ಮೌಲಾ ನದಾಫ್ (ಹುಬ್ಬಳ್ಳಿ): ಉತ್ತರ ಕರ್ನಾಟಕದ ಬಹುತೇಕ ಉದಯೋನ್ಮಖ ಪ್ರತಿಭೆಗಳು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದು, ಈಗ ವಾಣಿಜ್ಯ ನಗರಿ ಹುಬ್ಬಳ್ಳಿಯ ಕ್ರಿಕೆಟ್ ಆಟಗಾರ ಇದೇ ಪ್ರಥಮ ಬಾರಿಗೆ ರಣಜಿ ಪಂದ್ಯಗಳಿಗೆ ಫೀಲ್ಡ… ಅಂಪೈರ್ ಆಗಿ ಕೆಲಸ ಮಾಡುವ ಅವಕಾಶ ಪಡೆದಿದ್ದಾರೆ.
ಧಾರವಾಡ ವಲಯದ ಐಕಾನ್ ಕ್ರಿಕೆಟ್ ಆಟಗಾರ ಎಂದೇ ಖ್ಯಾತರಾಗಿದ್ದ ಅಭಿಜಿತ್ ಬೆಂಗೇರಿ ಅವರೇ ಈ ಸಾಧನೆ ಮಾಡಿರುವವರು. ಇವರು ನ.20ರಿಂದ 23ರ ವರೆಗೆ ರಾಂಚಿಯಲ್ಲಿ ನಡೆಯಲಿರುವ ಜಾರ್ಖಂಡ್ ಮತ್ತು ರಾಜಸ್ಥಾನ್ ನಡುವಣ ಪಂದ್ಯದಲ್ಲಿ ಫೀಲ್ಡ… ಅಂಪೈರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಭಿಜಿತ್ ಈ ಮೊದಲು ನ.12ರಿಂದ 15ರ ವರೆಗೆ ನಡೆದ ರಣಜಿ ಪಂದ್ಯಗಳಿಗೆ ಟಿವಿ ಅಂಪೈರ್ ಆಗಿ ಕೆಲಸ ಮಾಡಿದ್ದರು.
14 ವರ್ಷದೊಳಗಿನವರ ರಾಜ್ಯ ತಂಡ ಹಾಗೂ ಧಾರವಾಡ ವಲಯದ 19 ಮತ್ತು 23 ವಯೋಮಾನದ ತಂಡಗಳಲ್ಲಿ ಆಡುತ್ತಿದ್ದ ಅಭಿಜಿತ್ ಎಡಗೈ ಸ್ಪಿನ್ನರ್ ಆಗಿದ್ದರು. ಈಗಲೂ ವಿವಿಧ ಕ್ಲಬ್ಗಳಲ್ಲಿ ಆಟದಲ್ಲಿ ತೊಡಗಿಸಿಕೊಂಡಿರುವ ಇವರು ಆಯ್ಕೆ ಮಾಡಿಕೊಂಡಿದ್ದು ಮಾತ್ರ ಅಂಪೈರಿಂಗ್ ಕ್ಷೇತ್ರ.
ಉದ್ಯೋಗ ಅರಸಿ ಬೆಂಗಳೂರಿಗೆ ಪಯಣ ಬೆಳೆಸಿದ ಅಭಿಜಿತ್ ಅವರಿಗೆ ಕ್ರಿಕೆಟ್ನಿಂದ ದೂರ ಉಳಿಯಲು ಸಾಧ್ಯವಾಗಲಿಲ್ಲ. ಅನೇಕ ಗುರುಗಳು, ಸ್ನೇಹಿತರು ಹಾಗೂ ಕುಟುಂಬದವರ ಸಹಕಾರದಿಂದ ಅಂಪೈರ್ ಕ್ಷೇತ್ರಕ್ಕೆ ಧುಮುಕಿ ಯಶಸ್ಸು ಕಾಣುತ್ತಿದ್ದಾರೆ.
2002ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭಿಜಿತ್ ಮೊದಲಿಗೆ 14, 19, 23 ವಯೋಮಾನದ ಜೂನಿಯರ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಮೂಲಕ ವೃತ್ತಿಯನ್ನು ಆರಂಭಿಸಿದರು. 2011-12ರಲ್ಲಿ ಬಿಸಿಸಿಐ ಅಂಪೈರ್ ಪರೀಕ್ಷೆ ತೇರ್ಗಡೆಯಾಗುವ ಮೂಲಕ ರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುವ ಅರ್ಹತೆ ಪಡೆದರು.
ಕಳೆದ 6 ವರ್ಷಗಳಿಂದ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಭಿಜಿತ್ ಅವರಿಗೆ ತಂದೆ ಉದಯ, ತಾಯಿ ವಾಣಿ ಅವರೇ ಪ್ರೇರಣೆ. ಉತ್ತಮ ಅಂಪೈರ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸುವುದೇ ಅವರ ಗುರಿಯಂತೆ.
ಕೋಟ್..
ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್ ಕ್ಲಬ…, ಧಾರವಾಡ ವಲಯ, ಕೆಎಸ್ಸಿಎ ಹಾಗೂ ಬಿಸಿಸಿಐ ನೀಡಿದ ಪ್ರೋತ್ಸಾಹದಿಂದ ನಾನು ಅಂತಾರಾಷ್ಟ್ರೀಯ ಅಂಪೈರ್ ಆಗಲು ಸಾಧ್ಯವಾಯಿತು. ಈ ಮೊದಲು ಅಂಪೈರಿಂಗ್ ಮಾಡಿದ ಅನುಭವ ಇರುವುದರಿಂದ ರಣಜಿ ಪಂದ್ಯದಲ್ಲೂ ಉತ್ತಮವಾಗಿ ಜವಾಬ್ದಾರಿ ನಿರ್ವಹಿಸುವ ವಿಶ್ವಾಸವಿದೆ.
-ಅಭಿಜಿತ್ ಬೆಂಗೇರಿ ಅಂಪೈರ್
ಧಾರವಾಡ ವಲಯದ ಐಕಾನ್ ಕ್ರಿಕೆಟ್ ಆಟಗಾರ ಎಂದೇ ಖ್ಯಾತರಾಗಿದ್ದ ಅಭಿಜಿತ್ ಬೆಂಗೇರಿ ಅವರೇ ಈ ಸಾಧನೆ ಮಾಡಿರುವವರು. ಇವರು ನ.20ರಿಂದ 23ರ ವರೆಗೆ ರಾಂಚಿಯಲ್ಲಿ ನಡೆಯಲಿರುವ ಜಾರ್ಖಂಡ್ ಮತ್ತು ರಾಜಸ್ಥಾನ್ ನಡುವಣ ಪಂದ್ಯದಲ್ಲಿ ಫೀಲ್ಡ… ಅಂಪೈರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಭಿಜಿತ್ ಈ ಮೊದಲು ನ.12ರಿಂದ 15ರ ವರೆಗೆ ನಡೆದ ರಣಜಿ ಪಂದ್ಯಗಳಿಗೆ ಟಿವಿ ಅಂಪೈರ್ ಆಗಿ ಕೆಲಸ ಮಾಡಿದ್ದರು.
14 ವರ್ಷದೊಳಗಿನವರ ರಾಜ್ಯ ತಂಡ ಹಾಗೂ ಧಾರವಾಡ ವಲಯದ 19 ಮತ್ತು 23 ವಯೋಮಾನದ ತಂಡಗಳಲ್ಲಿ ಆಡುತ್ತಿದ್ದ ಅಭಿಜಿತ್ ಎಡಗೈ ಸ್ಪಿನ್ನರ್ ಆಗಿದ್ದರು. ಈಗಲೂ ವಿವಿಧ ಕ್ಲಬ್ಗಳಲ್ಲಿ ಆಟದಲ್ಲಿ ತೊಡಗಿಸಿಕೊಂಡಿರುವ ಇವರು ಆಯ್ಕೆ ಮಾಡಿಕೊಂಡಿದ್ದು ಮಾತ್ರ ಅಂಪೈರಿಂಗ್ ಕ್ಷೇತ್ರ.
ಉದ್ಯೋಗ ಅರಸಿ ಬೆಂಗಳೂರಿಗೆ ಪಯಣ ಬೆಳೆಸಿದ ಅಭಿಜಿತ್ ಅವರಿಗೆ ಕ್ರಿಕೆಟ್ನಿಂದ ದೂರ ಉಳಿಯಲು ಸಾಧ್ಯವಾಗಲಿಲ್ಲ. ಅನೇಕ ಗುರುಗಳು, ಸ್ನೇಹಿತರು ಹಾಗೂ ಕುಟುಂಬದವರ ಸಹಕಾರದಿಂದ ಅಂಪೈರ್ ಕ್ಷೇತ್ರಕ್ಕೆ ಧುಮುಕಿ ಯಶಸ್ಸು ಕಾಣುತ್ತಿದ್ದಾರೆ.
2002ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭಿಜಿತ್ ಮೊದಲಿಗೆ 14, 19, 23 ವಯೋಮಾನದ ಜೂನಿಯರ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಮೂಲಕ ವೃತ್ತಿಯನ್ನು ಆರಂಭಿಸಿದರು. 2011-12ರಲ್ಲಿ ಬಿಸಿಸಿಐ ಅಂಪೈರ್ ಪರೀಕ್ಷೆ ತೇರ್ಗಡೆಯಾಗುವ ಮೂಲಕ ರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುವ ಅರ್ಹತೆ ಪಡೆದರು.
ಕಳೆದ 6 ವರ್ಷಗಳಿಂದ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಭಿಜಿತ್ ಅವರಿಗೆ ತಂದೆ ಉದಯ, ತಾಯಿ ವಾಣಿ ಅವರೇ ಪ್ರೇರಣೆ. ಉತ್ತಮ ಅಂಪೈರ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸುವುದೇ ಅವರ ಗುರಿಯಂತೆ.
ಕೋಟ್..
ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್ ಕ್ಲಬ…, ಧಾರವಾಡ ವಲಯ, ಕೆಎಸ್ಸಿಎ ಹಾಗೂ ಬಿಸಿಸಿಐ ನೀಡಿದ ಪ್ರೋತ್ಸಾಹದಿಂದ ನಾನು ಅಂತಾರಾಷ್ಟ್ರೀಯ ಅಂಪೈರ್ ಆಗಲು ಸಾಧ್ಯವಾಯಿತು. ಈ ಮೊದಲು ಅಂಪೈರಿಂಗ್ ಮಾಡಿದ ಅನುಭವ ಇರುವುದರಿಂದ ರಣಜಿ ಪಂದ್ಯದಲ್ಲೂ ಉತ್ತಮವಾಗಿ ಜವಾಬ್ದಾರಿ ನಿರ್ವಹಿಸುವ ವಿಶ್ವಾಸವಿದೆ.
-ಅಭಿಜಿತ್ ಬೆಂಗೇರಿ ಅಂಪೈರ್