ಆ್ಯಪ್ನಗರ

ಮ್ಯಾಥ್ಯೂಸ್ ಬಲಿಪಶು; ಚಂದಿಮಾಲ್ ಲಂಕಾ ನೂತನ ಸಾರಥಿ

ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ಕಿಡಿಕಾರಿದ ಮ್ಯಾಥ್ಯೂಸ್

TOI.in 27 Sep 2018, 12:01 pm
ಕೊಲಂಬೊ: ಕಳೆದೊಂದು ವರ್ಷದಲ್ಲಿ ಶ್ರೀಲಂಕಾ ಕ್ರಿಕೆಟ್‌ನಲ್ಲಿ ಅನೇಕ ಬಾರಿ ನಾಯಕತ್ವ ಬದಲಾವಣೆಗಳು ಆಗಿವೆ. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಯುಎಇನಲ್ಲಿ ಸಾಗುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನೆಮೆಂಟ್‌ನಲ್ಲಿ ಕಳಪೆ ಪ್ರದರ್ಶನದ ಬೆನ್ನಲ್ಲೇ ಹಿರಿಯ ಅನುಭವಿ ಆಟಗಾರ ಆಂಗಲೋ ಮ್ಯಾಥ್ಯೂಸ್ ಅವರನ್ನು ನಾಯಕತ್ವದಿಂದ ಕೈಬಿಡಲಾಗಿದೆ.
Vijaya Karnataka Web angelo-mathews-01


ಹಾಗೆಯೇ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ದಿನೇಶ್ ಚಂದಿಮಾಲ್ ಅವರಿಗೆ ಕಪ್ತಾನಗಿರಿ ವಹಿಸಿಕೊಡಲಾಗಿದೆ.

ತಂಡದ ಕಳಪೆ ನಿರ್ವಹಣೆಗೆ ಮ್ಯಾಥ್ಯೂಸ್ ಅವರನ್ನು ಬೊಟ್ಟು ಮಾಡಲಾಗಿದ್ದು, ನಾಯಕತ್ವ ಸ್ಥಾನದಿಂದ ಕೆಳಗಿಳಿಸುವುದರ ಜೊತೆಗೆ ತಂಡದಿಂದಲೇ ಕೈಬಿಡಲಾಗಿದೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟ್ವೆಂಟಿ-20 ಸರಣಿಗೆ ಮ್ಯಾಥ್ಯೂಸ್ ಅವರನ್ನು ಪರಿಗಣಿಸಲಾಗಿಲ್ಲ. ಇದರೊಂದಿಗೆ 31ರ ಹರೆಯದ ಮ್ಯಾಥ್ಯೂಸ್ ಅವಕಾಶ ವಂಚಿತರಾಗಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ಕಿಡಿಕಾರಿರುವ ಮ್ಯಾಥ್ಯೂಸ್, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನ ವಿರುದ್ಧದ ಕಳಪೆ ಪ್ರದರ್ಶನಕ್ಕೆ ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಲಂಕಾ ತಂಡ ಇಂತಿದೆ: ದಿನೇಶ್ ಚಂದಿಮಾಲ್ (ನಾಯಕ), ಉಪುಲ್ ತರಂಗ, ಸದೀರ ಸಮರವಿಕ್ರಮ, ನಿರೋಶನ್ ಡಿಕ್‌ವೆಲ್ಲ, ಧನಂಜಯ ಡಿ ಸಿಲ್ವ, ದಸುನ್ ಶನಕ, ತಿಸಾರಾ ಪರೇರಾ, ಅಕಿಲ ಧನಂಜಯ, ದುಶ್ಮಂತ ಚಮೀರ, ಲಸಿತ್ ಮಾಲಿಂಗ, ಅಮಿಲ ಅಪೊನ್ಸೊ, ಲಕ್ಷನ್ ಸಂಡಕನ್, ನುವಾನ್ ಪ್ರದೀಪ್, ಕಸುನ್ ರಜಿತ ಮತ್ತು ಕುಸಾಲ್ ಪರೇರಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌