ಆ್ಯಪ್ನಗರ

ಗಂಭೀರ್ ಆಪ್ತ ಗೆಳೆಯರು ಯಾರೆಲ್ಲ?

ಭಾರತದ ಎಡಗೈ ಓಪನರ್ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದಿಂದ ಹೊರಗಟ್ಟಲು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕಾರಣ ಎಂಬ ಆರೋಪವಿದೆ.

Times Now 15 Oct 2017, 3:05 pm
ಹೊಸದಿಲ್ಲಿ: ಭಾರತದ ಎಡಗೈ ಓಪನರ್ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದಿಂದ ಹೊರಗಟ್ಟಲು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕಾರಣ ಎಂಬ ಆರೋಪವಿದೆ.
Vijaya Karnataka Web i share a great relationship with virender sehwag yuvraj singh ishant sharma gautam gambhir
ಗಂಭೀರ್ ಆಪ್ತ ಗೆಳೆಯರು ಯಾರೆಲ್ಲ?


ಈ ಹಿದೆ ಧೋನಿ ಬಗ್ಗೆ ಗಂಭೀರ್ ನೀಡಿರುವ ಕೆಲವೊಂದು ಹೇಳಿಕೆಯು ಇದಕ್ಕೆ ಪುಷ್ಠಿ ನೀಡುತ್ತಿದ್ದವು. ಇದೀಗ 36ನೇ ವರ್ಷಕ್ಕೆ ಕಾಲಿರಿಸಿರುವ ಗೌತಿ, ತಮ್ಮ ಆಪ್ತ ಸ್ನೇಹಿತರ ಬಗ್ಗೆ ವಿವರವನ್ನು ಬಹಿರಂಗಪಡಿಸಿದ್ದಾರೆ.

ಟೀಮ್ ಇಂಡಿಯಾ ಆಟಗಾರರ ಪೈಕಿ ಯಾರೆಲ್ಲ ಆಪ್ತರು ಎಂಬುದನ್ನು ಗಂಭೀರ್ ವಿವರಿಸಿದ್ದಾರೆ. ಮಾಜಿ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ಇಶಾಂತ್ ಶರ್ಮಾ ಜತೆ ಉತ್ತಮ ಗೆಳೆತನ ಕಾಪಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಅಚ್ಚರಿಯೆಂಬಂತೆ ಇಲ್ಲೆಲ್ಲೂ ಧೋನಿ ಹೆಸರು ಕೇಳಿ ಬಂದಿಲ್ಲ. ನಾನು ವೀರು ಜತೆ ಸಾಕಷ್ಟು ಸಮಯ ಕಳೆಯುತ್ತೇನೆ. ನಿಸ್ಸಂಶಯವಾಗಿಯೂ ಇಶಾಂತ್ ಅತ್ಯುತ್ತಮ ಗೆಳೆಯ, ಮುನಾಫ್ ಪಟೇಲ್ ಹಾಗೂ ಅಮಿತ್ ಮಿಶಾ ಜತೆಗೂ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದ್ದಾರೆ. ನಾವು ಜತೆಗೆ ಆಡುವಾಗ ಯುವಿ ಜತೆಗೂ ಹೆಚ್ಚು ಸಮಯ ಕಳೆದಿದ್ದೇನೆ. ನಾವೆಲ್ಲರೂ ಏಳು-ಬೀಳುಗಳನ್ನು ಜತೆಯಾಗಿ ಆನಂದಿಸಿರುವುದಾಗಿ ಸೇರಿಸಿದರು.

2007 ಟ್ವೆಂಟಿ-20 ಮತ್ತು 2011 ವಿಶ್ವಕಪ್ ಗೆಲುವು ನಮ್ಮೆಲ್ಲರ ಪಾಲಿಗೆ ಶ್ರೇಷ್ಠ ಕ್ಷಣವಾಗಿದೆ. ಹಾಗೆಯೇ ಇಂಗ್ಲೆಂಡ್ ವಿರುದ್ಧ ವೈಟ್‌ವಾಶ್‌ಗೆ ಗುರಿಯಾಗಿರುವುದು ಕೆಟ್ಟ ನೆನಪಾಗಿದೆ. ನಾವೆಲ್ಲರೂ ನಿವೃತ್ತಿಯಾದಾಗ ನೆನಪುಗಳು ಮಾತ್ರ ಶಾಶ್ವತವಾಗಿ ಉಳಿಯಲಿದೆ ಎಂದರು.

ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ನಡೆಸಿರುವ ಸಂದರ್ಶನದ ಪೂರ್ಣ ರೂಪ ಇಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌