ಆ್ಯಪ್ನಗರ

Rishabh Pant:'ನನ್ನನ್ನು ಕ್ಷಮಿಸಿ' -ರಿಷಭ್‌ ಪಂತ್ ಜೊತೆಗಿನ ವಿವಾದಕ್ಕೆ ತೆರೆ ಎಳೆದ ಊರ್ವಶಿ ರೌಟೇಲಾ!

Urvashi Rautela say sorry to Rishabh Pant: ಕಳೆದ ಹಲವು ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ಟೀಮ್‌ ಇಂಡಿಯಾ ಕ್ರಕೆಟರ್‌ ರಿಷಭ್‌ ಪಂತ್‌ ಹಾಗೂ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಅವರ ನಡುವೆ ಸಮರ ನಡೆದಿತ್ತು. ಇತ್ತೀಚೆಗೆ ಇನ್‌ಸ್ಟಾಂಟ್‌ ಬಾಲಿವುಡ್‌ ಜೊತೆ ಮಾತನಾಡಿದ್ದ ಊರ್ವಶಿ ರೌಟೇಲಾ ತಮ್ಮ ನಡುವಣ ವಿವಾದದ ಬಗ್ಗೆ ರಿಷಭ್‌ ಪಂತ್‌ ಬಳಿ ಕ್ಷಮೆಯಾಚಿಸಿದ್ದಾರೆ. ಆ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಇತ್ತೀಚೆಗೆ ಮುಕ್ತಾಯವಾಗಿದ್ದ 2022ರ ಏಷ್ಯಾ ಕಪ್‌ ಟೂರ್ನಿಯ ವೇಳೆ ಊರ್ವಶಿ ರೌಟೇಲಾ ಕಾಣಿಸಿಕೊಂಡಿದ್ದರು.

Authored byರಮೇಶ ಕೋಟೆ | Vijaya Karnataka Web 13 Sep 2022, 9:42 pm

ಹೈಲೈಟ್ಸ್‌:

  • ಟೀಮ್‌ ಇಂಡಿಯಾ ಕ್ರಿಕೆಟಿಗ ರಿಷಭ್‌ ಪಂತ್‌ ಅವರಿಗೆ ಕ್ಷಮೆಯಾಚಿಸಿದ ಊರ್ವಶಿ ರೌಟೇಲಾ.
  • ಬಾಲಿವುಡ್‌ ನಟಿ ಕ್ಷಮೆಯಾಚಿಸುವ ಬಗ್ಗೆ ಇವರಿಬ್ಬರ ನಡುವಣ ವಿವಾದ ಅಂತ್ಯವಾಯಿತು.
  • ಕಳೆದ ಹಲವು ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ಸಮರ ಸಾರಿದ್ದ ಜೋಡಿ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Rishabh pant-Urvashi Rautela
ರಿಷಭ್‌ ಪಂತ್‌-ಊರ್ವಶಿ ರೌಟೇಲಾ (ಚಿತ್ರ: ಟ್ವಿಟರ್‌, ಊರ್ವಶಿ ರೌಟೇಲಾ ಇನ್‌ಸ್ಟಾಗ್ರಾಮ್‌)
ಹೊಸದಿಲ್ಲಿ: ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ, ರಿಷಭ್‌ ಪಂತ್‌ ಬಳಿ ಕ್ಷಮೆಯಾಚಿಸಿದ್ದಾರೆ. ಆ ಮೂಲಕ ಕಳೆದ ಹಲವು ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚಗೆ ಗ್ರಾಸವಾಗಿದ್ದ ಇವರಿಬ್ಬರ ನಡುವಣ ವಿವಾದ ಅಂತ್ಯವಾಗಿದೆ.
ಹಲವು ದಿನಗಳ ಹಿಂದೆ ಬಾಲಿವುಡ್ ಹಂಗಾಮ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಊರ್ವಶಿ ರೌಟೇಲಾ ಅವರು ಮಿಸ್ಟರ್‌ ಆರ್‌ಪಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಿಷಭ್‌ ಪಂತ್‌ ಅವರ ಹೆಸರನ್ನು ಬಳಸಿಕೊಂಡಿದ್ದರು. ಇದರಿಂದ ಕೋಪಗೊಂಡಿದ್ದ ರಿಷಭ್‌ ಪಂತ್‌, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿಯಲ್ಲಿ ಕಿಡಿ ಕಾರಿದ್ದರು. ಈ ವೇಳೆ ಇವರಿಬ್ಬರ ನಡುವೆ ಸೋಶಿಯಲ್‌ ಮೀಡಿಯಾದಲ್ಲಿ ಸಮರ ನಡೆದಿತ್ತು.

"ವಾರಣಾಸಿಯಲ್ಲಿ ಶೂಟಿಂಗ್‌ನಲ್ಲಿದ್ದೆ. ಇದಾದ ಬಳಿಕ ದಿಲ್ಲಿಯಲ್ಲಿದ್ದ ಶೋವೊಂದಕ್ಕೆ ನಾನು ತೆರಳಬೇಕಿತ್ತು. ಅದರಂತೆ ವಾರಣಾಸಿಯಿಂದ ದಿಲ್ಲಿಗೆ ನೇರವಾಗಿ ಪ್ರಯಾಣ ಬೆಳೆಸಿದ್ದೆ. ಹೊಸದಿಲ್ಲಿಯಲ್ಲಿ ಒಂದು ದಿನ ಪೂರ್ತಿ ಶೂಟಿಂಗ್‌ ಇತ್ತು ಹಾಗೂ 10 ಗಂಟೆಗಳ ಕಾಲ ಹಿಂದಕ್ಕೆ ಮರಳಿದ ನಾನು ಮತ್ತೊಮ್ಮೆ ರೆಡಿಯಾಗಬೇಕಿತ್ತು. ನಿಮಗೂ ಗೊತ್ತಿರುವಂತೆ ರೆಡಿಯಾಗಲು ಹುಡುಗಿಯರು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಾರೆ. ಈ ವೇಳೆ ಮಿಸ್ಟರ್‌ ಆರ್‌ಪಿ ಬಂದು ಕುಳಿತುಕೊಂಡರು ಹಾಗೂ ನನ್ನನ್ನು ಭೇಟಿಯಾಗಲು ಕಾಯುತ್ತಿದ್ದರು. ಆ ವೇಳೆ ನಾನು ತುಂಬಾ ದಣಿದಿದ್ದೆ. ಇದರಿಂದಾಗಿ ನಿದ್ರೆಗೆ ಜಾರಿದ್ದೆ. ಈ ವೇಳೆ ತುಂಬಾ ಕರೆಗಳು ಬಂದಿದ್ದವು ಎಂದು ನನಗೆ ಅರಿವಾಗಿರಲಿಲ್ಲ," ಎಂದು ಹೇಳಿಕೊಂಡಿದ್ದರು.

Rishabh Pant: 'ಅಕ್ಕಾ ನನ್ನನ್ನು ಬಿಟ್ಟುಬಿಡಿ', ಊರ್ವಶಿ ಕಾಟಕ್ಕೆ ರಿಷಭ್ ಪಂತ್‌ ಕೊಟ್ಟ ಪಂಚ್!
"ನಿದ್ರೆಯಿಂದ ಎಚ್ಚರವಾದ ಬಳಿಕ ನನ್ನ ಫೋನ್‌ಗೆ 16-17 ಮಿಸ್‌ ಕಾಲ್‌ಗಳು ಬಂದಿರುವುದನ್ನು ನೋಡಿದೆ. ನನಗೋಸ್ಕರ ಒಬ್ಬರು ತುಂಬಾ ಸಮಯ ಕಾದಿದ್ದರೂ, ನಾನು ಅವರನ್ನು ಭೇಟಿಯಾಗಲಿಲ್ಲ. ಇದಕ್ಕೆ ನನಗೆ ಬೇಸರವಾಯಿತು. ಯಾರನ್ನಾದರೂ ತುಂಬಾ ಕಾಯಿಸಲು ಹುಡುಗಿಯರು ಇಷ್ಟಪಡುವುದಿಲ್ಲ. ಹಾಗಾಗಿ, ಮುಂಬೈಗೆ ಬಂದಾಗ ಭೇಟಿಯಾಗೋಣ ಎಂದು ನಾನು ಅವರಿಗೆ ಹೇಳಿದ್ದೆ," ಎಂದು ಊರ್ವಶಿ ರೌಟೇಲಾ ಹಿಂದಿನ ಘಟನೆಯನ್ನು ಸಂದರ್ಶನದಲ್ಲಿ ಮೆಲುಕು ಹಾಕಿದ್ದರು.

View this post on Instagram A post shared by Instant Bollywood (@instantbollywood)

ಇದರಿಂದ ಕೋಪಗೊಂಡ ರಿಷಭ್‌ ಪಂತ್‌, "ಸಂದರ್ಶನಗಳಲ್ಲಿ ಜನ ಸುಳ್ಳು ಹೇಳುವುದನ್ನು ನೋಡಿದರೆ ಬಹಳಾ ತಮಾಷೆಯಂತೆ ಕಾಣುತ್ತದೆ. ಪುಕ್ಕಟೆ ಪ್ರಚಾರ ಮತ್ತು ಮಾಧ್ಯಮಗಳಲ್ಲಿನ ಹೆಡ್‌ಲೈನ್‌ ಸಲುವಾಗಿ ಇಷ್ಟೆಲ್ಲಾ. ಹೆಸರು ಮತ್ತು ಕೀರ್ತಿಗಾಗಿ ಜನ ಏನೆಲ್ಲಾ ಮಾಡುತ್ತಾರೆಂದು ತಿಳಿದು ಬಹಳಾ ಬೇಸರವಾಗಿದೆ. ಅವರಿಗೆ ದೇವರು ಒಳ್ಳೆಯದ್ದನ್ನೇ ಮಾಡಲಿ. #ಮೇರಾ ಪೀಚಾ ಚೋರೊ ಬೆಹೆನ್‌ (ನನ್ನನ್ನು ಬಿಟ್ಟು ಬಿಡಿ ಅಕ್ಕಾ) #ಜೂಟ್‌ ಕೀ ಭೀ ಲಿಮಿಟ್‌ ಹೋತಿ ಹೇ (ಸುಳ್ಳಿಗೂ ಒಂದು ಮಿತಿಯಿದೆ)," ಎಂದು ರಿಷಭ್ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಈ ರೀತಿ ಬರೆದು ನಂತರ ಅದನ್ನು ಡಿಲೀಟ್‌ ಮಾಡಿದ್ದರು ಎನ್ನಲಾಗುತ್ತಿತ್ತು.
India Squad for T20 World cup: ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ, ರವೀಂದ್ರ ಜಡೇಜಾ ಔಟ್‌!
ಇತ್ತೀಚೆಗೆ ಇನ್‌ಸ್ಟಾಂಟ್‌ ಬಾಲಿವುಡ್‌ ಸಂದರ್ಶನದಲ್ಲಿ ಭಾಗವಹಿಸಿದ್ದ ಊರ್ವಶಿ ರೌಟೇಲಾಗೆ ರಿಷಭ್‌ ಪಂತ್‌ ಅವರಿಗೆ ಏನಾದರೂ ಸಂದೇಶ ಕಳುಹಿಸಿ ಎಂದು ಕೇಳಲಾಯಿತು. ಈ ವೇಳೆ ಬಾಲಿವುಡ್‌ ನಟಿ ಸ್ವಲ್ಪ ಗಲಿಬಿಲಿಯಾದರು. ನಂತರ," ಏನೆಲ್ಲಾ ನಾನು ಹೇಳಬೇಕೆಂದಿದ್ದೇನೆಂದರೆ.. ಏನು ಹೇಳಬೇಕು? ಏನು ಹೇಳಬೇಕೋ ನನಗೆ ಗೊತ್ತಾಗುತ್ತಿಲ್ಲ. ಕ್ಷಮಿಸಿ. ನನ್ನನ್ನು ಕ್ಷಮಿಸಿ," ಎಂದು ರಿಷಭ್‌ ಪಂತ್‌ಗೆ ಊರ್ವಶಿ ರೌಟೇಲಾ ಕೈಮುಗಿದು ಕ್ಷಮೆಯಾಚಿಸಿದರು.

ಊರ್ವಶಿ ರೌಟೇಲಾ ಇದೀಗ ಕ್ಷಮೆಯಾಚಿಸಿರುವುದರಿಂದ ಇದೀಗ ಚೆಂಡು ರಿಷಭ್‌ ಪಂತ್‌ ಅವರ ಅಂಗಣದಲ್ಲಿದೆ. ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದ್ದಾರೆಂದು ಕಾದು ನೋಡಬೇಕಾಗಿದೆ. ಅಂದಹಾಗೆ ಸೋಶಿಯಲ್‌ ಮೀಡಿಯಾದಲ್ಲಿ ಈ ಜೋಡಿಯ ಬಗ್ಗೆ ಇದೀಗ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌