ಆ್ಯಪ್ನಗರ

ರೋಹಿತ್ ಬದಲು ಭಾರತ ಜಯಘೋಷ ಮಾಡುವಂತೆ ಹಿಟ್‌ಮ್ಯಾನ್ ಮನವಿ

ಅಭಿಮಾನಿಗಳ ಹೃದಯ ಗೆದ್ದ ರೋಹಿತ್ ದೇಶಭಿಮಾನ

Times Now 31 Oct 2018, 11:38 am
ಮುಂಬಯಿ: ವೆಸ್ಟ್‌ಇಂಡೀಸ್ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ 224 ರನ್ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಅಂತರದ ಮುನ್ನಡೆ ದಾಖಲಿಸಿದೆ.
Vijaya Karnataka Web rohit-sharma-chant


ಭಾರತ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಮೋಘ 162 ರನ್ ಸಿಡಿಸಿದ್ದರು. ಇದು ರೋಹಿತ್ ಶರ್ಮಾ ಬ್ಯಾಟ್‌ನಿಂದ ಸಿಡಿದ ದಾಖಲೆಯ 7ನೇ ಶತಕೋತ್ತರ ಶತಕಾರ್ಧ ಸಾಧನೆಯಾಗಿದೆ.

ಕೇವಲ ಬ್ಯಾಟಿಂಗ್‌ನಲ್ಲಷ್ಟೇ ಅಲ್ಲದೆ ಸ್ಲಿಪ್ ಕ್ಷೇತ್ರರಕ್ಷಣೆಯಲ್ಲೂ ಕ್ಯಾಚ್‌‌ಗಳನ್ನು ಹಿಡಿಯುವ ಮೂಲಕ ರೋಹಿತ್ ಗಮನ ಸೆಳೆದಿದ್ದರು .

ಈ ನಡುವೆ ಭಾರತ ಕ್ಷೇತ್ರರಕ್ಷಣೆ ವೇಳೆಯಲ್ಲಿ ಉಪನಾಯಕ ರೋಹಿತ್ ಬೌಂಡರಿ ಗೆರೆ ಫೀಲ್ಡಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ''ರೋಹಿತ್..ರೋಹಿತ್'' ಎಂದು ಜೈಕಾರ ಹಾಕಿದರು.

ಈ ವೇಳೆ ತಮ್ಮ ಜೆರ್ಸಿಯಲ್ಲಿ ಇಂಡಿಯಾ ಬರೆದಿರುವುದನ್ನು ತೋರಿಸುತ್ತಾ ರೋಹಿತ್ ಭಾರತಕ್ಕೆ ಜಯಘೋಷ ಹಾಡುವಂತೆ ಸೂಚಿಸಿದರು. ಬಳಿಕ ಅಭಿಮಾನಿಗಳು ''ಇಂಡಿಯಾ ಇಂಡಿಯಾ'' ಎಂದು ಜೈಕಾರ ಹಾಡಿದರು.

ರೋಹಿತ್ ಈ ವರ್ತನೆಯು ಅಭಿಮಾನಿಗಳ ಹೃದಯ ಗೆಲ್ಲುವಂತೆ ಮಾಡಿದೆ. ಅಲ್ಲದೆ ವ್ಯಕ್ತಿಗಿಂತಲೂ ದೇಶವೇ ಮುಖ್ಯ ಎಂಬುದನ್ನು ಪ್ರತಿಪಾದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌