ಆ್ಯಪ್ನಗರ

ಗವಾಸ್ಕರ್‌ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದ ಆಸೀಸ್‌ ಕಪ್ತಾನ!

ಕ್ಯಾಚ್‌ಗಳನ್ನು ಕೈಚೆಲ್ಲಿ, ಸ್ಲೆಡ್ಜಿಂಗ್‌ನಲ್ಲಿ ತೊಡಗುವುದನ್ನು ಬಿಟ್ಟು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ಕಡೆಗೆ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್‌ ಪೇಯ್ನ್ ಗಮನ ನೀಡಬೇಕೆಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್‌ ಜಾಡಿಸಿದ್ದರು.

Vijaya Karnataka Web 14 Jan 2021, 8:50 pm

ಹೈಲೈಟ್ಸ್‌:

  • ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ, ಗಬ್ಬಾದಲ್ಲಿ ಅಂತಿಮ ಟೆಸ್ಟ್‌.
  • ಆಸೀಸ್‌ ನಾಯಕನ ವಿರುದ್ಧ ಟೀಕೆಗಳ ಸುರಿಮಳೆ ಗೈದಿದ್ದ ಗವಾಸ್ಕರ್.
  • ಸುನಿಲ್‌ ಹೇಳಿಕೆ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ ಎಂದ ಪೇಯ್ನ್.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Tim Paine
ಆಸ್ಟ್ರೇಲಿಯಾ ಟೆಸ್ಟ್‌ ತಂಡದ ನಾಯಕ ಟಿಮ್ ಪೇಯ್ನ್ (ಚಿತ್ರ: ಟಿಒಐ).
ಬ್ರಿಸ್ಬೇನ್: ಟಿಮ್‌ ಪೇಯ್ನ್‌ ಆಸ್ಟ್ರೇಲಿಯಾ ತಂಡದ ನಾಯಕನಾಗಲು ನಾಲಾಯಕ್‌ ಎಂದು ಭಾರತ ತಂಡದ ಮಾಜಿ ನಾಯಕ ಟೀಕಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಆಸೀಸ್‌ ಪಡೆಯ ಹಾಲಿ ನಾಯಕ ಟಿಮ್‌ ಪೇಯ್ನ್, ಈ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
"ಸುನಿಲ್ ಗವಾಸ್ಕರ್‌ ಹೇಳಿರುವ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಹೇಳಿಕೆ ವಿರುದ್ಧ ಪ್ರತಿಕ್ರಿಯೆ ನೀಡಬಾರದು ಅಂದುಕೊಂಡಿದ್ದೇನೆ. ಅವರು ತಮ್ಮ ಅಭಿಪ್ರಾಯವನ್ನಷ್ಟೇ ಮುಂದಿಟ್ಟಿದ್ದಾರೆ. ಅದರ ಪರಿಣಾಮ ನಮ್ಮ ಮೇಲೆ ಕಿಂಚಿತ್ತೂ ಆಗುವುದಿಲ್ಲ. ಇದು ಈ ಅದ್ಭುತ ಟೆಸ್ಟ್‌ ಸರಣಿಯ ಒಂದು ಭಾಗವಷ್ಟೆ. ಸನ್ನಿ ಅವರಿಗೆ ಇಷ್ಟಬಂದಿದ್ದನ್ನು ಹೇಳಲಿ ಬಿಡಿ. ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ," ಎಂದು ಗಬ್ಬಾ ಟೆಸ್ಟ್‌ ಪಂದ್ಯಕ್ಕೂ ಮುನ್ನಾ ದಿನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪೇಯ್ನ್ ಹೇಳಿದ್ದಾರೆ..

ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಹತಾಶೆಗೆ ಒಳಗಾಗಿದ್ದ ಟಿಮ್‌ ಪೇಯ್ನ್ ಕ್ಯಾಚ್‌ಗಳನ್ನು ಕೈಚೆಲ್ಲಿ ಬಳಿಕ ಅನಗತ್ಯ ರೀತಿಯಲ್ಲಿ ಬೌಲರ್‌ಗಳನ್ನು ಬದಲಾಯಿಸುತ್ತಿದ್ದರು. ಅವರ ವರ್ತನೆ ಕೂಡ ಹದ್ದು ಮೀರಿತ್ತು ಎಂದು ಗವಾಸ್ಕರ್‌ ಜಾಡಿಸಿದ್ದರು.

ಸ್ಮಿತ್‌ ಗಾರ್ಡ್‌ ಅಳಿಸಿದ್ದು ಪಂತ್‌ಗೆ ಗೊತ್ತೇ ಇರಲಿಲ್ಲ ಎಂದ ಬ್ಯಾಟಿಂಗ್ ಕೋಚ್!

"ರಾಷ್ಟ್ರೀಯ ತಂಡದ ನಾಯಕನಾಗಲು ಪೇಯ್ನ್ ನಾಲಾಯಕ್. ಕ್ರಿಕೆಟ್‌ ಹೊರತಾಗಿ ಬೇರೆ ಎಲ್ಲವನ್ನೂ ಮಾತನಾಡುತ್ತಿದ್ದಾರೆ. ಕ್ರಿಕೆಟ್‌ ಬಿಟ್ಟು ಬೇರೆ ಮಾತನಾಡುತ್ತಿದ್ದೀರಾ ಎಂದರೆ ನೀವು ಜಿಗುಪ್ಸೆಗೆ ಒಳಗಾಗಿದ್ದೀರಿ ಎಂದರ್ಥ. ಎದುರಾಳಿ ತಂಡ ನೀಡುತ್ತಿರುವ ಮರು ಹೋರಾಟವನ್ನು ತಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿ ಇಲ್ಲ ಎಂಬುದು ಈ ಮೂಲಕ ತೋರುತ್ತದೆ," ಎಂದಿದ್ದರು.

"ದಿನದಾಟದ ಅಂತ್ಯಕ್ಕೆ ಮುಗುಳ್ನಗೆ ಬೀರಿದ್ದು ಟೀಮ್ ಇಂಡಿಯಾ ಆಟಗಾರರು. ಟಿಮ್‌ ಪೇಯ್ನ್ ಏನೇ ಬೊಗಳಿದರೂ ಕೊನೆಗೆ ನಕ್ಕಿದ್ದು ಅಶ್ವಿನ್. ನನಗೆ ಗೊತ್ತಿಲ್ಲ. ಏಕೆಂದರೆ ನಾನು ಆಸ್ಟ್ರೇಲಿಯಾ ತಂಡದ ಆಯ್ಕೆದಾರನಲ್ಲ. ಆದರೆ, ಖಂಡಿತವಾಗಿ ಆಸೀಸ್‌ ತಂಡದ ನಾಯಕನ ಸ್ಥಾನದಲ್ಲಿ ಪೇಯ್ನ್‌ ದಿನಗಳು ಕೊನೆಗೊಳ್ಳುತ್ತಿವೆ. ಅತ್ಯುತ್ತಮ ಬೌಲಿಂಗ್‌ ಹೊಂದಿರುವ ಆಸ್ಟ್ರೇಲಿಯಾ ತಂಡ 130 ಓವರ್‌ಗಳನ್ನು ಎಸೆದು ಟೀಮ್ ಇಂಡಿಯಾವನ್ನು ಆಲ್‌ಔಟ್‌ ಮಾಡುವಲ್ಲಿ ವಿಫಲವಾಗಿದೆ. ಇದಕ್ಕೆ ಬೌಲಿಂಗ್‌ನಲ್ಲಿನ ಅನಗತ್ಯ ಬದಲಾವಣೆಗಳು, ಕ್ಷೇತ್ರ ರಕ್ಷಣೆಯ ಅಸಂಬದ್ಧ ಯೋಜನೆ ಇದೇ ಪ್ರಮುಖ ಕಾರಣ. ಇವೆಲ್ಲವೂ ಸರಿಯಿದ್ದಿದ್ದರೆ ಫಲಿತಾಂಶ ಬೇರೆಯದ್ದೇ ಆಗಿರುತ್ತಿತ್ತು," ಎಂದು ಹೇಳಿದ್ದರು.

ಟೀಮ್ ಇಂಡಿಯಾ XI ಆಯ್ಕೆ ತಡ, ಬುಮ್ರಾ ಆಡುವ ಸುಳಿವು ಕೊಟ್ಟ ಬ್ಯಾಟಿಂಗ್ ಕೋಚ್!

"ಈ ಸರಣಿಯ ಅಂತ್ಯದ ಬಳಿಕ ಆಸ್ಟ್ರೇಲಿಯಾ ಟೆಸ್ಟ್‌ ತಂಡದ ನಾಯಕತ್ವ ಬದಲಾದರೆ ಅಚ್ಚರಿಯೇನಿಲ್ಲ. ಸರಳ ಕ್ಯಾಚ್‌ಗಳನ್ನು ಕೈಚೆಲ್ಲಿದ್ದೀರಿ. ರಿಷಭ್ ಪಂತ್‌ ಎರಡು ಬಾರಿ ಎಡ್ಜ್ ಮಾಡಿದ್ದರು. ಅವೆಲ್ಲವೂ ಕಷ್ಟದ ಕ್ಯಾಚ್‌ಗಳೇನೂ ಆಗಿರಲಿಲ್ಲ. ಅಂತ್ಯದಲ್ಲಿ ಹನುಮ ವಿಹಾರಿ ಕ್ಯಾಚ್‌ ಮೊದಲ ಸ್ಲಿಪ್‌ ಕಡೆಗಿತ್ತು. ಅಲ್ಲೂ ಮಧ್ಯ ಪ್ರವೇಶಿಸಿ ಕ್ಯಾಚ್‌ ಕೈಚೆಲ್ಲಿದರು. ಅವರು ವಿಚಲಿತರಾಗಿ ಏಕಾಗ್ರತೆ ಕಳೆದುಕೊಂಡಿದ್ದರು. ಕೊನೆಗೆ ಆರ್‌ ಅಶ್ವಿನ್ ಜೊತೆಗೂ ಮಾತಿನ ಜಟಾಪಟಿಯಲ್ಲೂ ತೊಡಗಿದರು," ಎಂದು ಗವಾಸ್ಕರ್‌ ವಿವರಿಸಿದ್ದರು.

ಅಡಿಲೇಡ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಹಿನ್ನಡೆ ಹೊರತಾಗಿಯೂ ಆಸ್ಟ್ರೇಲಿಯಾ ತಂಡ 8 ವಿಕೆಟ್‌ಗಳ ಜಯ ದಾಖಲಿಸಿತ್ತು. ಬಳಿಕ ಎಂಸಿಜಿ ಕ್ರೀಡಾಂಗಣದಲ್ಲಿ ನಡೆದ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಭಾರತ ತಂಡ ಅಷ್ಟೇ ವಿಕೆಟ್‌ಗಳಿಂದ ಗೆದ್ದು ತಿರುಗೇಟು ನೀಡಿತು. ಸಿಡ್ನಿ ಟೆಸ್ಟ್‌ ಡ್ರಾ ಫಲಿತಾಂಶ ಕಂಡ ಹಿನ್ನೆಲೆಯಲ್ಲಿ ಗಬ್ಬಾ ಟೆಸ್ಟ್‌ ಸರಣಿ ನಿರ್ಣಾಯಕ ಮಹತ್ವ ಪಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌