ಆ್ಯಪ್ನಗರ

ರಾತ್ರೋರಾತ್ರಿ ಮಹೇಂದ್ರ ಸಿಂಗ್ ಧೋನಿ ಸಾಲಿಗೆ ಸೇರಲು ಸಾಧ್ಯವಿಲ್ಲ: ರಿಷಬ್ ಪಂತ್

ಹಿರಿಯ ಅನುಭವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಜತೆಗಿನ ಹೋಲಿಕೆಯ ಬಗ್ಗೆ ಯುವ ಭರವಸೆಯ ಆಟಗಾರ ರಿಷಬ್ ಪಂತ್ ಹೇಳಿಕೆಯನ್ನು ನೀಡಿದ್ದು, ರಾತ್ರೋರಾತ್ರಿ ಧೋನಿ ಸಾಲಿಗೆ ಸೇರಲು ಸಾಧ್ಯವಿಲ್ಲ ಎಂದಿದ್ದಾರೆ.

Vijaya Karnataka Web 9 Sep 2019, 2:13 pm
ಹೊಸದಿಲ್ಲಿ: ಭಾರತದ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾಜಿ ಆಟಗಾರರು ಅನೇಕ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
Vijaya Karnataka Web pant-dhoni-01


ಪ್ರಸ್ತುತ ಪಟ್ಟಿಯಲ್ಲಿ ರಿಷಬ್ ಪಂತ್, ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶಾನ್ ಹೆಸರುಗಳು ಕಾಣಿಸುತ್ತಿದೆ. ಈ ಪೈಕಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಿಷಬ್ ಪಂತ್ ಹೆಚ್ಚಿನ ಭರವಸೆಯನ್ನು ಮೂಡಿಸಿದ್ದಾರೆ. ಪ್ರಸ್ತುತ ಮಹಿ ಜತೆಗಿನ ಹೋಲಿಕೆ ಸಂಬಂಧ ತಮ್ಮ ಅಭಿಪ್ರಾಯಗಳನ್ನು ಪಂತ್ ಹಂಚಿಕೊಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ ಅನಿಲ್ ಕುಂಬ್ಳೆ

"ಧೋನಿಯೊಂದಿಗೆ ಹೋಲಿಕೆ ಮಾಡುವುದರ ಬಗ್ಗೆ ಕೆಲವೊಮ್ಮೆ ನಾನು ಯೋಚಿಸುತ್ತೇನೆ. ಆದರೆ ಇದು ತುಂಬಾ ಕಷ್ಟ. ನಾನು ಅವರಿಂದ ಕಲಿಯುವುದಾದರೆ, ರಾತ್ರೋರಾತ್ರಿ ಅವರ ಸಾಲಿಗೆ ಸೇರಲು ಸಾಧ್ಯವೆಂದು ಭಾವಿಸಲಾರೆ" ಎಂದು ನುಡಿದಿದ್ದಾರೆ.

"ನಾನು ಅವರಿಂದ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನಾನವರನ್ನು ಮಾರ್ಗದರ್ಶಕರಾಗಿ ಪರಿಗಣಿಸುತ್ತೇನೆ. ಅವರು ನನಗೆ ಅನೇಕ ವಿಚಾರಗಳನ್ನು ಕಲಿಸಿದ್ದಾರೆ. ನನ್ನ ಬ್ಯಾಟಿಂಗ್ ಮೇಲೆ ಹೇಗೆ ಕೆಲಸ ಮಾಡಬೇಕು ಅಥವಾ ಮನೋಸ್ಥಿತಿ ಆಗಿರಬಹುದು. ಎಲ್ಲದಕ್ಕಿಂತಲೂ ಮಿಗಿಲಾಗಿ ಒತ್ತಡಗಳ ಸಂದರ್ಭಗಳಲ್ಲಿ ಶಾಂತವಾಗಿರಲು ಕಲಿಸಿದ್ದಾರೆ" ಎಂದರು.

ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮಹತ್ವದ ಮೈಲುಗಲ್ಲು!

"21ರ ಹರೆಯದಲ್ಲಿ ಧೋನಿ ಸ್ಥಾನವನ್ನು ತುಂಬಬೇಕು ಎಂದು ಯೋಚಿಸಲು ಆರಂಭಿಸಿದರೆ ನನ್ನ ಪಾಲಿಗದು ತುಂಬಾನೇ ಕಷ್ಟಕರವಾಗುಬಹುದು. ವಿಚಾರಗಳನ್ನು ಆದಷ್ಟು ಸರಳವಾಗಿಡಲು ಪ್ರಯತ್ನಿಸುತ್ತೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಲು ಮತ್ತು ನನ್ನ ಸುತ್ತಲಿರುವ ಪ್ರತಿಯೊಬ್ಬರಿಂದ ವಿಶೇಷವಾಗಿಯೂ ಹಿರಿಯರಿಂದ ಸಾಧ್ಯವಾದಷ್ಟು ಕಲಿಯಲು ಪ್ರಯತ್ನಿಸುತ್ತೇನೆ" ಎಂದು ವಿವರಿಸಿದರು.

ನಿವೃತ್ತಿ ಸಾಧ್ಯತೆಯನ್ನು ಬದಿಗೊತ್ತಿದ ಮಹೇಂದ್ರ ಸಿಂಗ್ ಧೋನಿ ಏಕದಿನ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವುಳಿದಿದ್ದರು. ಈ ನಡುವೆ ರಿಷಬ್ ಪಂತ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಕೆಲವೊಂದು ವೈಫಲ್ಯಗಳನ್ನು ಅನುಭವಿಸಿದ್ದರು. ಇದರಿಂದ ಧೋನಿ ಸ್ಥಾನವನ್ನು ತುಂಬಲು ಸಮರ್ಥರೇ ಎಂಬುದು ಚರ್ಚೆಗೀಡಾಗಿತ್ತು. ಪ್ರಸ್ತು ಯುವ ಭರವಸೆಯ ಆಟಗಾರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧವೂ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌