಾಗೆಲ್ಲ ನಾನು ಆನಂದಿಸಿದ್ದೇನೆ. ಅವರು ಪಂದ್ಯವನ್ನು ಗೆಲ್ಲಿಸಿಕೊಟ್ಟಿರುವ ರೀತಿಯು ಅದ್ಭುತ. ಓರ್ವ ಆಟಗಾರ ಹಾಗೂ ನಾಯಕನಾಗಿ ಧೋನಿ ಅಮೋಘ. ಸಿಕ್ಸರ್‌ಗಳನ್ನು ಸಿಡಿಸುತ್ತಿರುವುದನ್ನು ಆನಂದಿಸಿದ್ದೇನೆ. ಬಹುಶಃ ಎದುರಾಳಿ ತಂಡಗಳಿಗೆ ಹೃದಯಾಘಾತವಾಗಿರಬಹುದು'' ಎಂದರು.

ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರಾಹುಲ್ 14 ಪಂದ್ಯಗಳಲ್ಲಿ 659 ರನ್ ಗಳಿಸಿದ್ದರು. ಅಲ್ಲದೆ ತಮ್ಮ ಪ್ರದರ್ಶನದ ಬಗ್ಗೆ ಸಂತೃಪ್ತಿಯಿದೆ ಎಂದರು.

''ಏನು ಹೇಳಲಿ? ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮವಾಗಿ ಆಡಿದ್ದೇನೆ. ಒಟ್ಟಾರೆಯಾಗಿ ಉತ್ತಮ ಅನುಭವ ಪಡೆದಿದ್ದೇನೆ. ಆದರೆ ಪ್ಲೇ-ಆಫ್ ಪ್ರವೇಶಿಸಲು ಸಾಧ್ಯವಾಗದಿರುವುದು ಬೇಸರ ತಂದಿದೆ'' ಎಂದು ವಿವರಿಸಿದರು.

ಅದೇ ಹೊತ್ತಿಗೆ ಕ್ರಿಸ್ ಗೇಲ್ ನೈಜ ಮನೋರಂಜಕ ಎಂದು ಹೇಳಿರುವ ರಾಹುಲ್, ''ಗೇಲ್ ಸಿಡಿದರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅವರ ಜತೆ ಆಡುವುದು ನಿಜಕ್ಕೂ ಆನಂದ ನೀಡಿದೆ'' ಎಂದು ಸೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌