ಆ್ಯಪ್ನಗರ

ಬೇರೆಯವರಿಗೆ ನಮ್ಮನ್ನು ದೋಚುವ ತಾಕತ್ತು ಇಲ್ಲ: ಪಾಂಡ್ಯಾ ಟ್ವೀಟ್

ಉತ್ತಮ ಆಟ ಪ್ರದರ್ಶಿಸಿದ ಹಾರ್ದಿಕ್‌ ಪಾಂಡ್ಯಾ ರನ್‌ ಔಟ್‌ ಆದ ಬಳಿಕ ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತ ಪಡಿಸಿ ವಿವಾದಾತ್ಮಕ ಟ್ವೀಟ್‌ ಮಾಡಿದ್ದಾರೆ.

ಏಜೆನ್ಸೀಸ್ 19 Jun 2017, 12:20 pm
ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ಹಾರ್ದಿಕ್‌ ಪಾಂಡ್ಯಾ ಭಾನುವಾರ ನಡೆದ ಐಸಿಸಿ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಆಟ ಪ್ರದರ್ಶಿಸಿದ ಹಾರ್ದಿಕ್‌ ಪಾಂಡ್ಯಾ ರನ್‌ ಔಟ್‌ ಆದ ಬಳಿಕ ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತ ಪಡಿಸಿ ವಿವಾದಾತ್ಮಕ ಟ್ವೀಟ್‌ ಮಾಡಿದ್ದಾರೆ.
Vijaya Karnataka Web hardik pandya posted a controversial tweet
ಬೇರೆಯವರಿಗೆ ನಮ್ಮನ್ನು ದೋಚುವ ತಾಕತ್ತು ಇಲ್ಲ: ಪಾಂಡ್ಯಾ ಟ್ವೀಟ್


ಲಂಡನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಾ 43 ಎಸೆತಗಳಲ್ಲಿ 76 ರನ್ ಸಿಡಿಸಿದ್ದರು. ಅವರ ಈ ಭರ್ಜರಿ ಆಟದಲ್ಲಿ ಆರು ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದ್ದರು. ಆದರೆ ತಂಡದ ಆಟಗಾರ ರವೀಂದ್ರ ಜಡೇಜಾ ಅವರ ಅಜಾಗರೂಕ ನಡೆಯಿಂದ ಪಾಂಡ್ಯಾ ರನ್‌ ಔಟ್‌ ಆಗಿದ್ದರು.

ಇದೇ ಬೇಸರದಲ್ಲಿ ಪೆವಿಲಿಯನ್‌ ಸೇರಿದ ಬಳಿಕ ಪಾಂಡ್ಯಾ ಯಾರೊಂದಿಗೂ ಮಾತನಾಡದೇ ಟ್ವಿಟರ್‌ನಲ್ಲಿ ರೀಟ್ವೀಟ್‌ ಮಾಡಿಕೊಳ್ಳುತ್ತಾ ಬ್ಯುಸಿಯಾಗಿದ್ದರು. ಆದರೆ ರಾತ್ರಿ 10.15ರ ವೇಳೆ ತಮ್ಮ ಬೇಸರವನ್ನು ಟ್ವೀಟ್‌ ಮಾಡಿರುವ ಪಾಂಡ್ಯಾ, 'ನಮ್ಮನ್ನು ನಮ್ಮವರೇ ದೋಚಿದ್ದಾರೆ. ಅನ್ಯರಿಗೆ ಆ ತಾಕತ್ತು ಎಲ್ಲಿತ್ತು?' ಎಂದು ಮಾರ್ಮಿಕವಾಗಿ ಟ್ವೀಟ್‌ ಮಾಡಿದ್ದಾರೆ.

Hardik Pandya tweeted this and then deleted it. I am dead. pic.twitter.com/GYb9VwYs7I — Clive (@vanillawallah) June 18, 2017 ತಮ್ಮ ತಂಡದ ಕಳಪೆ ಪ್ರದರ್ಶನ ಕಂಡು ಪಾಂಡ್ಯಾ ಬಹಳಷ್ಟು ಬೇಸರಕೊಂಡಿದ್ದರು ಎಂಬುದನ್ನು ಇದೇ ಟ್ವೀಟ್‌ ಸಾಬೀತುಪಡಿಸುತ್ತದೆ. ಇನ್ನು ಟ್ವೀಟ್‌ ಮಾಡಿರುವ ಕೆಲವೇ ಕ್ಷಣದಲ್ಲಿ ಅದನ್ನು ಪಾಂಡ್ಯಾ ಡಿಲೀಟ್‌ ಮಾಡಿದ್ದಾರೆ. ಆದರೆ ಇವರ ಕೆಲ ಫಾಲೋವರ್ಸ್‌ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಶೇರ್‌ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌