ಆ್ಯಪ್ನಗರ

ಅರ್ಜುನ್ ಕ್ರಿಕೆಟ್ ಜೀವನದ ಮಹತ್ವದ ಮೈಲುಗಲ್ಲು: ಸಚಿನ್

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತದ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

TOI.in 8 Jun 2018, 11:50 am
ಹೊಸದಿಲ್ಲಿ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತದ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Vijaya Karnataka Web arjun-tendulkar


ಇದರಂತೆ ಪ್ರತಿಕ್ರಿಯಿಸಿರುವ ಮಾಜಿ ದಂತಕತೆ ಸಚಿನ್, ''ಇದು ಅರ್ಜುನ್ ಕ್ರಿಕೆಟ್ ಜೀವನದ ಮಹತ್ವದ ಮೈಲುಗಲ್ಲು'' ಎಂದು ಅಭಿಪ್ರಾಯಪಟ್ಟಿದ್ದಾರೆ.

''ಅರ್ಜುನ್ ಆಯ್ಕೆಯಾಗಿರುವುದರಲ್ಲಿ ಸಂತಸವಿದೆ. ಇದು ಮಗನ ಕ್ರಿಕೆಟ್ ಜೀವನದ ಮಹತ್ವದ ಮೈಲುಗಲ್ಲು. ನಾನು ಹಾಗೂ ಅಂಜಲಿ ಯಾವತ್ತೂ ಆತನ ಆಯ್ಕೆಯನ್ನು ಬೆಂಬಲಿಸುತ್ತಿದ್ದು, ಮಗನ ಯಶಸ್ಸಿಗಾಗಿ ಪ್ರಾರ್ಥಿಸುವುದಾಗಿ'' ತಿಳಿಸಿದ್ದಾರೆ.

ಆರು ಎಡಿ ಎತ್ತರದ 18 ವರ್ಷದ ಎಡಗೈ ಮಧ್ಯಮ ವೇಗಿ ಹಾಗೂ ಎಡಗೈ ಬ್ಯಾಟ್ಸ್‌ಮನ್‌ ಆಗಿರುವ ಅರ್ಜುನ್ ಲಂಕಾ ವಿರುದ್ಧ ಎರಡು ನಾಲ್ಕು ದಿನಗಳ ಪಂದ್ಯಕ್ಕಾಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಅರ್ಜುನ್ ಅಂಡರ್ 19 ಕೂಚ್ ಬಿಹಾರ್ ಟ್ರೋಫಿಯಲ್ಲಿ 18 ವಿಕೆಟುಗಳನ್ನು ಕಬಳಿಸಿ ಗಮನಾರ್ಹ ಸಾಧನೆ ಮಾಡಿದ್ದರು. ಹಾಗೆಯೇ ಮಧ್ಯಪ್ರದೇಶ ವಿರುದ್ಧ 95 ರನ್ ತೆತ್ತು ಐದು ವಿಕೆಟುಗಳನ್ನು ಪಡೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌