ಆ್ಯಪ್ನಗರ

ವಿಜಯ್‌ಗೆ ವಿಶೇಷ ಅಭಿನಂದನೆ ಸಲ್ಲಿಸಿದ ವಿರಾಟ್

ಆಸ್ಟ್ರೇಲಿಯಾ ವಿರುದ್ಧ ನಾಗ್ಪುರ ಏಕದಿನ ಪಂದ್ಯದಲ್ಲಿ ದಾಖಲಾದ ಗೆಲುವಿನ ನಂತರ ಚಹಲ್ ಟಿವಿಗೆ ನೀಡಿದ ಸಂದರ್ಭದಲ್ಲಿ ಭಾರತ ನಾಯಕ ವಿರಾಟ್ ಕೊಹ್ಲಿ ಅವರು ಆಲ್‌ರೌಂಡರ್ ವಿಜಯ್ ಶಂಕರ್‌ನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ.

Vijaya Karnataka Web 6 Mar 2019, 4:23 pm
ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಎಂಟು ರನ್‌ಗಳ ಅಂತರದ ರೋಚಕ ಗೆಲುವಿನ ಬಳಿಕ ಚಹಲ್ ಟಿವಿಯಲ್ಲಿ ಆಲ್‌ರೌಂಡರ್ ವಿಜಯ್ ಶಂಕರ್ ಅವರಿಗೆ ನಾಯಕ ವಿರಾಟ್ ಕೊಹ್ಲಿ ವಿಶೇಷ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Vijaya Karnataka Web vijay-shankar


ಬಿಸಿಸಿಐ ಅಧಿಕೃತ ಪುಟದಲ್ಲಿ ಯುಜ್ವೇಂದ್ರ ಚಹಲ್ ನಡೆಸಿಕೊಡುವ ಚಹಲ್ ಟಿವಿ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿಜಯ್ ಸಾನಿಧ್ಯದಲ್ಲೇ ಯುವ ಆಟಗಾರನನ್ನು ಟೀಮ್ ಇಂಡಿಯಾ ನಾಯಕ ಕೊಂಡಾಡಿದರು.

ಅವರು ಬ್ಯಾಟಿಂಗ್ ಮತ್ತು ಕೊನೆ ಕ್ಷಣದಲ್ಲಿ ಬೌಲಿಂಗ್ ಮಾಡಿರುವುದಕ್ಕಾಗಿ ನಾನು ಈ ಕ್ಷಣದಲ್ಲಿ ವಿಜಯ್‌ಗೆ ವಿಶೇಷ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಅತಿ ಒತ್ತಡದಲ್ಲೂ ಅವರು ಅದ್ಭುತ ವ್ಯಕ್ತಿತ್ವವನ್ನು ತೋರ್ಪಡಿಸಿದ್ದಾರೆ ಎಂದರು.

ವಿಜಯ್ ಜತೆ ಅತ್ಯುತ್ತಮ ಜತೆಯಾಟವನ್ನು ಮಾಡಿದೆ. ವಿಜಯ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಅವರು ಜತೆಗಿರುವಾಗ 270 ರನ್ ಗಳಿಸಬಹುದು ಎಂದು ಅಂದುಕೊಂಡಿದ್ದೆ. ಆದರೆ ದುರದೃಷ್ಟವಶಾತ್ ರನೌಟ್‌ಗೆ ಬಲಿಯಾದರು. ಇದರಿಂದಾಗಿ ಗುರಿ ಮರು ನಿಗದಿಪಡಿಸಬೇಕಾಯಿತು ಎಂದರು.

ಏತನ್ಮಧ್ಯೆ ಫೈನಲ್ ಓವರ್ ಎಸೆಯಲು ತಾನು ಮಾನಸಿಕವಾಗಿ ಸಜ್ಜಾಗಿರುವುದಾಗಿ ವಿಜಯ್ ಹೇಳಿದರು. ನನಗೊಂದು ಯೋಜನೆಯಿತ್ತು. ಅದನ್ನು ಕಾರ್ಯಗತಗೊಳಿಸಲು ಯಶಸ್ವಿಯಾದೆ ಎಂದರು.

ಇನ್ನೊಂದೆಡೆ ಚೆಂಡು ರಿವರ್ಸ್ ಸ್ವಿಂಗ್‌ಗೆ ನೆರವು ನೀಡುತ್ತಿರುವ ಹಿನ್ನಲೆಯಲ್ಲಿ ಅಂತಿಮ ಓವರ್ ವಿಜಯ್‌ಗೆ ನೀಡಲು ನಿರ್ಧರಿಸಲಾಯಿತು ಎಂದು ಕೊಹ್ಲಿ ಗೇಮ್ ಪ್ಲ್ಯಾನ್ ಬಹಿರಂಗಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌