ಹೊಸದಿಲ್ಲಿ: ಭಾರತ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ಟೆಸ್ಟ್ ಕ್ರಿಕೆಟ್ಗಿಂತ ಸೀಮಿತ ಓವರ್ಗಳ ಸ್ವರೂಪದಲ್ಲಿ ಹೆಚ್ಚು ರನ್ ಗಳಿಸಿದ್ದಾರೆ. ಕಳೆದ ಆ.15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಅವರು ವಿದಾಯ ಘೋಷಿಸಿದ್ದರು. ಇತ್ತೀಚಿಗಿನ ಸಂದರ್ಶನದಲ್ಲಿ ಓಡಿಐ ಪದಾರ್ಪಣೆ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿ ಬೇಸರಗೊಂಡಿದ್ದ ನನ್ನನ್ನು ಅಂದಿನ ನಾಯಕ ರಾಹುಲ್ ದ್ರಾವಿಡ್ ಹೇಗೆ ಸಮಾಧಾನಗೊಳಿಸಿದರು ಹಾಗೂ ಪ್ರೇರೇಪಿಸಿದರು ಎಂಬ ಬಗ್ಗೆ ಸುರೇಶ್ ರೈನಾ ಸ್ಮರಿಸಿಕೊಂಡಿದ್ದಾರೆ.
2005ರಲ್ಲಿ ಶ್ರೀಲಂಕಾ ವಿರುದ್ಧ ದಂಬುಲ್ಲಾದಲ್ಲಿ ಸುರೇಶ್ ರೈನಾ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್ಮನ್ ಡಕ್ ಔಟಾಗಿದ್ದರು. ಈ ವೇಳೆ ಬೇಸರಗೊಂಡಿದ್ದ ರೈನಾ ಅವರ ಬಳಿ ತೆರಳಿ ರಾಹುಲ್ ದ್ರಾವಿಡ್ ಸಮಾಧಾನ ಪಡಿಸಿದ್ದರು.
ರೋಹಿತ್ ಶರ್ಮಾ ಸೇರಿದಂತೆ ಐವರು ಕ್ರೀಡಾಪಟುಗಳಿಗೆ 'ರಾಜೀವ್ ಗಾಂಧಿ ಖೇಲ್ ರತ್ನ' ಪುರಸ್ಕಾರ!
ಸತತವಾಗಿ ಮುಂದಿನ ಪಂದ್ಯಗಳಲ್ಲೂ ಡಕ್ ಔಟಾದರೂ ಪರವಾಗಿಲ್ಲ, ನೀವು ಅದ್ಭುತ ಫೀಲ್ಡರ್ ಹಾಗೂ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರತರಲು ಇದು ಅತ್ಯುತ್ತಮ ಸಮಯ ಎಂದು ಸುರೇಶ್ ರೈನಾಗೆ ದ್ರಾವಿಡ್ ಅಂದು ಹೇಳಿದ್ದರು.
"ರಾಹುಲ್ ಭಾಯ್.. ಅವರಿಂದ ತುಂಬಾ ಕಲಿತಿದ್ದೇನೆ. ದಂಬುಲ್ಲಾದಲ್ಲಿ ಶೂನ್ಯಕ್ಕೆ ಔಟ್ ಆದ ಬಳಿಕ ನನಗೆ ತುಂಬಾ ಬೇಸರವಾಯಿತು. ಆ ವೇಳೆ ಇರ್ಫಾನ್ ಪಠಾಣ್ ಹಾಗೂ ಧೋನಿ ಭಾಯ್ ಜತೆ ಮಾತನಾಡುತ್ತಿದ್ದೆ. ಆ ಮೇಲೆ ರಾಹುಲ್ ಭಾಯ್ ನನ್ನ ಬಳಿ ಬಂದು, 'ಏಕೆ ಬೇಸರಗೊಂಡಿರುವೆ? ಏನಾಯ್ತು? ನೋಡು.. ಮುಂದಿನ ಪಂದ್ಯದಲ್ಲಿಯೂ ಶೂನ್ಯಕ್ಕೆ ಔಟ್ ಆಗ್ತಿಯಾ? ಅದರ ಮುಂದಿನ ಪಂದ್ಯದಲ್ಲಿಯೂ ಡಕ್ ಔಟ್ ಆಗ್ತಿಯಾ'? ಎಂದರು. ಅದಕ್ಕೆ ನಾನು ಇಲ್ಲ ರಾಹುಲ್ ಬಾಯ್, ಆದರೆ ದೇಶದ ಪರ ಮೊದಲ ಬಾರಿ ಆಡಿದಾಗ ಶೂನ್ಯಕ್ಕೆ ಔಟ್ ಆಗಿದ್ದರಿಂದ ತುಂಬಾ ಬೇಸರವಾಯಿತು," ಎಂದು ಹೇಳಿದೆ.
ಟಿ20 ಟೀಮ್ಗೂ ಎಂಟ್ರಿ ಕೊಟ್ಟ ನಸೀಮ್.! : ಇಂಗ್ಲೆಂಡ್ ಚುಟುಕು ಸರಣಿಗೆ ಪಾಕಿಸ್ತಾನ ತಂಡ ಇಂತಿದೆ..
"ನನ್ನ ಕುಟುಂಬ ಹಾಗೂ ಸ್ನೇಹಿತರು ಪಂದ್ಯವನ್ನು ನೋಡುತ್ತಿದ್ದಾರೆ... ಅದಕ್ಕೆ ಅವರು, 'ನೋ, ನೀವು ಫೀಲ್ಡಿಂಗ್ ಚೆನ್ನಾಗಿ ಮಾಡುತ್ತೀರಿ ಎಂದು ಕೇಳಿದ್ದೇನೆ, ಮುಂದೆ ಬಂದು ಏನಾದರೂ ಮಾಡು... ಎಂದಿದ್ದರು.' ಆಗ ನಾನು ತಂಡದ ಭಾಗವಾಗಿದ್ದೇನೆ ಎಂದು ಅಂದುಕೊಂಡೆ ಹಾಗೂ ಅವರ ಹೇಳಿದಂತೆ ನಾನು ದೇಶಕ್ಕೆ ಏನಾದರೂ ಮಾಡಬೇಕು ಎಂದು ಅನಿಸಿತು."
ಅಂಗಳಕ್ಕೆ ಇಳಿದ ನಾನು ಶ್ರೀಲಂಕಾ ತಂಡದ ಅಟಪಟ್ಟು ಅವರನ್ನು ರನೌಟ್ ಮಾಡಿದೆ. ಆಗ ಜಹೀರ್ ಭಾಯ್ ಬಂದು ಅಪ್ಪಿಕೊಂಡರು ಜತೆಗೆ ರಾಹುಲ್ ಬಾಯ್ ಕೂಡ ತಬ್ಬಿಕೊಂಡರು. ಈ ಕುಟುಂಬದಲ್ಲಿ ದೀರ್ಘಕಾಲ ಕ್ರಿಕೆಟ್ ಆಡಬಲ್ಲೇ ಎಂದು ನನಗೆ ಆಗಲೇ ಅನಿಸಿತ್ತು. ಆ ದಿನಗಳು ನಿಜಕ್ಕೂ ಅದ್ಭುತವಾಗಿದ್ದವು ಹಾಗೂ ಮೋಜಿನಿಂದ ಕೂಡಿದ್ದವು," ಎಂದು ಸುರೇಶ್ ರೈನಾ ಪದಾರ್ಪಣೆ ಪಂದ್ಯವನ್ನು ಸ್ಮರಿಸಿಕೊಂಡರು.
' ಮುರಳಿಧರನ್ ಸ್ಪಿನ್ಗೆ ಆಡಲಾಗುತ್ತಿಲ್ಲ ಅವರ ಬೆರಳು ಮುರಿದು ಹಾಕಿ' : ಯೂಸಫ್ ಹೇಳಿದ್ದ ಮಾತನ್ನು ಸ್ಮರಿಸಿದ ಅಖ್ತರ್!
ಆ.15ರಂದು ಸಾತಂತ್ರ್ಯ ದಿನಾಚರಣೆಯ ದಿನದಂದು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದ ಬೆನ್ನಲ್ಲೆ ಸುರೇಶ್ ರೈನಾ ನಿವೃತ್ತಿ ಪ್ರಕಟಿಸಿದ್ದರು. ಎಡಗೈ ಬ್ಯಾಟ್ಸ್ಮನ್ ಚೆನ್ನೈ ಸೂಪರ್ ಕಿಂಗ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮ್ಮ ಆಟವನ್ನು ಮುಂದುವರಿಸಲಿದ್ದಾರೆ.
2005ರಲ್ಲಿ ಶ್ರೀಲಂಕಾ ವಿರುದ್ಧ ದಂಬುಲ್ಲಾದಲ್ಲಿ ಸುರೇಶ್ ರೈನಾ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್ಮನ್ ಡಕ್ ಔಟಾಗಿದ್ದರು. ಈ ವೇಳೆ ಬೇಸರಗೊಂಡಿದ್ದ ರೈನಾ ಅವರ ಬಳಿ ತೆರಳಿ ರಾಹುಲ್ ದ್ರಾವಿಡ್ ಸಮಾಧಾನ ಪಡಿಸಿದ್ದರು.
ರೋಹಿತ್ ಶರ್ಮಾ ಸೇರಿದಂತೆ ಐವರು ಕ್ರೀಡಾಪಟುಗಳಿಗೆ 'ರಾಜೀವ್ ಗಾಂಧಿ ಖೇಲ್ ರತ್ನ' ಪುರಸ್ಕಾರ!
ಸತತವಾಗಿ ಮುಂದಿನ ಪಂದ್ಯಗಳಲ್ಲೂ ಡಕ್ ಔಟಾದರೂ ಪರವಾಗಿಲ್ಲ, ನೀವು ಅದ್ಭುತ ಫೀಲ್ಡರ್ ಹಾಗೂ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರತರಲು ಇದು ಅತ್ಯುತ್ತಮ ಸಮಯ ಎಂದು ಸುರೇಶ್ ರೈನಾಗೆ ದ್ರಾವಿಡ್ ಅಂದು ಹೇಳಿದ್ದರು.
"ರಾಹುಲ್ ಭಾಯ್.. ಅವರಿಂದ ತುಂಬಾ ಕಲಿತಿದ್ದೇನೆ. ದಂಬುಲ್ಲಾದಲ್ಲಿ ಶೂನ್ಯಕ್ಕೆ ಔಟ್ ಆದ ಬಳಿಕ ನನಗೆ ತುಂಬಾ ಬೇಸರವಾಯಿತು. ಆ ವೇಳೆ ಇರ್ಫಾನ್ ಪಠಾಣ್ ಹಾಗೂ ಧೋನಿ ಭಾಯ್ ಜತೆ ಮಾತನಾಡುತ್ತಿದ್ದೆ. ಆ ಮೇಲೆ ರಾಹುಲ್ ಭಾಯ್ ನನ್ನ ಬಳಿ ಬಂದು, 'ಏಕೆ ಬೇಸರಗೊಂಡಿರುವೆ? ಏನಾಯ್ತು? ನೋಡು.. ಮುಂದಿನ ಪಂದ್ಯದಲ್ಲಿಯೂ ಶೂನ್ಯಕ್ಕೆ ಔಟ್ ಆಗ್ತಿಯಾ? ಅದರ ಮುಂದಿನ ಪಂದ್ಯದಲ್ಲಿಯೂ ಡಕ್ ಔಟ್ ಆಗ್ತಿಯಾ'? ಎಂದರು. ಅದಕ್ಕೆ ನಾನು ಇಲ್ಲ ರಾಹುಲ್ ಬಾಯ್, ಆದರೆ ದೇಶದ ಪರ ಮೊದಲ ಬಾರಿ ಆಡಿದಾಗ ಶೂನ್ಯಕ್ಕೆ ಔಟ್ ಆಗಿದ್ದರಿಂದ ತುಂಬಾ ಬೇಸರವಾಯಿತು," ಎಂದು ಹೇಳಿದೆ.
ಟಿ20 ಟೀಮ್ಗೂ ಎಂಟ್ರಿ ಕೊಟ್ಟ ನಸೀಮ್.! : ಇಂಗ್ಲೆಂಡ್ ಚುಟುಕು ಸರಣಿಗೆ ಪಾಕಿಸ್ತಾನ ತಂಡ ಇಂತಿದೆ..
"ನನ್ನ ಕುಟುಂಬ ಹಾಗೂ ಸ್ನೇಹಿತರು ಪಂದ್ಯವನ್ನು ನೋಡುತ್ತಿದ್ದಾರೆ... ಅದಕ್ಕೆ ಅವರು, 'ನೋ, ನೀವು ಫೀಲ್ಡಿಂಗ್ ಚೆನ್ನಾಗಿ ಮಾಡುತ್ತೀರಿ ಎಂದು ಕೇಳಿದ್ದೇನೆ, ಮುಂದೆ ಬಂದು ಏನಾದರೂ ಮಾಡು... ಎಂದಿದ್ದರು.' ಆಗ ನಾನು ತಂಡದ ಭಾಗವಾಗಿದ್ದೇನೆ ಎಂದು ಅಂದುಕೊಂಡೆ ಹಾಗೂ ಅವರ ಹೇಳಿದಂತೆ ನಾನು ದೇಶಕ್ಕೆ ಏನಾದರೂ ಮಾಡಬೇಕು ಎಂದು ಅನಿಸಿತು."
ಅಂಗಳಕ್ಕೆ ಇಳಿದ ನಾನು ಶ್ರೀಲಂಕಾ ತಂಡದ ಅಟಪಟ್ಟು ಅವರನ್ನು ರನೌಟ್ ಮಾಡಿದೆ. ಆಗ ಜಹೀರ್ ಭಾಯ್ ಬಂದು ಅಪ್ಪಿಕೊಂಡರು ಜತೆಗೆ ರಾಹುಲ್ ಬಾಯ್ ಕೂಡ ತಬ್ಬಿಕೊಂಡರು. ಈ ಕುಟುಂಬದಲ್ಲಿ ದೀರ್ಘಕಾಲ ಕ್ರಿಕೆಟ್ ಆಡಬಲ್ಲೇ ಎಂದು ನನಗೆ ಆಗಲೇ ಅನಿಸಿತ್ತು. ಆ ದಿನಗಳು ನಿಜಕ್ಕೂ ಅದ್ಭುತವಾಗಿದ್ದವು ಹಾಗೂ ಮೋಜಿನಿಂದ ಕೂಡಿದ್ದವು," ಎಂದು ಸುರೇಶ್ ರೈನಾ ಪದಾರ್ಪಣೆ ಪಂದ್ಯವನ್ನು ಸ್ಮರಿಸಿಕೊಂಡರು.
' ಮುರಳಿಧರನ್ ಸ್ಪಿನ್ಗೆ ಆಡಲಾಗುತ್ತಿಲ್ಲ ಅವರ ಬೆರಳು ಮುರಿದು ಹಾಕಿ' : ಯೂಸಫ್ ಹೇಳಿದ್ದ ಮಾತನ್ನು ಸ್ಮರಿಸಿದ ಅಖ್ತರ್!
ಆ.15ರಂದು ಸಾತಂತ್ರ್ಯ ದಿನಾಚರಣೆಯ ದಿನದಂದು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದ ಬೆನ್ನಲ್ಲೆ ಸುರೇಶ್ ರೈನಾ ನಿವೃತ್ತಿ ಪ್ರಕಟಿಸಿದ್ದರು. ಎಡಗೈ ಬ್ಯಾಟ್ಸ್ಮನ್ ಚೆನ್ನೈ ಸೂಪರ್ ಕಿಂಗ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮ್ಮ ಆಟವನ್ನು ಮುಂದುವರಿಸಲಿದ್ದಾರೆ.