ಆ್ಯಪ್ನಗರ

ಯುವಿ ನಿವೃತ್ತಿ ಸನ್ನಿಹಿತ?

ಟೀಮ್ ಇಂಡಿಯಾದಿಂದ ಮಗದೊಮ್ಮೆ ಕಡೆಗಣಿಸಲ್ಪಟ್ಟಿರುವ ಹಿರಿಯ ಅನುಭವಿ ಎಡಗೈ ಆಲ್‌ರೌಂಡರ್ ಯುವರಾಜ್ ಸಿಂಗ್, 2019ರಲ್ಲಿ ತಮ್ಮ ಕ್ರಿಕೆಟ್ ಭವಿಷ್ಯದ ಕುರಿತಾಗಿ ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

TIMESOFINDIA.COM 1 Mar 2018, 3:44 pm
ಮೊನಕೊ: ಟೀಮ್ ಇಂಡಿಯಾದಿಂದ ಮಗದೊಮ್ಮೆ ಕಡೆಗಣಿಸಲ್ಪಟ್ಟಿರುವ ಹಿರಿಯ ಅನುಭವಿ ಎಡಗೈ ಆಲ್‌ರೌಂಡರ್ ಯುವರಾಜ್ ಸಿಂಗ್, 2019ರಲ್ಲಿ ತಮ್ಮ ಕ್ರಿಕೆಟ್ ಭವಿಷ್ಯದ ಕುರಿತಾಗಿ ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Vijaya Karnataka Web i will take a call on my career after 2019 yuvraj singh
ಯುವಿ ನಿವೃತ್ತಿ ಸನ್ನಿಹಿತ?


ಕ್ಯಾನ್ಸರ್‌ನಂತಹ ಮಾರಕ ರೋಗದಿಂದ ಗೆದ್ದು ಬಂದು ಕ್ರೀಡಾ ಜೀವನ ಮುಂದುವರಿಸಿರುವ ಯುವಿ ಈಗಲೂ ಟೀಮ್ ಇಂಡಿಯಾ ಪುನರಾಗಮನವನ್ನು ಎದುರು ನೋಡುತ್ತಿದ್ದಾರೆ.

ಬಹುನಿರೀಕ್ಷಿತ ಏಕದಿನ ವಿಶ್ವಕಪ್ 2019ನೇ ಸಾಲಿನಲ್ಲಿ ನಡೆಯಲಿದೆ. ಇದರಂತೆ ಪ್ರಸಕ್ತ ಸಾಲಿನಲ್ಲಿ ನಡೆಯರುವ ಐಪಿಎಲ್ ಟ್ವೆಂಟಿ-20 ಟೂರ್ನಿಯ ಮೂಲಕ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಉತ್ತಮ ಐಪಿಎಲ್ ನಿರೀಕ್ಷೆಯಲ್ಲಿದ್ದೇನೆ. ಏನೇ ಆದರೂ 2019ರ ವರೆಗೆ ಆಡುವುದು ನನ್ನ ಗುರಿಯಾಗಿದೆ. ತದಾ ಬಳಿಕವಷ್ಟೇ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದರು.

2007 ಟ್ವೆಂಟಿ-20 ಹಾಗೂ 2011 ಏಕದಿನ ವಿಶ್ವಕಪ್ ಗೆಲುವುಗಳಲ್ಲಿ ಯುವಿ ಗಮನಾರ್ಹ ಪಾತ್ರ ವಹಿಸಿದ್ದರು. ಅದೇ ಹೊತ್ತಿಗೆ ತಾವು ಶ್ರೇಷ್ಠ ಫಾರ್ಮ್‌ನಲ್ಲಿರುವಾಗ ತಂಡದಲ್ಲಿ ಸ್ಥಾನ ದೊರಕಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌