ಆ್ಯಪ್ನಗರ

ರಾಯುಡುಗೆ ಶಾಕ್; ಶಂಕರ್ ಆಯ್ಕೆಗೆ ಕೊಹ್ಲಿ ಸಂತೃಪ್ತಿ

ಮುಂಬರುವ 2019 ಐಸಿಸಿ ಏಕದಿನ ವಿಶ್ವಕಪ್‌ಗಾಗಿನ ತಂಡದಲ್ಲಿ ಆಲ್‌ರೌಂಡರ್ ವಿಜಯ್ ಶಂಕರ್ ಕಾಣಿಸಿಕೊಂಡಿರುವುದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

Vijaya Karnataka Web 18 Apr 2019, 6:18 pm
ಹೊಸದಿಲ್ಲಿ: ಅಚ್ಚರಿಯ ಬೆಳವಣಿಗೆಯಲ್ಲಿ ಮುಂಬರುವ 2019 ಐಸಿಸಿ ಏಕದಿನ ವಿಶ್ವಕಪ್‌ಗಾಗಿನ ಭಾರತ ತಂಡದಿಂದ ಅನುಭವಿ ಅಂಬಟಿ ರಾಯುಡು ಅವರನ್ನು ಕೈಬಿಡಲಾಗಿತ್ತು. ಅವರ ಜಾಗಕ್ಕೆ ಯುವ ಭರವಸೆಯ ಆಲ್‌ರೌಂಡರ್ ವಿಜಯ್ ಶಂಕರ್‌ರನ್ನು ಆಯ್ಕೆ ಮಾಡಲಾಗಿತ್ತು. ಇದು ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಅಚ್ಚರಿ ಹಾಗೂ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web rayudu-kohli


ಈ ನಡುವೆ ನಾಯಕ ವಿರಾಟ್ ಕೊಹ್ಲಿ, ವಿಜಯ್ ಶಂಕರ್ ಬೆಂಬಲಕ್ಕೆ ನಿಂತಿದ್ದು, 15 ಸದಸ್ಯ ಬಲದ ತಂಡದಲ್ಲಿ ಆಲ್‌ರೌಂಡರ್ ಸ್ಥಾನ ಪಡೆದಿರುವುದು ಹರ್ಷವನ್ನುಂಟು ಮಾಡಿದೆ ಎಂದಿದ್ದಾರೆ.

ವಿಶ್ವಕಪ್ ತಂಡದ ಆಯ್ಕೆ ವೇಳೆ ವಿಜಯ್‌ ಶಂಕರ್‌ ತ್ರಿ ಡೈಮೆನ್ಷನಲ್‌ ಸಾಮರ್ಥ್ಯ‌ವಿರುವ ಆಟಗಾರ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಸಮರ್ಥನೆ ನೀಡಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ರಾಯುಡು ವಿಶ್ವಕಪ್ ವೀಕ್ಷಿಸಲು ನಾನೀಗಾಗಲೇ 3ಡಿ ಗ್ಲಾಸ್‌ಗೆ ಆರ್ಡರ್‌ ಮಾಡಿದ್ದೇನೆ ಎಂದು ಟ್ವೀಟ್‌ ಮೂಲಕ ವ್ಯಂಗ್ಯವಾಡಿದ್ದರು.

ಟೀಮ್‌ ಇಂಡಿಯಾದಲ್ಲಿ ಖಾಲಿ ಬಿದ್ದಿದ್ದ 4ನೇ ಕ್ರಮಾಂಕಕ್ಕೆ ಅಂಬಾಟಿ ರಾಯುಡು ಪ್ರಬಲ ಸ್ಪರ್ಧಿಯಾಗಿದ್ದರು. ಆದರೆ, 5 ಸದಸ್ಯರ ರಾಷ್ಟ್ರೀಯ ಆಯ್ಕೆ ಸಮಿತಿ, ಆಂಧ್ರಪ್ರದೇಶದ ಅಂಬಾಟಿ ರಾಯುಡು ಬದಲು ತಮಿಳುನಾಡಿನ ಬೌಲಿಂಗ್‌ ಆಲ್‌ರೌಂಡರ್‌ ವಿಜಯ್‌ ಶಂಕರ್‌ಗೆ ಮಣೆಹಾಕಿತ್ತು.

ಕಳೆದ ಹಲವಾರು ಸರಣಿಗಳಲ್ಲಿ ರಾಯುಡು ಅವರನ್ನು ನಾಯಕ ಕೊಹ್ಲಿ ಬೆಂಬಲಿಸುತ್ತಲೇ ಬಂದಿದ್ದರು. ಅಲ್ಲದೆ ವಿಶ್ವಕಪ್‌ನಲ್ಲಿ 4ನೇ ಕ್ರಮಾಂಕದಲ್ಲಿ ಆಡಲು ಸೂಕ್ತ ಆಟಗಾರ ಎಂದು ಹೇಳಿದ್ದರು. ಆದರೆ 47ರ ಸರಾಸರಿ ಕಾಯ್ದುಕೊಂಡಿರುವ ರಾಯುಡುರನ್ನು ಏಕಾಏಕಿ ತಂಡದಿಂದ ಹೊರಗಟ್ಟಿರುವುದು ಹಲವಾರು ಊಪಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌