ಆ್ಯಪ್ನಗರ

ನಾಯಕತ್ವ ನಷ್ಟವಾಗುವ ಭಯದಿಂದ ಕೊಹ್ಲಿ ಸಂಪೂರ್ಣ ವಿಂಡೀಸ್ ಪ್ರವಾಸ ಕೈಗೊಂಡಿದ್ದಾರೆಯೇ?

ವೆಸ್ಟ್‌ಇಂಡೀಸ್ ಪ್ರವಾಸದ ವೇಳೆ ವಿಶ್ರಾಂತಿ ಪಡೆಯುವ ಬಗ್ಗೆ ಯಾರೂ ತನ್ನ ಜತೆ ಚರ್ಚೆ ನಡೆಸಿಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಇದನ್ನು ಫಿಸಿಯೋ ತಿಳಿಸುತ್ತಾರೆ ಎಂದು ಹೇಳಿದ್ದಾರೆ.

Vijaya Karnataka Web 30 Jul 2019, 11:04 am
ಮುಂಬಯಿ: ನಾಯಕ ಸ್ಥಾನ ನಷ್ಟವಾಗುವ ಭಯದಿಂದಾಗಿ ಸಂಪೂರ್ಣ ವೆಸ್ಟ್‌ಇಂಡೀಸ್ ಪ್ರವಾಸವನ್ನು ಕೈಗೊಳ್ಳಲು ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದರು ಎಂಬ ಬಗ್ಗೆ ವರದಿಗಳು ಬಂದಿದ್ದವು.
Vijaya Karnataka Web virat-kohli-fifty-02


ಈ ಹಿಂದೆ ವಿಶ್ವಕಪ್ ಸೆಮಿಫೈನಲ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕತ್ವದಲ್ಲಿ ವಿಭಜನೆಯಾಗಲಿದೆ ಎಂಬುದು ವರದಿಯಾಗಿತ್ತು. ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ರೋಹಿತ್ ಶರ್ಮಾರನ್ನು ಹಾಗೂ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿಗೆ ನಾಯಕ ಪಟ್ಟ ನೀಡುವ ಸಾಧ್ಯತೆಯಿದೆ ಎಂಬುದನ್ನು ಮೂಲಗಳು ತಿಳಿಸಿದ್ದವು.

ಆದರೆ ಆಯ್ಕೆ ಸಮಿತಿಯು ಎಲ್ಲ ಮೂರು ಪ್ರಕಾರಗಳಿಗೂ ವಿರಾಟ್ ಕೊಹ್ಲಿ ಅವರನ್ನೇ ನಾಯಕರನ್ನಾಗಿ ನೇಮಕಗೊಳಿಸಿತ್ತು. ಈ ಸಂಬಂಧ ಪ್ರಶ್ನೆಗಳು ಎದುರಾದಾಗ ಕೆಲಸದೊತ್ತಡಗಳ ಬಗ್ಗೆ ನನ್ನ ಬಳಿ ಯಾರು ಚರ್ಚಿಸಿಲ್ಲ. ಅವೆಲ್ಲವನ್ನು ನನ್ನ ಫಿಸಿಯೋ ನಿರ್ಧರಿಸುತ್ತಾರೆ ಎಂದು ಕೊಹ್ಲಿ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.

ನಮ್ಮ ವಿಶ್ರಾಂತಿ ಅವಧಿಯನ್ನು ದಾಖಲಾತಿ ಮಾಡಲಾಗುತ್ತದೆ. ಇವೆಲ್ಲವೂ ಇ-ಮೇಲ್ ಮೂಲಕ ಮಂಡಳಿಗೆ ಸಲ್ಲಿಸಲಾಗುತ್ತದೆ. ಹಾಗಾಗಿ ನನ್ನ ಬಗ್ಗೆ ಎಂತಹ ವರದಿ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಇನ್ನು ನನ್ನ ವಿಚಾರಕ್ಕೆ ಬಂದಾಗ ಟ್ರೈನರ್ ಅಥವಾ ಫಿಸಿಯೋ ಎಲ್ಲ ಪಂದ್ಯಗಳ ಡೇಟಾಗಳನ್ನು ಕಲೆ ಹಾಕಿ ನನ್ನ ಪ್ರಗತಿ ಹೀಗಿದೆ. ಹಾಗಾಗಿ ವಿಶ್ರಾಂತಿ ಪಡೆಯಬೇಕು ಎಂದು ಸೂಚಿಸುತ್ತಾರೆ. ಅಲ್ಲದೆ ಈ ಸಂಬಂಧ ಆಯ್ಕೆ ಸಮಿತಿಗೆ ಏನು ಸಂದೇಶ ರವಾನಸಿದ್ದಾರೆ ಗೊತ್ತಿಲ್ಲ. ಹಾಗೆಯೇ ವಿಶ್ರಾಂತಿ ಸಂಬಂಧ ನನ್ನ ಬಳಿಯೂ ಏನನ್ನು ಚರ್ಚಿಸಿಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲದೆ ವಿಶ್ವಕಪ್ ಸೋಲಿನ ಈ ಸಂದರ್ಭದಲ್ಲಿ ತಂಡವನ್ನು ಪುನರ್ ರಚಿಸಲು ತಮ್ಮ ಸಾನಿಧ್ಯ ಹೆಚ್ಚು ಅಗತ್ಯವಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌