ಲಾಹೋರ್: ಈಗಾಗಲೇ ಕೊರೊನಾ ವೈರಸ್ ಜಗತ್ತಿನಾದ್ಯಂತ 5,400ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಇದಕ್ಕ ಚೀನಾ ಕಾರಣ ಎಂದಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೊಯೇಬ್ ಅಖ್ತರ್, ಎಲ್ಲಾ ಸಾವು-ನೋವು ಮತ್ತು ಆತಂಕಗಳಿಗೆ ಚೀನಾ ಹೊಣೆ ಎಂದಿದ್ದಾರೆ. "ಬಾವಲಿಗಳನ್ನು ತಿಂದು ಅದರ ರಕ್ತ ಮತ್ತು ಮೂತ್ರವನ್ನು ಕುಡಿದು ವೈರಸ್ಗಳನ್ನು ಯಾಕೆ ಹರಡುತ್ತೀರಿ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾನು ಇಲ್ಲಿ ಮಾತನಾಡುತ್ತಿರುವುದು ಚೀನಾದವರ ಬಗ್ಗೆ. ಇಡೀ ಜಗತ್ತನ್ನೇ ಅವರು ಅಪಾಯಕ್ಕೆ ನೂಕಿದ್ದಾರೆ. ನೀವು ಬಾವಲಿಗಳು, ನಾಯಿಗಳು ಮತ್ತು ಬೆಕ್ಕುಗಳನ್ನು ಯಾಕೆ ತಿನ್ನುತ್ತೀರಿ ಎಂಬುದೇ ಅರ್ಥವಾಗುತ್ತಿಲ್ಲ. ನನಗೆ ಇನ್ನಿಲ್ಲದ ಕೋಪ ಬರುತ್ತಿದೆ," ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನಲ್ ಮೂಲಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
"ಇಡೀ ವಿಶ್ವವೇ ಈಗ ಅಪಾಯದಲ್ಲಿದೆ. ಪ್ರವಾಸೋದ್ಯಮಕ್ಕೆ ಭಾರಿ ನಷ್ಟವಾಗುತ್ತಿದೆ. ಆರ್ಥಿಕತೆಗೂ ಭಾರಿ ಹೊಡೆತ ಬಿದ್ದಿದೆ. ಪ್ರಪಂಚವೇ ಸ್ಥಬ್ಧವಾಗುವ ಸ್ಥಿತಿ ನಿರ್ಮಾಣವಾಗಿದೆ," ಎಂದು ಅಖ್ತರ್ ಚೀನಾ ವಿರುದ್ಧ ಗುಡುಗಿದ್ದಾರೆ.
ಬಿಸಿಸಿಐ ಕಾಮೆಂಟೇಟರ್ಸ್ ತಂಡದಿಂದ ಸಂಜಯ್ ಮಾಂಜ್ರೆಕರ್ಗೆ ಗೇಟ್ಪಾಸ್
"ಚೀನಾದ ಜನತೆ ವಿರುದ್ಧ ನನ್ನದೇನೂ ತಕರಾರಿಲ್ಲ. ಆದರೆ ಅವರು ಪ್ರಾಣಿಗಳೊಂದಿಗೆ ನಡೆಸಿಕೊಳ್ಳುವ ರೀತಿ ಸರಿಯಲ್ಲ. ಇದು ನಿಮ್ಮ ಸಂಪ್ರದಾಯ ಇರಬಹುದು ಆದರೆ ಇದರಿಂದ ನಿಮಗೂ ಏನೂ ಪ್ರಯೋಜನವಾಗುವುದಿಲ್ಲ. ಮನುಷ್ಯತ್ವನ್ನೇ ಇದು ಕೊಲ್ಲುತ್ತಿದೆ. ಚೀನಾದ ಜನರನ್ನು ಬಹಿಷ್ಕರಿಸಿ ಎಂದು ನಾನು ಹೇಳುತ್ತಿಲ್ಲ. ಆದರೆ ಕೆಲ ನೀತಿ ನಿಯಮ ಇರಬೇಕು. ಏನೆಂದರೆ ಏನನ್ನೂ ತಿನ್ನುವುದು ಸರಿಯಲ್ಲ," ಎಂದು ಹೇಳಿದ್ದಾರೆ.
ಚೀನಾದ ವುಹಾನ್ ನಗರದಲ್ಲಿ ಶುರುವಾದ ಕೊರೊನಾ ವೈರಸ್ (ನಾವೆಲ್ ಕೋವಿಡ್-19) ವೈಸರ್ ಇಂದು ಜಗತ್ತಿನಾದ್ಯಂತ 1,30,000ಕ್ಕೂ ಅಧಿಕ ಮಂದಿಗೆ ತಗುಲಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 80ರ ಗಡಿ ದಾಟಿದ್ದು, ಪಾಕಿಸ್ತಾನದಲ್ಲಿಒಟ್ಟು 28 ಪ್ರಕರಣಗಳು ದಾಖಲಾಗಿವೆ.
ಕೊರೊನಾ ಎಫೆಕ್ಟ್: ಭಾರತ-ದಕ್ಷಿಣ ಆಫ್ರಿಕಾ ನಡುವಣ ಸರಣಿ ರದ್ದು
ಕ್ರೀಡಾ ಕ್ಷೇತ್ರಕ್ಕೂ ಕೊರೊನಾ ವೈರಸ್ ಭೀತಿಯ ಬಿಸಿ ದೊಡ್ಡ ಮಟ್ಟದಲ್ಲೇ ತಾಗಿದ್ದು ಜಗತ್ತಿನ ಐಶಾರಾಮಿ ಟಿ20 ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಗೂ ಹೊಡೆತ ನೀಡಿದ್ದು ಟೂರ್ನಿಯ ಅವಧಿಯನ್ನು ಕಡಿಮೆ ಮಾಡಲಾಗಿದೆ. ಮಾರ್ಚ್ 22ಕ್ಕೆ ಅಂತ್ಯಗೊಳ್ಳಬೇಕಿದ್ದ ಟೂರ್ನಿಯನ್ನು ಮಾರ್ಚ್ 18ರ ಒಳಗೆ ಮುಗಿಸುವಂತೆ ಹೊಂದಾಣಿಕೆ ಮಾಡಲಾಗಿದೆ. ವಿದೇಶಿ ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದೇ ವೇಳೆ ಸಾರ್ವಜನಿಕರನ್ನು ಒಗ್ಗೂಡಿಸುವಂತಹ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯ ಸಂದೇಶ ಸಾರಿದೆ.
ಭಾರತದ ಉಪಕಾರ ಸ್ಮರಿಸಿದ ದ.ಆಫ್ರಿಕಾ
ಮಾರ್ಚ್ 29ರಂದು ಶುರುವಾಗಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆಯಾದರೂ ಟೂರ್ನಿ ನಡೆಯುವುದು ಇನ್ನೂ ಖಾತ್ರಿಯಾಗಿಲ್ಲ. ಒಂದು ವೇಳೆ ಈ ವರ್ಷ ಐಪಿಎಲ್ ರದ್ದಾದರೆ ಬಿಸಿಸಿಐಗೆ 10 ಸಾವಿರ ಕೋಟಿಗೂ ಅಧಿಕ ನಷ್ಟವಾಗಲಿದೆ. ಇದೇ ವೇಳೆ ಮುಚ್ಚಿದ ಕ್ರೀಡಾಂಗಣದಲ್ಲಾದರೂ ಐಪಿಎಲ್ ನಡೆಸುವ ಎಲ್ಲಾ ಪ್ರಯತ್ನಗಳು ಜಾರಿಯಲ್ಲಿದೆ. ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಬಿಸಿಸಿಐ ಶನಿವಾರ ತುರ್ತು ಸಭೆ ನಡೆಸಲಿದೆ.
'ಮುಂದೇನಾಗುತ್ತೇ ನೋಡೋಣ', ಐಪಿಎಲ್ ಆಯೋಜನೆ ಬಗ್ಗೆ ಗಂಗೂಲಿ ಹೇಳಿಕೆ
ಭಾರತೀಯರ ಬಗ್ಗೆ ಅಖ್ತರ್ ಕಾಳಜಿ
ಇದೇ ವೇಳೆ ಭಾರತದಲ್ಲಿ ಕೊರೊನಾ ವೈರಸ್ಗೆ ಒಳಪಟ್ಟಿರುವವರ ಬಗ್ಗೆ ಅಖ್ತರ್ ಕಾಳಜಿ ವ್ಯಕ್ತಪಡಿಸಿದ್ದಾರೆ. "ದೇವರೆ ಕೊರೊನಾ ವೈರಸ್ ಭಾರತದಲ್ಲಿ ಹೆಚ್ಚು ಹರಡದೇ ಇರಲಿ. ಭಾರತದಲ್ಲಿ ಇರುವ ನನ್ನ ಸ್ನೇಹಿರತ ಸಂಪರ್ಕದಲ್ಲಿ ನಾನಿದ್ದು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದೇನೆ. ಅಂದಹಾಗೆ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರವರೆಗೆ ಮುಂದೂಡಲಾಗಿದೆ ಎಂದು ಕೇಳಲ್ಪಟ್ಟೆ. ಇದರಿಂದ ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಪ್ರಸಾರ ಮಾಧ್ಯಮ ಎಲ್ಲದಕ್ಕೂ ಭಾರಿ ನಷ್ಟವಾಗಲಿದೆ. ಇದಕ್ಕೆಲ್ಲಾ ಕಾರಣವಾದ ಚೀನಾದಲ್ಲಿ ಕಟ್ಟು ನಿಟ್ಟಿನ ನೀತಿ ನಿಯಮಗಳನ್ನು ಜಾರಿಗೆ ತರುವ ಅಗತ್ಯವಿದೆ," ಎಂದು ಅಖ್ತರ್ ಹೇಳಿದ್ದಾರೆ.
"ಇಡೀ ವಿಶ್ವವೇ ಈಗ ಅಪಾಯದಲ್ಲಿದೆ. ಪ್ರವಾಸೋದ್ಯಮಕ್ಕೆ ಭಾರಿ ನಷ್ಟವಾಗುತ್ತಿದೆ. ಆರ್ಥಿಕತೆಗೂ ಭಾರಿ ಹೊಡೆತ ಬಿದ್ದಿದೆ. ಪ್ರಪಂಚವೇ ಸ್ಥಬ್ಧವಾಗುವ ಸ್ಥಿತಿ ನಿರ್ಮಾಣವಾಗಿದೆ," ಎಂದು ಅಖ್ತರ್ ಚೀನಾ ವಿರುದ್ಧ ಗುಡುಗಿದ್ದಾರೆ.
ಬಿಸಿಸಿಐ ಕಾಮೆಂಟೇಟರ್ಸ್ ತಂಡದಿಂದ ಸಂಜಯ್ ಮಾಂಜ್ರೆಕರ್ಗೆ ಗೇಟ್ಪಾಸ್
"ಚೀನಾದ ಜನತೆ ವಿರುದ್ಧ ನನ್ನದೇನೂ ತಕರಾರಿಲ್ಲ. ಆದರೆ ಅವರು ಪ್ರಾಣಿಗಳೊಂದಿಗೆ ನಡೆಸಿಕೊಳ್ಳುವ ರೀತಿ ಸರಿಯಲ್ಲ. ಇದು ನಿಮ್ಮ ಸಂಪ್ರದಾಯ ಇರಬಹುದು ಆದರೆ ಇದರಿಂದ ನಿಮಗೂ ಏನೂ ಪ್ರಯೋಜನವಾಗುವುದಿಲ್ಲ. ಮನುಷ್ಯತ್ವನ್ನೇ ಇದು ಕೊಲ್ಲುತ್ತಿದೆ. ಚೀನಾದ ಜನರನ್ನು ಬಹಿಷ್ಕರಿಸಿ ಎಂದು ನಾನು ಹೇಳುತ್ತಿಲ್ಲ. ಆದರೆ ಕೆಲ ನೀತಿ ನಿಯಮ ಇರಬೇಕು. ಏನೆಂದರೆ ಏನನ್ನೂ ತಿನ್ನುವುದು ಸರಿಯಲ್ಲ," ಎಂದು ಹೇಳಿದ್ದಾರೆ.
ಚೀನಾದ ವುಹಾನ್ ನಗರದಲ್ಲಿ ಶುರುವಾದ ಕೊರೊನಾ ವೈರಸ್ (ನಾವೆಲ್ ಕೋವಿಡ್-19) ವೈಸರ್ ಇಂದು ಜಗತ್ತಿನಾದ್ಯಂತ 1,30,000ಕ್ಕೂ ಅಧಿಕ ಮಂದಿಗೆ ತಗುಲಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 80ರ ಗಡಿ ದಾಟಿದ್ದು, ಪಾಕಿಸ್ತಾನದಲ್ಲಿಒಟ್ಟು 28 ಪ್ರಕರಣಗಳು ದಾಖಲಾಗಿವೆ.
ಕೊರೊನಾ ಎಫೆಕ್ಟ್: ಭಾರತ-ದಕ್ಷಿಣ ಆಫ್ರಿಕಾ ನಡುವಣ ಸರಣಿ ರದ್ದು
ಕ್ರೀಡಾ ಕ್ಷೇತ್ರಕ್ಕೂ ಕೊರೊನಾ ವೈರಸ್ ಭೀತಿಯ ಬಿಸಿ ದೊಡ್ಡ ಮಟ್ಟದಲ್ಲೇ ತಾಗಿದ್ದು ಜಗತ್ತಿನ ಐಶಾರಾಮಿ ಟಿ20 ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಗೂ ಹೊಡೆತ ನೀಡಿದ್ದು ಟೂರ್ನಿಯ ಅವಧಿಯನ್ನು ಕಡಿಮೆ ಮಾಡಲಾಗಿದೆ. ಮಾರ್ಚ್ 22ಕ್ಕೆ ಅಂತ್ಯಗೊಳ್ಳಬೇಕಿದ್ದ ಟೂರ್ನಿಯನ್ನು ಮಾರ್ಚ್ 18ರ ಒಳಗೆ ಮುಗಿಸುವಂತೆ ಹೊಂದಾಣಿಕೆ ಮಾಡಲಾಗಿದೆ. ವಿದೇಶಿ ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದೇ ವೇಳೆ ಸಾರ್ವಜನಿಕರನ್ನು ಒಗ್ಗೂಡಿಸುವಂತಹ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯ ಸಂದೇಶ ಸಾರಿದೆ.
ಭಾರತದ ಉಪಕಾರ ಸ್ಮರಿಸಿದ ದ.ಆಫ್ರಿಕಾ
ಮಾರ್ಚ್ 29ರಂದು ಶುರುವಾಗಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆಯಾದರೂ ಟೂರ್ನಿ ನಡೆಯುವುದು ಇನ್ನೂ ಖಾತ್ರಿಯಾಗಿಲ್ಲ. ಒಂದು ವೇಳೆ ಈ ವರ್ಷ ಐಪಿಎಲ್ ರದ್ದಾದರೆ ಬಿಸಿಸಿಐಗೆ 10 ಸಾವಿರ ಕೋಟಿಗೂ ಅಧಿಕ ನಷ್ಟವಾಗಲಿದೆ. ಇದೇ ವೇಳೆ ಮುಚ್ಚಿದ ಕ್ರೀಡಾಂಗಣದಲ್ಲಾದರೂ ಐಪಿಎಲ್ ನಡೆಸುವ ಎಲ್ಲಾ ಪ್ರಯತ್ನಗಳು ಜಾರಿಯಲ್ಲಿದೆ. ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಬಿಸಿಸಿಐ ಶನಿವಾರ ತುರ್ತು ಸಭೆ ನಡೆಸಲಿದೆ.
'ಮುಂದೇನಾಗುತ್ತೇ ನೋಡೋಣ', ಐಪಿಎಲ್ ಆಯೋಜನೆ ಬಗ್ಗೆ ಗಂಗೂಲಿ ಹೇಳಿಕೆ
ಭಾರತೀಯರ ಬಗ್ಗೆ ಅಖ್ತರ್ ಕಾಳಜಿ
ಇದೇ ವೇಳೆ ಭಾರತದಲ್ಲಿ ಕೊರೊನಾ ವೈರಸ್ಗೆ ಒಳಪಟ್ಟಿರುವವರ ಬಗ್ಗೆ ಅಖ್ತರ್ ಕಾಳಜಿ ವ್ಯಕ್ತಪಡಿಸಿದ್ದಾರೆ. "ದೇವರೆ ಕೊರೊನಾ ವೈರಸ್ ಭಾರತದಲ್ಲಿ ಹೆಚ್ಚು ಹರಡದೇ ಇರಲಿ. ಭಾರತದಲ್ಲಿ ಇರುವ ನನ್ನ ಸ್ನೇಹಿರತ ಸಂಪರ್ಕದಲ್ಲಿ ನಾನಿದ್ದು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದೇನೆ. ಅಂದಹಾಗೆ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರವರೆಗೆ ಮುಂದೂಡಲಾಗಿದೆ ಎಂದು ಕೇಳಲ್ಪಟ್ಟೆ. ಇದರಿಂದ ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಪ್ರಸಾರ ಮಾಧ್ಯಮ ಎಲ್ಲದಕ್ಕೂ ಭಾರಿ ನಷ್ಟವಾಗಲಿದೆ. ಇದಕ್ಕೆಲ್ಲಾ ಕಾರಣವಾದ ಚೀನಾದಲ್ಲಿ ಕಟ್ಟು ನಿಟ್ಟಿನ ನೀತಿ ನಿಯಮಗಳನ್ನು ಜಾರಿಗೆ ತರುವ ಅಗತ್ಯವಿದೆ," ಎಂದು ಅಖ್ತರ್ ಹೇಳಿದ್ದಾರೆ.