ಹೈದರಾಬಾದ್: ವೆಸ್ಟ್ಇಂಡೀಸ್ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ನಾಯಕನ ಇನ್ನಿಂಗ್ಸ್ ಕಟ್ಟಿದ ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ, ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸುವಲ್ಲಿ ನೆರವಾಗಿದ್ದಾರೆ.
ಇನ್ನಿಂಗ್ಸ್ ಆರಂಭದಲ್ಲಿ ರನ್ಗಾಗಿ ಕೊಹ್ಲಿ ಚಡಪಡಿಸುತ್ತಿದ್ದರು. ದೊಡ್ಡ ಹೊಡೆತಕ್ಕ ಮುಂದಾಗಿ ಅಪಾಯವನ್ನು ಆಹ್ವಾನಿಸಿದ್ದರು. ಆದರೆ ಒಮ್ಮೆ ಕ್ರೀಸಿನಲ್ಲಿ ನೆಲೆಯೂರಿದ ಬಳಿಕ ಬ್ಯಾಟಿಂಗ್ ವೈಭವವನ್ನು ಪ್ರದರ್ಶಿಸಿ ಭಾರತದ ಗೆಲುವಿನ ರೂವಾರಿ ಎನಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ಪ್ರೇಕ್ಷಕರನ್ನು ರಂಜಿಸಲು ಗಾಳಿಯುವ ಹೊಡೆಯುವ ವ್ಯಕ್ತಿ ನಾನಲ್ಲ ಎಂದಿದ್ದಾರೆ.
"ನಾನು ನನ್ನ ಕರ್ತವ್ಯವನ್ನು ಮಾಡುವುದರಲ್ಲಿ ಮಗ್ನವಾಗಿರುತ್ತೇನೆ. ಎಲ್ಲ ಮೂರು ಪ್ರಕಾರದ ಕ್ರಿಕೆಟ್ನಲ್ಲಿ ಆಡುವುದರಿಂದ ಬ್ಯಾಟಿಂಗ್ ಶೈಲಿಯಲ್ಲಿ ಹೆಚ್ಚಿನ ಬದಲಾವಣೆ ತರಲು ಬಯಸುವುದಿಲ್ಲ. ಎಲ್ಲ ಪ್ರಕಾರದಲ್ಲೂ ತಂಡಕ್ಕಾಗಿ ಕೊಡುಗೆ ಸಲ್ಲಿಸಲು ಬಯಸುತ್ತೇನೆ" ಎಂದರು.
ಕಿರಿಕ್ ಕೊಹ್ಲಿ; ತಮ್ಮ ತಂಟೆಗೆ ಬಂದ ವಿಲಿಯಮ್ಸ್ಗೆ ತಕ್ಕ ಪಾಠ
"ನನ್ನನ್ನು ಫಾಲೋ ಮಾಡುತ್ತಿರುವ ಯುವ ಆಟಗಾರರು ನನ್ನ ಇನ್ನಿಂಗ್ಸ್ನ ಮೊದಲ ಅವಧಿಯನ್ನು ಫಾಲೋ ಮಾಡಬಾರದು. ಆ ಸಂದರ್ಭದಲ್ಲಿ ಅತ್ಯಂತ ಕೆಟ್ಟದಾಗಿ ಬ್ಯಾಟಿಂಗ್ ಮಾಡುತ್ತಿದ್ದೆ. ಕೆಎಲ್ ರಾಹುಲ್ ಮೇಲೆ ಒತ್ತಡ ಕಡಿಮೆ ಮಾಡಲು ರನ್ ಗಳಿಸಲು ಬಸಿದ್ದೆ. ಅದೃಷ್ಟವಶಾತ್ ಜೇಸನ್ ಹೋಲ್ಡರ್ ಎಸೆದ ಓವರ್ವೊಂದರಲ್ಲಿ ಸಿಕ್ಸರ್ ಬಾರಿಸಿದ ಬಳಿಕ ನಾನು ಎಲ್ಲಿ ತಪ್ಪು ಮಾಡಿದ್ದೇನೆಂಬುದನ್ನು ಆತ್ಮ ವಿಮರ್ಶೆ ಮಾಡಿಕೊಂಡೆ" ಎಂದು 50 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿದ ವಿರಾಟ್ ಸೇರಿಸಿದರು.
"ನಾನೊಬ್ಬ ದೊಡ್ಡ ಹೊಡೆತಗಾರನಲ್ಲ ಎಂಬುದನ್ನು ಮನವರಿಕೆ ಮಾಡಿದೆ. ಅಲ್ಲಿಂದ ಬಳಿಕ ನನ್ನ ಬ್ಯಾಟಿಂಗ್ ಶೈಲಿ ಬದಲಾಯಿಸಿದೆ. ನಮ್ಮಲ್ಲಿ ಒಬ್ಬರು ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿತ್ತು.ಅದೇ ಪಾತ್ರವನ್ನು ನಾನು ನಿಭಾಯಿಸುತ್ತೇನೆ. ಟಿ20ಗಾಗಿ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಲು ಬಯಸುವುದಿಲ್ಲ. ಪ್ರತಿ ಪಂದ್ಯದಲ್ಲೂ ತಂಡಕ್ಕಾಗಿ ರನ್ ಗಳಿಸುವುದು ನನ್ನ ಗುರಿಯಾಗಿದೆ" ಎಂದು ವಿವರಿಸಿದರು.
ಕಿಂಗ್ ಕೊಹ್ಲಿ ದಾಖಲೆಗಳ ಸರದಾರ; ಭಾರತ ಗರಿಷ್ಠ ರನ್ ಬೇಟೆ
ಏತನ್ಮಧ್ಯೆ ವಿರಾಟ್ ಕೊಹ್ಲಿ ವಿಷಯಕ್ಕೆ ಮೂಗು ತೂರಿಸದಿರಿ ಎಂದು ನೆಟ್ಟಿಗರು ವಿಂಡೀಸ್ ತಂಡವನ್ನು ಎಚ್ಚರಿಸಿದ್ದಾರೆ. ಹೈದರಾಬಾದ್ ಟಿ20 ಪಂದ್ಯದಲ್ಲಿ ವಿರಾಟ್ ಕೆದಕಲು ಹೋಗಿದ್ದ ವಿಂಡೀಸ್ ಆಟಗಾರರಿಗೆ ತಕ್ಕ ಶಾಸ್ತಿಯಾಗಿತ್ತು. ವಿಂಡೀಸ್ ವೇಗಿ ಕೆಸ್ರಿಕ್ ವಿಲಿಯಮ್ಸ್ ಜತೆಗೆ ಶೆಲ್ಡನ್ ಕಾಟ್ರೆಲ್ ಹಾಗೂ ಕೀರಾನ್ ಪೊಲಾರ್ಡ್ಗೆ ಕೊಹ್ಲಿ ತಮ್ಮ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ್ದರು.
ಇನ್ನಿಂಗ್ಸ್ ಆರಂಭದಲ್ಲಿ ರನ್ಗಾಗಿ ಕೊಹ್ಲಿ ಚಡಪಡಿಸುತ್ತಿದ್ದರು. ದೊಡ್ಡ ಹೊಡೆತಕ್ಕ ಮುಂದಾಗಿ ಅಪಾಯವನ್ನು ಆಹ್ವಾನಿಸಿದ್ದರು. ಆದರೆ ಒಮ್ಮೆ ಕ್ರೀಸಿನಲ್ಲಿ ನೆಲೆಯೂರಿದ ಬಳಿಕ ಬ್ಯಾಟಿಂಗ್ ವೈಭವವನ್ನು ಪ್ರದರ್ಶಿಸಿ ಭಾರತದ ಗೆಲುವಿನ ರೂವಾರಿ ಎನಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ಪ್ರೇಕ್ಷಕರನ್ನು ರಂಜಿಸಲು ಗಾಳಿಯುವ ಹೊಡೆಯುವ ವ್ಯಕ್ತಿ ನಾನಲ್ಲ ಎಂದಿದ್ದಾರೆ.
"ನಾನು ನನ್ನ ಕರ್ತವ್ಯವನ್ನು ಮಾಡುವುದರಲ್ಲಿ ಮಗ್ನವಾಗಿರುತ್ತೇನೆ. ಎಲ್ಲ ಮೂರು ಪ್ರಕಾರದ ಕ್ರಿಕೆಟ್ನಲ್ಲಿ ಆಡುವುದರಿಂದ ಬ್ಯಾಟಿಂಗ್ ಶೈಲಿಯಲ್ಲಿ ಹೆಚ್ಚಿನ ಬದಲಾವಣೆ ತರಲು ಬಯಸುವುದಿಲ್ಲ. ಎಲ್ಲ ಪ್ರಕಾರದಲ್ಲೂ ತಂಡಕ್ಕಾಗಿ ಕೊಡುಗೆ ಸಲ್ಲಿಸಲು ಬಯಸುತ್ತೇನೆ" ಎಂದರು.
ಕಿರಿಕ್ ಕೊಹ್ಲಿ; ತಮ್ಮ ತಂಟೆಗೆ ಬಂದ ವಿಲಿಯಮ್ಸ್ಗೆ ತಕ್ಕ ಪಾಠ
"ನನ್ನನ್ನು ಫಾಲೋ ಮಾಡುತ್ತಿರುವ ಯುವ ಆಟಗಾರರು ನನ್ನ ಇನ್ನಿಂಗ್ಸ್ನ ಮೊದಲ ಅವಧಿಯನ್ನು ಫಾಲೋ ಮಾಡಬಾರದು. ಆ ಸಂದರ್ಭದಲ್ಲಿ ಅತ್ಯಂತ ಕೆಟ್ಟದಾಗಿ ಬ್ಯಾಟಿಂಗ್ ಮಾಡುತ್ತಿದ್ದೆ. ಕೆಎಲ್ ರಾಹುಲ್ ಮೇಲೆ ಒತ್ತಡ ಕಡಿಮೆ ಮಾಡಲು ರನ್ ಗಳಿಸಲು ಬಸಿದ್ದೆ. ಅದೃಷ್ಟವಶಾತ್ ಜೇಸನ್ ಹೋಲ್ಡರ್ ಎಸೆದ ಓವರ್ವೊಂದರಲ್ಲಿ ಸಿಕ್ಸರ್ ಬಾರಿಸಿದ ಬಳಿಕ ನಾನು ಎಲ್ಲಿ ತಪ್ಪು ಮಾಡಿದ್ದೇನೆಂಬುದನ್ನು ಆತ್ಮ ವಿಮರ್ಶೆ ಮಾಡಿಕೊಂಡೆ" ಎಂದು 50 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿದ ವಿರಾಟ್ ಸೇರಿಸಿದರು.
"ನಾನೊಬ್ಬ ದೊಡ್ಡ ಹೊಡೆತಗಾರನಲ್ಲ ಎಂಬುದನ್ನು ಮನವರಿಕೆ ಮಾಡಿದೆ. ಅಲ್ಲಿಂದ ಬಳಿಕ ನನ್ನ ಬ್ಯಾಟಿಂಗ್ ಶೈಲಿ ಬದಲಾಯಿಸಿದೆ. ನಮ್ಮಲ್ಲಿ ಒಬ್ಬರು ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿತ್ತು.ಅದೇ ಪಾತ್ರವನ್ನು ನಾನು ನಿಭಾಯಿಸುತ್ತೇನೆ. ಟಿ20ಗಾಗಿ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಲು ಬಯಸುವುದಿಲ್ಲ. ಪ್ರತಿ ಪಂದ್ಯದಲ್ಲೂ ತಂಡಕ್ಕಾಗಿ ರನ್ ಗಳಿಸುವುದು ನನ್ನ ಗುರಿಯಾಗಿದೆ" ಎಂದು ವಿವರಿಸಿದರು.
ಕಿಂಗ್ ಕೊಹ್ಲಿ ದಾಖಲೆಗಳ ಸರದಾರ; ಭಾರತ ಗರಿಷ್ಠ ರನ್ ಬೇಟೆ
ಏತನ್ಮಧ್ಯೆ ವಿರಾಟ್ ಕೊಹ್ಲಿ ವಿಷಯಕ್ಕೆ ಮೂಗು ತೂರಿಸದಿರಿ ಎಂದು ನೆಟ್ಟಿಗರು ವಿಂಡೀಸ್ ತಂಡವನ್ನು ಎಚ್ಚರಿಸಿದ್ದಾರೆ. ಹೈದರಾಬಾದ್ ಟಿ20 ಪಂದ್ಯದಲ್ಲಿ ವಿರಾಟ್ ಕೆದಕಲು ಹೋಗಿದ್ದ ವಿಂಡೀಸ್ ಆಟಗಾರರಿಗೆ ತಕ್ಕ ಶಾಸ್ತಿಯಾಗಿತ್ತು. ವಿಂಡೀಸ್ ವೇಗಿ ಕೆಸ್ರಿಕ್ ವಿಲಿಯಮ್ಸ್ ಜತೆಗೆ ಶೆಲ್ಡನ್ ಕಾಟ್ರೆಲ್ ಹಾಗೂ ಕೀರಾನ್ ಪೊಲಾರ್ಡ್ಗೆ ಕೊಹ್ಲಿ ತಮ್ಮ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ್ದರು.