ಆ್ಯಪ್ನಗರ

ಕಿಂಗ್‌ ಕೊಹ್ಲಿ ಬಗ್ಗೆ ಕಾಮೆಂಟ್‌ ಮಾಡಿದ ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆಂಡ್ರೆ ರಸೆಲ್‌!

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಳೆ ಹರಿಸಿರುವ ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಆಲ್‌ರೌಂಡರ್‌ ಆಂಡ್ರೆ ರಸೆಲ್‌, ಕೊಹ್ಲಿ ಬಗ್ಗೆ ಹೊಗಳಲು ಕೇವಲ ಒಂದೆರಡು ಪದಗಳು ಸಾಲುವುದಿಲ್ಲ ಎಂದು ಹೇಳಿದ್ದಾರೆ.

Vijaya Karnataka Web 20 Nov 2019, 5:53 pm
ಅಬುಧಾಬಿ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಳೆ ಹರಿಸಿರುವ ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಆಲ್‌ರೌಂಡರ್‌ ಆಂಡ್ರೆ ರಸೆಲ್‌, ಕೊಹ್ಲಿ ಬಗ್ಗೆ ಹೊಗಳಲು ಕೇವಲ ಒಂದೆರಡು ಪದಗಳು ಸಾಲುವುದಿಲ್ಲ ಎಂದು ಹೇಳಿದ್ದಾರೆ.
Vijaya Karnataka Web Andre Russell on virat kohli 2019


"ವಿರಾಟ್‌ ಅದ್ಭುತ ಆಟಗಾರ. ಒಬ್ಬ ಆಟಗಾರನಾಗಿ ಆತನನ್ನು ಬಣ್ಣಿಸಬೇಗಾದರೆ ಒಂದೇ ಸಮಯದಲ್ಲಿ ನೀವು ಐದಾರು ಪದಗಳನ್ನು ಬಳಕೆ ಮಾಡಬೇಕಾಗುತ್ತದೆ. ಶಿಸ್ತುಬದ್ಧ ಆಟಗಾರ ಅವರು," ಎಂದು ಅಬುದಾಭಿ ಟಿ10 ಕ್ರಿಕೆಟ್‌ ಲೀಗ್‌ನಲ್ಲಿ ಪಾಲ್ಗೊಂಡಿರುವ ರಸೆಲ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

"ಅವರೊಬ್ಬ ನೈಜ ಚಾಂಪಿಯನ್‌ ಆಟಗಾರ. ಅಭಿಮಾನಿಗಳನ್ನು ಅವರು ಇದೇ ರೀತಿ ರಂಜಿಸುತ್ತಿರಲಿ ಎಂದು ಆಶಿಸುತ್ತೇನೆ. ಟೆಸ್ಟ್‌, ಏಕದಿನ ಮತ್ತು ಟಿ20 ಕ್ರಿಕೆಟ್‌ ಎಲ್ಲ ಮಾದರಿಗಳಲ್ಲೂ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಪರಿಪೂರ್ಣ ಆಲ್‌ರೌಂಡರ್‌ ಆಟಗಾರ ಅವರು," ಎಂದಿದ್ದಾರೆ.

ಭಾರತ-ಬಾಂಗ್ಲಾ ನಡುವಣ ಐತಿಹಾಸಿಕ ಡೇ-ನೈಟ್‌ ಟೆಸ್ಟ್‌ ವೀಕ್ಷಿಲು ಐದು ಪ್ರಮುಖ ಕಾರಣಗಳು!

ಇದೇ ವೇಳೆ ಕಿಂಗ್‌ ಕೊಹ್ಲಿ ಬ್ಯಾಟಿಂಗ್‌ ತಂತ್ರಗಾರಿಕೆ ಕುರಿತಾಗಿ ಮಾತನಾಡಿರುವ ಸ್ಫೋಟಕ ಬ್ಯಾಟ್ಸ್‌ಮನ್‌ ರಸೆಲ್‌, ತಮ್ಮ ತಂತ್ರಗಾರಿಕೆಗಿಂತಲೂ ಕೊಹ್ಲಿ ಅವರ ಬ್ಯಾಟಿಂಗ್‌ ಅದ್ಭುತವಾಗಿದೆ ಎಂದಿದ್ದಾರೆ.

"ವಿರಾಟ್‌ ಅವರ ತಂತ್ರಗಾರಿಕೆ ನನಗಿಂತಲೂ ಸಾಕಷ್ಟು ವಿಭಿನ್ನವಾಗಿದೆ. ಅವರದ್ದು ಕ್ಲಾಸಿಕ್‌ ಆಟ. ನನ್ನ ತಂತ್ರಗಾರಿಕೆ ಅವರಷ್ಟು ಸರಳವಾಗಿಲ್ಲ. ನನ್ನದ್ದೇನಿದ್ದರೂ ಶಕ್ತಿ ಮತ್ತು ಸಾಮರ್ಥ್ಯವನ್ನು ಆಧರಿಸಿದೆ.ಪ್ರತಿಯೊಂದು ಎಸೆತವನ್ನೂ ನನ್ನಿಂದ ಸಾಧ್ಯವಾದಷ್ಟು ಬಲವಾಗಿ ಹೊಡೆಯುವ ಪ್ರಯತ್ನ ಮಾಡುತ್ತೇನೆ," ಎಂದು ರಸೆಲ್‌ ವಿವರಿಸಿದ್ದಾರೆ.

ಮುಂದಿನ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಹಾಲಿ ಚಾಂಪಿಯನ್ಸ್‌ ವೆಸ್ಟ್‌ ಇಂಡೀಸ್‌ಗೆ ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡವಿದೆ ಎಂದು ರಸೆಲ್‌ ಒಪ್ಪಿಕೊಂಡಿದ್ದಾರೆ.

IPL 2020: ಚಾಂಪಿಯನ್ ಯುವರಾಜ್ ಸಿಂಗ್‌ಗಾಗಿ ಕೆಕೆಆರ್ ಬಿಡ್ ಸಲ್ಲಿಸಲಿದೆಯೇ?

"ನಮ್ಮ ತಂಡದ ಮೇಲೆ ಬಹಳ ಒತ್ತಡವಿದೆ. ಹೋಗಾಗಿ ಒಂದು ತಂಡವಾಗಿ ಆಡಲು ಪ್ರಯತ್ನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಸರಣಿಗಳನ್ನು ಗೆಲ್ಲುವ ಕಡೆಗೆ ಗಮನ ನೀಡಿದ್ದೇವೆ. ಪ್ರಶಸ್ತಿ ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗುತ್ತದೆ ಎಂದು ಆಶಿಸುತ್ತೇನೆ," ಎಂದು ಹೇಳಿದ್ದಾರೆ.

ವೆಸ್ಟ್‌ ಇಂಡೀಸ್‌ ತಂಡ ಭಾರತ ಪ್ರವಾಸದಲ್ಲಿದ್ದು, ಅಫಘಾನಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿಗಳನ್ನಾಡುತ್ತಿದೆ. ಬಳಿಕ ಭಾರತ ವಿರುದ್ಧ ತಲಾ 3 ಪಂದ್ಯಗಳ ಏಕದಿನ ಮತ್ತು ಟಿ20-ಐ ಕ್ರಿಕೆಟ್‌ ಸರಣಿಗಳನ್ನು ಆಡಲಿದ್ದು, ಚುಟಕು ಮಾದರಿಯಲ್ಲಿ ಭಾರತ ತಂಡಕ್ಕೆ ದಿಟ್ಟ ಸವಾಲೊಡ್ಡಲು ಎದುರು ನೋಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌