ಆ್ಯಪ್ನಗರ

ವಿಶ್ವಕಪ್ ಮನದಲ್ಲಿಲ್ಲ, ಸವಾಲುಗಳಿಗೆ ಸಿದ್ಧ: ಶಂಕರ್

ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲೂ ಎಂಟು ರನ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಮಹತ್ವದ ಮುನ್ನಡೆ ಕಾಯ್ದುಕೊಂಡಿದೆ.

Vijaya Karnataka Web 6 Mar 2019, 10:34 am
ನಾಗ್ಪುರ: ಕೊನೆಯ ಓವರ್‌ನಲ್ಲಿ ಎರಡು ವಿಕೆಟ್ ಬಾಕಿ ಉಳಿದಿರುವಂತೆಯೇ ಆಸೀಸ್ ಗೆಲುವಿಗೆ 11 ರನ್‌ಗಳ ಅವಶ್ಯಕತೆಯಿತ್ತು. ಈ ಸಂದರ್ಭದಲ್ಲಿ ದಾಳಿಗಿಳಿದ ವಿಜಯ್ ಶಂಕರ್, ಸೆಟ್ ಬ್ಯಾಟ್ಸ್‌ಮನ್ ಮಾರ್ಕಸ್ ಸ್ಟೋಯ್ನಿಸ್ ಜತೆಗೆ ಎರಡು ಪ್ರಮುಖ ವಿಕೆಟುಗಳನ್ನು ಕಬಳಿಸುವ ಮೂಲಕ ಭಾರತಕ್ಕೆ ಎಂಟು ರನ್‌ಗಳ ಮಹತ್ವದ ವಿಜಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.
Vijaya Karnataka Web vijay-shankar


ಇದರೊಂದಿಗೆ ವಿಜಯ್ ಶಂಕರ್ ಮುಂಬರುವ ವಿಶ್ವಕಪ್‌ಗಾಗಿನ ಭಾರತದ ಆಲ್‌ರೌಂಡರ್ ರೇಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ತಾವು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾವುದೇ ಸವಾಲುಗಳನ್ನು ಸ್ವೀಕರಿಸಲು ಮಾತ್ರ ಸಜ್ಜಾಗಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನು ಹಿಂದೆಯೂ ವಿಶ್ವಕಪ್ ಆಯ್ಕೆ ಬಗ್ಗೆ ಚಿಂತಿಸಿಲ್ಲ. ಯಾಕೆಂದರೆ ವಿಶ್ವಕಪ್‌ಗಿನ್ನು ಸಾಕಷ್ಟು ದೂರವಿದೆ. ಪ್ರತಿಯೊಂದು ಪಂದ್ಯವು ನನ್ನ ಪಾಲಿಗೆ ಮುಖ್ಯ. ಹಾಗೆಯೇ ತಂಡಕ್ಕಾಗಿ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಎಂದರು.

ಬ್ಯಾಟಿಂಗ್‌ನಲ್ಲೂ ಮಿಂಚಿದ ಶಂಕರ್ 41 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದ್ದರು. ಅಲ್ಲದೆ ನಾಯಕ ವಿರಾಟ್ ಕೊಹ್ಲಿ ಜತೆಗೆ ನಾಲ್ಕನೇ ವಿಕೆಟ್‌ಗೆ 81 ರನ್‌ಗಳ ಮಹತ್ವದ ಜತೆಯಾಟದಲ್ಲಿ ಭಾಗಿಯಾಗಿದ್ದರು.

ಅದೇ ಹೊತ್ತಿಗೆ ಶ್ರೀಲಂಕಾದಲ್ಲಿ ನಡೆದ ನಿಧಹಸ್ ಟ್ರೋಫಿಯಲ್ಲಿನ ವೈಫಲ್ಯವು ತನ್ನ ಪಾಲಿಗೆ ಕಲಿಕಾ ಪಾಠವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಿಧಹಸ್ ಟ್ರೋಫಿ ಅನೇಕ ಪಾಠಗಳನ್ನು ಕಲಿಸಿದೆ. ಅಲ್ಲಿಂದ ಬಳಿಕ ನ್ಯೂಟ್ರಲ್ ಆಗಿರಲು ನೆರವಾಗಿತು. ಇಂತಹ ಪರಿಸ್ಥಿತಿಯಲ್ಲಿ ಜಾಸ್ತಿ ಚಿಂತನೆ ಮಾಡದೆ ತಾಳ್ಮೆಯಂದಿರಲು ಬಯಸುತ್ತೇನೆ ಎಂದರು.

ಕೊನೆಯಲ್ಲಿ ಒಂದು ಓವರ್ ನಾನು ಮಾಡಬೇಕೆಂಬುದು ತಿಳಿದಿತ್ತು. ಹಾಗಾಗಿ ಸವಾಲುಗಳಿಗೆ ಸಜ್ಜಾಗಿದ್ದೆ. ಯಾವುದೇ ಟಾರ್ಗೆಟ್ ಇದ್ದರೂ ಡಿಫೆಂಡ್ ಮಾಡಲು ಮಾನಸಿಕವಾಗಿ ಸಿದ್ಧತೆ ನಡೆಸಿದ್ದೆ ಎಂದರು.

ವಿಕೆಟ್ ಟು ವಿಕೆಟ್ ದಾಳಿ ನಡೆಸಿದರೆ ವಿಕೆಟ್ ಪಡೆಯುವ ಸಾಧ್ಯತೆ ಜಾಸ್ತಿಯಾಗಿದ್ದರಿಂದ ಅದೇ ತಂತ್ರವನ್ನೇ ಪ್ರಯೋಗ ಮಾಡಿದೆ ಎಂದು ಸೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌