'ನಂಬಲಾಗದ ಅನುಭವ', ಟೀಮ್ ಇಂಡಿಯಾ ಪರ ಆಡಿದ ಅನುಭವ ಹಂಚಿಕೊಂಡ ನಟರಾಜನ್!
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ ತಮಿಳುನಾಡಿನ ಎಡಗೈ ವೇಗಿ, ಆಡಿದ ಮೊದಲ ಪಂದ್ಯದಲ್ಲೇ 2 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.
Vijaya Karnataka Web 3 Dec 2020, 11:25 pm
ಹೈಲೈಟ್ಸ್:
- ಐಪಿಎಲ್ ಮೂಲಕ ಬೆಳಕಿಗೆ ಬಂದ ಪ್ರತಿಭೆ.
- ಟೀಮ್ ಇಂಡಿಯಾದ ಎಕ್ಸ್-ಫ್ಯಾಕ್ಟರ್ ಬೌಲರ್.
- ಪದಾರ್ಪಣೆಯ ಪಂದ್ಯದ ಅನುಭವ ಹಂಚಿಕೊಂಡ ನಟರಾಜನ್.
ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆಡಿದ್ದು ನಂಬಲು 'ಸಾಧ್ಯವಾಗದ ಅನುಭವ' ಎಂದು ಎಡಗೈ ವೇಗಿ ಟಿ ನಟರಾಜನ್ ಹೇಳಿಕೊಂಡಿದ್ದಾರೆ. ತಮಿಳುನಾಡು ಮೂಲದ 29 ವರ್ಷದ ಎಡಗೈ ವೇಗದ ಬೌಲರ್, ಕ್ಯಾನ್ಬೆರಾದ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿ ತಮ್ಮ 10 ಓವರ್ಗಳಲ್ಲಿ 70 ರನ್ ಬಿಟ್ಟುಕೊಟ್ಟು 2 ವಿಕೆಟ್ಗಳನ್ನು ಪಡೆದರು. ಮಾರ್ನಸ್ ಲಾಬುಶೇನ್ ಮತ್ತು ಆಷ್ಟನ್ ಅಗರ್ ಅವರಂತಹ ಅಪಾಯಕಾರಿ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿ ಭಾರತ ತಂಡಕ್ಕೆ 13 ರನ್ಗಳ ಜಯ ತಂದುಕೊಡುವಲ್ಲಿ ಮುಖ್ಯ ಪಾತ್ರವಹಿಸಿದರು.
"ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದು ನಿಜಕ್ಕೂ ನಂಬಲು ಸಾಧ್ಯವಾಗದ ಅನುಭವ. ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು. ಮತ್ತಷ್ಟು ಸವಾಲುಗಳನ್ನು ಎದುರು ನೋಡುತ್ತಿದ್ದೇನೆ," ಎಂದು ನಟರಾಜನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
ಕಿಂಗ್ಸ್ XIನಲ್ಲಿ ನಟರಾಜನ್ಗೆ ಅವಕಾಶ ಕೊಟ್ಟಾಗ ಟೀಕಿಸಲಾಗಿತ್ತು: ವೀರೇಂದ್ರ ಸೆಹ್ವಾಗ್
ಆರಂಭದಲ್ಲಿ ಕೇವಲ ಟಿ20 ಕ್ರಿಕೆಟ್ ಸರಣಿಗೆ ಮಾತ್ರವೇ ನಟರಾಜನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ನವದೀಪ್ ಸೈನಿ ಅವರಿಗೆ ಬ್ಯಾಕ್ ಅಪ್ ಬೌಲರ್ ಆಗಿ ಏಕದಿನ ಸರಣಿಯಲ್ಲೂ ಎಡಗೈ ವೇಗಿಗೆ ಅವಕಾಶ ನೀಡಲಾಯಿತು. ಸೈನಿ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಒಡಿಐ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದ್ದರು.
'ಟೆಸ್ಟ್ ಇರಲಿ, ಅಭ್ಯಾಸ ಪಂದ್ಯದಲ್ಲೇ ಭಾರತಕ್ಕೆ ಪಂಚ್', ಆಸೀಸ್ ಓಪನರ್ ಚಾಲೆಂಜ್!
ತಮ್ಮ ಯಾರ್ಕರ್ ಎಸೆತಗಳಿಗೆ ಹೆರುವಾಸಿಯಾದ ನಟರಾಜನ್, 2017ರಲ್ಲಿ ಬರೋಬ್ಬರಿ 3 ಕೋಟಿ ರೂ. ಮೊತ್ತ ಪಡೆದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಆದರೆ, ನಂತರದ ವರ್ಷಗಳಲ್ಲಿ ಗಾಯದ ಸಮಸ್ಯೆ ಎದುರಿಸಿ ಆಡದೇ ಹೋಗಿದ್ದರು. ಆದರೆ, 2020ರ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿ ತಮ್ಮ ಅಮೋಘ ಯಾರ್ಕರ್ಗಳ ಮೂಲಕ ಬ್ಯಾಟ್ಸ್ಮನ್ಗಳ ನಿದ್ರೆ ಕೆಡಿಸಿದ್ದರು. ಡೆತ್ ಓವರ್ಗಳಲ್ಲಿ ಒತ್ತಡದ ನಡುವೆ ಯಾರ್ಕರ್ ಎಸೆಯುವುದರಲ್ಲಿ ನಟರಾಜನ್ ತೋರಿದ ನಿಖರತೆಯ ಫಲವಾಗಿ ಟೀಮ್ ಇಂಡಿಯಾ ಟಿಕೆಟ್ ಪಡೆದುಕೊಂಡರು.
'ಮಾಹಿ ಭಾಯ್ ಹೇಳಿಕೊಟ್ಟ ದಾರಿಯಲ್ಲೇ ನಡೆಯುತ್ತಿದ್ದೇನೆ', ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಜಡೇಜಾ!
13ನೇ ಆವೃತ್ತಿಯ ಐಪಿಎಲ್ನಲ್ಲಿ ನಟರಾಜ್ ಒಟ್ಟು 16 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ತಮ್ಮ ವಿಕೆಟ್ಗಳ ಖಾತೆ ತೆರೆದಿದ್ದಾರೆ. ಟಿ20 ಸರಣಿಯಲ್ಲೂ ಎಡಗೈ ವೇಗಿ ಭಾರತ ತಂಡ ಪ್ರಮುಖ ವೇಗಿಯಾಗಿ ಕಣಕ್ಕಿಳಿಯುವುದು ಖಾತ್ರಿಯಾಗಿದೆ.
IND vs AUS: ಮೊದಲನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ XI ಇಂತಿದೆ..
ಟಿ20 ಸರಣಿಯ ವೇಳಾಪಟ್ಟಿ
ಮೊದಲನೇ ಪಂದ್ಯ: ಡಿ.4 (ಸ್ಥಳ: ಮನುಕಾ ಓವಲ್)
ಎರಡನೇ ಪಂದ್ಯ: ಡಿ.6 (ಸ್ಥಳ: ಎಸ್ಸಿಜಿ)
ಮೂರನೇ ಪಂದ್ಯ: ಡಿ.8 (ಸ್ಥಳ: ಎಸ್ಸಿಜಿ)
"ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದು ನಿಜಕ್ಕೂ ನಂಬಲು ಸಾಧ್ಯವಾಗದ ಅನುಭವ. ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು. ಮತ್ತಷ್ಟು ಸವಾಲುಗಳನ್ನು ಎದುರು ನೋಡುತ್ತಿದ್ದೇನೆ," ಎಂದು ನಟರಾಜನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
ಕಿಂಗ್ಸ್ XIನಲ್ಲಿ ನಟರಾಜನ್ಗೆ ಅವಕಾಶ ಕೊಟ್ಟಾಗ ಟೀಕಿಸಲಾಗಿತ್ತು: ವೀರೇಂದ್ರ ಸೆಹ್ವಾಗ್
ಆರಂಭದಲ್ಲಿ ಕೇವಲ ಟಿ20 ಕ್ರಿಕೆಟ್ ಸರಣಿಗೆ ಮಾತ್ರವೇ ನಟರಾಜನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ನವದೀಪ್ ಸೈನಿ ಅವರಿಗೆ ಬ್ಯಾಕ್ ಅಪ್ ಬೌಲರ್ ಆಗಿ ಏಕದಿನ ಸರಣಿಯಲ್ಲೂ ಎಡಗೈ ವೇಗಿಗೆ ಅವಕಾಶ ನೀಡಲಾಯಿತು. ಸೈನಿ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಒಡಿಐ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದ್ದರು.
'ಟೆಸ್ಟ್ ಇರಲಿ, ಅಭ್ಯಾಸ ಪಂದ್ಯದಲ್ಲೇ ಭಾರತಕ್ಕೆ ಪಂಚ್', ಆಸೀಸ್ ಓಪನರ್ ಚಾಲೆಂಜ್!
ತಮ್ಮ ಯಾರ್ಕರ್ ಎಸೆತಗಳಿಗೆ ಹೆರುವಾಸಿಯಾದ ನಟರಾಜನ್, 2017ರಲ್ಲಿ ಬರೋಬ್ಬರಿ 3 ಕೋಟಿ ರೂ. ಮೊತ್ತ ಪಡೆದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಆದರೆ, ನಂತರದ ವರ್ಷಗಳಲ್ಲಿ ಗಾಯದ ಸಮಸ್ಯೆ ಎದುರಿಸಿ ಆಡದೇ ಹೋಗಿದ್ದರು. ಆದರೆ, 2020ರ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿ ತಮ್ಮ ಅಮೋಘ ಯಾರ್ಕರ್ಗಳ ಮೂಲಕ ಬ್ಯಾಟ್ಸ್ಮನ್ಗಳ ನಿದ್ರೆ ಕೆಡಿಸಿದ್ದರು. ಡೆತ್ ಓವರ್ಗಳಲ್ಲಿ ಒತ್ತಡದ ನಡುವೆ ಯಾರ್ಕರ್ ಎಸೆಯುವುದರಲ್ಲಿ ನಟರಾಜನ್ ತೋರಿದ ನಿಖರತೆಯ ಫಲವಾಗಿ ಟೀಮ್ ಇಂಡಿಯಾ ಟಿಕೆಟ್ ಪಡೆದುಕೊಂಡರು.
'ಮಾಹಿ ಭಾಯ್ ಹೇಳಿಕೊಟ್ಟ ದಾರಿಯಲ್ಲೇ ನಡೆಯುತ್ತಿದ್ದೇನೆ', ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಜಡೇಜಾ!
13ನೇ ಆವೃತ್ತಿಯ ಐಪಿಎಲ್ನಲ್ಲಿ ನಟರಾಜ್ ಒಟ್ಟು 16 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ತಮ್ಮ ವಿಕೆಟ್ಗಳ ಖಾತೆ ತೆರೆದಿದ್ದಾರೆ. ಟಿ20 ಸರಣಿಯಲ್ಲೂ ಎಡಗೈ ವೇಗಿ ಭಾರತ ತಂಡ ಪ್ರಮುಖ ವೇಗಿಯಾಗಿ ಕಣಕ್ಕಿಳಿಯುವುದು ಖಾತ್ರಿಯಾಗಿದೆ.
IND vs AUS: ಮೊದಲನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ XI ಇಂತಿದೆ..
ಟಿ20 ಸರಣಿಯ ವೇಳಾಪಟ್ಟಿ
ಮೊದಲನೇ ಪಂದ್ಯ: ಡಿ.4 (ಸ್ಥಳ: ಮನುಕಾ ಓವಲ್)
ಎರಡನೇ ಪಂದ್ಯ: ಡಿ.6 (ಸ್ಥಳ: ಎಸ್ಸಿಜಿ)
ಮೂರನೇ ಪಂದ್ಯ: ಡಿ.8 (ಸ್ಥಳ: ಎಸ್ಸಿಜಿ)