ಆ್ಯಪ್ನಗರ

ಫೆಡರರ್-ನಡಾಲ್ ಭಾವನೆ ಅರ್ಥವಾಗಿದೆ: ಸಚಿನ್ ತೆಂಡೂಲ್ಕರ್

ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಮೆಂಟ್‌ನ ಫೈನಲ್ ಪಂದ್ಯದಲ್ಲಿ ಸಮಕಾಲೀನ ಟೆನಿಸ್ ಜಗತ್ತಿನ ಎರಡು ಪ್ರಮುಖ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದ್ದರು. ಅಂತಿಮವಾಗಿ ಸ್ಪೇನ್‌ನ ರಾಫೆಲ್ ನಡಾಲ್ ಅವರನ್ನು ಮಣಿಸಿದ್ದ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ 18ನೇ ಗ್ರ್ಯಾನ್ ಸ್ಲಾಮ್ ಕಿರೀಟವನ್ನು ಧರಿಸಿದ್ದರು.

ಟೈಮ್ಸ್ ಆಫ್ ಇಂಡಿಯಾ 31 Jan 2017, 6:13 pm
ಮುಂಬಯಿ: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಫೈನಲ್ ಪಂದ್ಯದಲ್ಲಿ ಸಮಕಾಲೀನ ಟೆನಿಸ್ ಜಗತ್ತಿನ ಎರಡು ದಿಗ್ಗಜ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದ್ದರು. ಅಂತಿಮವಾಗಿ ಸ್ಪೇನ್‌ನ ರಾಫೆಲ್ ನಡಾಲ್ ಅವರನ್ನು ಮಣಿಸಿದ್ದ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ 18ನೇ ಗ್ರ್ಯಾನ್ ಸ್ಲಾಮ್ ಕಿರೀಟವನ್ನು ಧರಿಸಿದ್ದರು.
Vijaya Karnataka Web i understand what federer nadal felt in australian open final sachin
ಫೆಡರರ್-ನಡಾಲ್ ಭಾವನೆ ಅರ್ಥವಾಗಿದೆ: ಸಚಿನ್ ತೆಂಡೂಲ್ಕರ್


ಈ ಬಗ್ಗೆ ಟೆನಿಸ್ ಕ್ರೀಡೆಯ ಅಭಿಮಾನಿ ಆಗಿರುವ ದಿಗ್ಗಜ ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯನ್ ಓಪನ್ ಫೈನಲ್ ಪಂದ್ಯದಲ್ಲಿ ಫೆಡರರ್ ಹಾಗೂ ನಡಾಲ್ ಭಾವನೆ ಅರ್ಥವಾಗಿದೆ ಎಂದಿದ್ದಾರೆ.

ದೀರ್ಘಕಾಲದ ಬಳಿಕ ಫೆಡರರ್-ನಡಾಲ್ ಫೈನಲ್‌ನಲ್ಲಿ ಆಡುತ್ತಿದ್ದಾರೆ. ಇವರಿಬ್ಬರು ಇನ್ನೊಂದು ಬಾರಿ ಫೈನಲ್‌ಗೆ ಪ್ರವೇಶಿಸಲಿದ್ದಾರೆ ಎಂಬುದನ್ನು ಯಾರು ಅಂದುಕೊಂಡಿರಲ್ಲ. ಇವರಿಬ್ಬರ ಕ್ರೀಡಾ ಜೀವನ ಬಹುತೇಕ ಕಮರಿದೆ ಎಂದೇ ಭಾವಿಸಲಾಗಿತ್ತು.

ಆದರೆ ಟೆನಿಸ್ ಲೋಕವನ್ನು ನಿಬ್ಬೇರಗಾಗಿರಿದ ಫೆಡರರ್ ಹಾಗೂ ನಡಾಲ್ ಪುಟಿದೆದ್ದು ಬಂದಿದ್ದರು. ಇವರಿಬ್ಬರ ಕ್ರೀಡಾ ಜೀವನಕ್ಕೆ ಆಸ್ಟ್ರೇಲಿಯನ್ ಓಪನ್ ಪುನಶ್ಚೇತನ ನೀಡಿದೆ. ಆಸ್ಟ್ರೇಲಿಯನ್ ಓಪನ್ ಮೂಲಕ ಫೆಡರರ್ ದೀರ್ಘ ಕಾಲದ ಪ್ರಶಸ್ತಿ ಬರ ನೀಗಿಸಿಕೊಂಡರೆ ನಡಾಲ್ ಅವರು ಸತತ ಗಾಯದ ಸಮಸ್ಯೆಯ ಬಳಿಕ ಸ್ಪರ್ಧಾತ್ಮಕ ಕ್ರೀಡೆಗೆ ಮರಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲಿಟ್ಲ್ ಮಾಸ್ಟರ್, ನಾನು ಕೂಡಾ ಸಾಕಷ್ಟು ಗಾಯದ ಸಮಸ್ಯೆ ಎದುರಿಸಿದ್ದು, ಕಠಿಣ ಸಮಯದಿಂದ ಹಾದು ಹೋಗಿದ್ದೇನೆ. 2005-06ರ ಪ್ರತ್ರಿಕಾಗೋಷ್ಠಿಯೊಂದರಲ್ಲಿ ನಿವೃತ್ತಿಯ ಬಗ್ಗೆ ಪ್ರಶ್ನೆಗಳು ಎದಿದ್ದವು. ಆದರೆ ನನ್ನ ಅತ್ಯುತ್ತಮ ವರ್ಷಗಳು ತಾದ ನಂತರ ಬಂದಿದ್ದು, 2011 ವಿಶ್ವಕಪ್ ವಿಜಯ ಸೇರಿದಂತೆ ಜೀವನದ ಶ್ರೇಷ್ಠ ಕ್ಷಣಗಳು ಸಂಭವಿಸಿದೆ ಎಂದಿದ್ದಾರೆ.

ಇದನ್ನೇ ಉಲ್ಲೇಖಿಸಿರುವ ಸಚಿನ್, ಫೆಡರರ್ ಹಾಗೂ ನಡಾಲ್ ಭಾವನೆಗಳನ್ನು ತಿಳಿದುಕೊಂಡಿದ್ದೇನೆ. ಆಸ್ಟ್ರೇಲಿಯನ್ ಓಪನ್ ಬಳಿಕ ಮಾತನಾಡಿದ ಫೆಡರರ್ ಸಹ ಇದನ್ನೇ ತಿಳಿಸಿದ್ದು, ನಾನು ಹಾಗೂ ನಡಾಲ್ ಮಗದೊಮ್ಮೆ ಕೋರ್ಟ್‌ನಲ್ಲಿ ಎದುರು ಬದುರಾಗಿ ನಿಲ್ಲಲಿದ್ದೇವೆ ಎಂದು ಅಂದುಕೊಂಡಿರಲಿಲ್ಲ. ಆದರೆ ಇವೆಲ್ಲವೂ ಕ್ರೀಡೆಯನ್ನು ಆನಂದಿಸುವುದರಿಂದ ಸಾಧ್ಯವಾಗಿದೆ ಎಂದು ವಿವರಿಸಿದ್ದರು.

ಇದೇ ಸಂದರ್ಭದಲ್ಲಿ ತಾವು ರೋಜರ್ ಫೆಡರರ್ ಅವರ ನೆಚ್ಚಿನ ಅಭಿಮಾನಿಯಾಗಿದ್ದೇನೆ ಎಂದು ಲಿಟ್ಲ್ ಮಾಸ್ಟರ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌