ಆ್ಯಪ್ನಗರ

ಭದ್ರತಾ ಭೀತಿ; ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದ 10 ಶ್ರೀಲಂಕಾ ಆಟಗಾರರು

ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನ ಪ್ರವಾಸದಿಂದ ಶ್ರೀಲಂಕಾ ಟಿ20 ನಾಯಕ ಲಸಿತ್ ಮಾಲಿಂಗ, ಏಕದಿನ ನಾಯಕ ದಿಮುತ್ ಕರುಣಾರತ್ನೆ ಸೇರಿದಂತೆ 10 ಆಟಗಾರರು ಹಿಂದಕ್ಕೆ ಸರಿದಿದ್ದಾರೆ. ಪ್ರಸ್ತುತ ಬೆಳವಣಿಗೆಯು ಪಾಕ್ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿದೆ.

Vijaya Karnataka Web 10 Sep 2019, 9:56 am
ಕೊಲಂಬೊ: ಭದ್ರತಾ ಭೀತಿಯ ಹಿನ್ನಲೆಯಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಶ್ರೀಲಂಕಾದ ಟ್ವೆಂಟಿ-20 ನಾಯಕ ಲಸಿತ್ ಮಾಲಿಂಗ ಸೇರಿದಂತೆ 10 ಆಟಗಾರರು ನಿರಾಕರಿಸಿದ್ದಾರೆ.
Vijaya Karnataka Web sri-lanka


ಲಸಿತ್ ಮಾಲಿಂಗ ಸೇರಿದಂತೆ ಏಕದಿನ ನಾಯಕ ದಿಮುತ್ ಕರುಣಾರತ್ನೆ, ತಿಸಾರಾ ಪರೇರಾ, ಏಂಜಲೋ ಮ್ಯಾಥ್ಯೂಸ್, ನಿರೋಶನ್ ಡಿಕ್‌ವೆಲ್ಲ, ಕುಸಾಸ್ ಪರೇರಾ, ಧನಂಜಯ ಡಿ ಸಿಲ್ವ, ಅಕಿಲ ಧನಂಜಯ, ಸುರಂಗ ಲಕ್ಮಲ್ ಹಾಗೂ ದಿನೇಶ್ ಚಾಂದಿಮಾಲ್ ಪಾಕಿಸ್ತಾನಕ್ಕೆ ತೆರಳಲು ವಿಸಮ್ಮತಿಯನ್ನು ಸೂಚಿಸಿದ್ದಾರೆ.

ಭದ್ರತಾ ಬಗ್ಗೆ ಕಳವಳ ಉಂಟಾಗಿರುವ ಹಿನ್ನಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ರಾಷ್ಟ್ರೀಯ ಆಟಗಾರರಿಗೆ ಮನವರಿಕೆಯನ್ನು ಮಾಡಿತ್ತು. ಆದರೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಆಟಗಾರರ ವಿವೇಚನೆಗೆ ಬಿಟ್ಟಿತ್ತು.

2009 ಮಾರ್ಚ್ ತಿಂಗಳಲ್ಲಿ ಲಾಹೋರ್‌ನಲ್ಲಿ ಟೆಸ್ಟ್ ಪಂದ್ಯಕ್ಕೆಂದು ತೆರಳುವಾಗ ಶ್ರೀಲಂಕಾ ಆಟಗಾರರನ್ನು ಹೊಂದಿದ ಬಸ್ ಮೇಲೆ ಉಗ್ರರ ದಾಳಿ ನಡೆದಿತ್ತು. ಅದೃಷ್ಟವಶಾತ್ ಆಟಗಾರರು ಪ್ರಾಣಾಪಾಯದಿಂದ ಪಾರಾಗಿದ್ದರು. ಅಲ್ಲಿಂದ ಬಳಿಕ ಭದ್ರತಾ ಭೀತಿಯ ಹಿನ್ನಲೆಯಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ಆಟಗಾರರು ಹಿಂದೇಟು ಹಾಕುತ್ತಿದ್ದಾರೆ.

ಇದೀಗ ಪಾಕಿಸ್ತಾನ ಜತಗೆ ಕ್ರಿಕೆಟ್ ಬಾಂಧವ್ಯ ಪುನರಾರಂಭಿಸಲು ಶ್ರೀಲಂಕಾ ಮುಂದಾಗಿದೆ. ಅಲ್ಲದೆ ಸೆಪ್ಟೆಂಬರ್ 27ರಿಂದ ಆರಂಭವಾಗಲಿರುವ ಸರಣಿಯಲ್ಲಿ ತಲಾ ಮೂರು ಏಕದಿನ ಮತ್ತು ಟ್ವೆಂಟಿ-20 ಸರಣಿಗಳಲ್ಲಿ ಭಾಗವಹಿಸಲಿದೆ.

ಕರುಣಾರತ್ನೆ ಪಾಕ್ ಪ್ರವಾಸ ಕೈಗೊಳ್ಳಲು ನಿರಾಕರಿಸಿರುವ ಹಿನ್ನಲೆಯಲ್ಲಿ 30ರ ಹರೆಯದ ಲಹಿರು ತಿರಿಮಣ್ಣೆಗೆ ಕಪ್ತಾನಗಿರಿ ನೀಡುವ ಸಾಧ್ಯತೆಯಿದೆ. ಹಾಗೆಯೇ ಟ್ವೆಂಟಿ-20ನಲ್ಲಿ ಲಸಿತ್ ಮಾಲಿಂಗ ನಾಯಕ ಸ್ಥಾನಕ್ಕೆ ದಸುನ್ ಶನಕ ಆಯ್ಕೆಯಾಗುವ ನಿರೀಕ್ಷೆಯಿದೆ.

ಪ್ರಸ್ತುತ ಏಕದಿನ ಹಾಗೂ ಟಿ20 ಪಂದ್ಯಗಳು ಅನುಕ್ರಮವಾಗಿ ಕರಾಚಿ ಹಾಗೂ ಲಾಹೋರ್‌ನಲ್ಲಿ ನಡೆಯಲಿದೆ. ಈ ಹಿಂದೆ 2017ರಲ್ಲಿ ತಿಸಾರಾ ಪರೇರಾ ನೇತೃತ್ವದಲ್ಲಿ ಶ್ರೀಲಂಕಾ ತಂಡವು ಪಾಕ್ ಪ್ರವಾಸವನ್ನು ಕೈಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌