ಆ್ಯಪ್ನಗರ

ಭಾರತ-ಬಾಂಗ್ಲಾ ನಡುವಣ ಐತಿಹಾಸಿಕ ಡೇ-ನೈಟ್‌ ಟೆಸ್ಟ್‌ ವೀಕ್ಷಿಲು ಐದು ಪ್ರಮುಖ ಕಾರಣಗಳು!

ಕೋಲ್ಕತಾ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನ ಪಡೆದ ಮಾಜಿ ನಾಯಕ ಸೌರವ್‌ ಗಂಗೂಲಿ, ತಮ್ಮ ಸಾರಥ್ಯದಲ್ಲಿ ಮೊದಲ ಹೆಜ್ಜೆಯಾಗಿ ಭಾರತ ಕ್ರಿಕೆಟ್‌ ತಂಡದ ಚೊಚ್ಚಲ ಡೇ ನೈಟ್‌ ಟೆಸ್ಟ್‌ ಪಂದ್ಯಕ್ಕೆ ವೇದಿಕೆ ಸಿದ್ದಗೊಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೆ ಮರುಜೀವ ನೀಡಿ, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬರುವಂತೆ ಮಾಡುವ ನಿಟ್ಟಿನಲ್ಲಿ ಗಂಗೂಲಿ ಸಾರಥ್ಯದ ಬಿಸಿಸಿಐ ಇಂಥದ್ದೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯ 2ನೇ ಹಾಗೂ ಅಂತಿಮ ಪಂದ್ಯಕ್ಕೆ ಹೊನಲು ಬೆಳಕಿನ ಮಹತ್ವ ನೀಡಲಾಗಿದೆ. ಕೋಲ್ಕರಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಭಾರತ ತಂಡ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ಆರಂಭವಾಗಲು ಇನ್ನು ಕೇವಲ 3 ದಿನಗಳು ಮಾತ್ರವೇ ಬಾಕಿ ಉಳಿದಿದೆ. ಅಂದಹಾಗೆ ಈ ಐತಿಹಾಸಿಕ ಟೆಸ್ಟ್‌ ಪಂದ್ಯವನ್ನು ಕ್ರೀಡಾಂಗಣಕ್ಕೆ ಹೋಗೇ ನೋಡಬೇಕು ಎಂಬುದಕ್ಕೆ ಐದು ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ. ಡೇ-ನೈಟ್‌ ಟೆಸ್ಟ್‌ ಪಂದ್ಯ ನ.22ರಂದು ಆರಂಭವಾಗಲಿದೆ.

Vijaya Karnataka Web 19 Nov 2019, 10:54 pm
ಕೋಲ್ಕತಾ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನ ಪಡೆದ ಮಾಜಿ ನಾಯಕ ಸೌರವ್‌ ಗಂಗೂಲಿ, ತಮ್ಮ ಸಾರಥ್ಯದಲ್ಲಿ ಮೊದಲ ಹೆಜ್ಜೆಯಾಗಿ ಭಾರತ ಕ್ರಿಕೆಟ್‌ ತಂಡದ ಚೊಚ್ಚಲ ಡೇ ನೈಟ್‌ ಟೆಸ್ಟ್‌ ಪಂದ್ಯಕ್ಕೆ ವೇದಿಕೆ ಸಿದ್ದಗೊಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೆ ಮರುಜೀವ ನೀಡಿ, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬರುವಂತೆ ಮಾಡುವ ನಿಟ್ಟಿನಲ್ಲಿ ಗಂಗೂಲಿ ಸಾರಥ್ಯದ ಬಿಸಿಸಿಐ ಇಂಥದ್ದೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯ 2ನೇ ಹಾಗೂ ಅಂತಿಮ ಪಂದ್ಯಕ್ಕೆ ಹೊನಲು ಬೆಳಕಿನ ಮಹತ್ವ ನೀಡಲಾಗಿದೆ. ಕೋಲ್ಕರಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಭಾರತ ತಂಡ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ಆರಂಭವಾಗಲು ಇನ್ನು ಕೇವಲ 3 ದಿನಗಳು ಮಾತ್ರವೇ ಬಾಕಿ ಉಳಿದಿದೆ. ಅಂದಹಾಗೆ ಈ ಐತಿಹಾಸಿಕ ಟೆಸ್ಟ್‌ ಪಂದ್ಯವನ್ನು ಕ್ರೀಡಾಂಗಣಕ್ಕೆ ಹೋಗೇ ನೋಡಬೇಕು ಎಂಬುದಕ್ಕೆ ಐದು ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ. ಡೇ-ನೈಟ್‌ ಟೆಸ್ಟ್‌ ಪಂದ್ಯ ನ.22ರಂದು ಆರಂಭವಾಗಲಿದೆ.
Vijaya Karnataka Web ind vs ban five reasons to watch historic pink ball day night test
ಭಾರತ-ಬಾಂಗ್ಲಾ ನಡುವಣ ಐತಿಹಾಸಿಕ ಡೇ-ನೈಟ್‌ ಟೆಸ್ಟ್‌ ವೀಕ್ಷಿಲು ಐದು ಪ್ರಮುಖ ಕಾರಣಗಳು!


​ದಾದಾ ಮೊದಲ ಹೆಜ್ಜೆ

ಭಾರತೀಯ ಕ್ರಿಕೆಟ್‌ ಅನ್ನು ಮತ್ತೊಂದು ಸ್ಥರಕ್ಕೆ ಕೊಂಡೊಯ್ಯುವುದಾಗಿ ಪಣ ತೊಟ್ಟಿರುವ ನೂತನ ಅಧ್ಯಕ್ಷ ಸೌರವ್‌ ಗಂಗೂಲಿ, ಈಗಾಗಲೇ ಹಲವು ಮಹತ್ವದ ಹೆಜ್ಜೆಗಳನ್ನಿಟ್ಟಿದ್ದಾರೆ. ಇದರಲ್ಲಿ ಮೊದಲಿಗೆ ಪಿಂಕ್‌ ಬಾಲ್‌ ಟೆಸ್ಟ್‌ ಆಯೋಜನೆ. ಈ ರೀತಿ ಒಂದೊಂದೇ ಕ್ರಾಂತಿಕಾರಿ ನಿರ್ಧಾರಗಳನ್ನು ಕಾರ್ಯ ರೂಪಕ್ಕೆ ತಂದು ದೇಶದ ಕ್ರಿಕೆಟ್‌ಗೆ ಹೊಸ ಹುರುಪು ನೀಡುವುದು ಗಂಗೂಲಿ ಉದ್ದೇಶವಾಗಿದೆ.

​ಟೆಸ್ಟ್‌ ಪಂದ್ಯಕ್ಕೀಗ ಕೆಂಪಲ್ಲ ಗುಲಾಬಿ ಚೆಂಡು

ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಡೇ ನೈಟ್‌ ಟೆಸ್ಟ್‌ ಪಂದ್ಯಕ್ಕೆ ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಾಗಿ ಗುಲಾ ಬಿ ಬಣ್ಣದ ಚೆಂಡನ್ನು (ಪಿಂಕ್‌ ಬಾಲ್‌) ಬಳಕೆ ಮಾಡಲಾಗುತ್ತಿದೆ. ಹೊನಲು ಬೆಳಕಿನಲ್ಲಿ ಕೆಂಪು ಚೆಂಡನ್ನು ವೀಕ್ಷಿಸುವುದು ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವಾಗುವುದರಿಂದ ತಿಳಿ ಗುಲಾಬಿ ಬಣ್ಣದ ಚೆಂಡನ್ನು ಪರಿಚಯಿಸಲಾಗಿದೆ. ವಿದೇಶದಲ್ಲೆಲ್ಲಾ ಕೂಕಾಬುರಾ ಚೆಂಡನ್ನು ಬಳಕೆ ಮಾಡಿದರೆ, ಭಾರತಕ್ಕೆ ಎಸ್‌ಜಿ ಬ್ರಾಂಡ್‌ನ ಚೆಂಡುಗಳನ್ನು ಬಳಕೆ ಮಾಡಲಾಗುತ್ತಿದೆ.

​ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ರಾಂತಿ

1800ರಲ್ಲಿ ಹುಟ್ಟಿದ ಟೆಸ್ಟ್‌ ಕ್ರಿಕೆಟ್‌, ಶತಮಾನ ಕಾಲ ಸಾಗಿಬಂದಿದೆ. ಆದರೀಗ ಟಿ20 ಕ್ರಿಕೆಟ್‌ನ ಪೈಫಟಿಯಲ್ಲಿ ಬಸವಳಿದಿದ್ದು, ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಹೊಸ ರೂಪ ಪಡೆಯುವ ಅನಿವಾರ್ಯ ಸ್ಥಿತಿಯಲ್ಲಿದೆ. ಈ ನಿಟ್ಟಿನಲ್ಲಿ ಹೊನಲು ಬೆಳಕಿನ ಟೆಸ್ಟ್‌ ಪಂದ್ಯ ಒಂದು ಕ್ರಾಂತಿಕಾರಿ ಬೆಳವಣಿಗೆ ಆಗಿದೆ.

​ಇತಿಹಾಸಗಳ ತವರೂರು ಈಡನ್‌ ಗಾರ್ಡನ್ಸ್‌

ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಹರ್ಭಜನ್‌ ಸಿಂಗ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತಕ್ಕೆ ಮೊದಲ ಹ್ಯಾಟ್ರಿಕ್‌ ವಿಕೆಟ್‌ ತಂದುಕೊಟ್ಟದ್ದು ಇದೇ ಕ್ರೀಡಾಂಗಣದಲ್ಲಿ. ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ವಿಶ್ವ ದಾಖಲೆಯ 264 ರನ್‌ಗಳನ್ನು ಚಚ್ಚಿದ್ದು ಕೂಡ ಇಲ್ಲಿಯೇ. ಈ ರೀತಿ ಹಲವಾರು ದಾಖಲೆಗಳ ತವರೂರಾಗಿರುವ ಈಡನ್‌ ಗಾರ್ಡನ್ಸ್‌ ಭಾರತ ಕ್ರಿಕೆಟ್‌ ತಂಡದ ಚೊಚ್ಚಲ ಡೇ-ನೈಟ್‌ ಟೆಸ್ಟ್‌ ಪಂದ್ಯವನ್ನು ಆಯೋಜಿಸಿದ ಕೀರ್ತಿಯನ್ನು ತನ್ನದಾಗಿಸಿಕೊಳ್ಳಲಿದೆ.

​ಮಾಜಿ ನಾಯಕರೆಲ್ಲಾ ಒಂದೆಡೆಗೆ

ಈ ಪಂದ್ಯ ಅಧಿಕೃತ ಪ್ರಸಾರ ಹಕ್ಕು ಪಡೆದಿರು ಸ್ಟಾರ್‌ ಸ್ಪೋರ್ಟ್ಸ್‌, ಈ ಐತಿಹಾಸಿಕ ಪಂದ್ಯವನ್ನು ಸ್ಮರಣೀಯವನ್ನಾಗಿಸುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದ ಮಾಜಿ ನಾಯಕರೆಲ್ಲೂ ಒಂದೆಡೆ ಸೇರಿ ತಮ್ಮ ಹಲವು ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಮಾಜಿ ನಾಯಕರು ವೀಕ್ಷಕ ವಿವರಣೆ ಕೂಡ ಒದಗಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌