ಆ್ಯಪ್ನಗರ

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾಮೆಂಟೇಟರ್‌ ಆಗುವ ಸಾಧ್ಯತೆಗಳಿಲ್ಲ

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಚೊಚ್ಚಲ ಡೇ ನೈಟ್ ಟೆಸ್ಟ್ ಪಂದ್ಯಕ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವೀಕ್ಷಕ ವಿವರಣೆಗಾರನಾಗಿ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರ ಇನ್ನಷ್ಟೇ ಬರಬೇಕಿದೆ.

Vijaya Karnataka Web 7 Nov 2019, 8:50 am
ಹೊಸದಿಲ್ಲಿ: ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನವೆಂಬರ್‌ 22ರಿಂದ 26ರ ತನಕ ಕೋಲ್ಕೊತಾದಲ್ಲಿನಡೆಯಲಿರುವ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಕಡಿಮೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
Vijaya Karnataka Web ಮಹೇಂದ್ರ ಸಿಂಗ್ ಧೋನಿ


ಐತಿಹಾಸಿಕ ಟೆಸ್ಟ್‌ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರನಾಗಲು ಧೋನಿಗೆ ಅವಕಾಶ ಮಾಡಿಕೊಡುವಂತೆ ಮುಖ್ಯ ಪ್ರಸಾರ ಸಂಸ್ಥೆ ಸ್ಟಾರ್‌ ಸ್ಪೋರ್ಟ್ಸ್ ಬಿಸಿಸಿಐಗೆ ಪ್ರಸ್ತಾವನೆ ಕಳುಹಿಸಿತ್ತು. ಇದಕ್ಕೆ ಬಿಸಿಸಿಐ ಇನ್ನೂ ಸ್ಪಂದಿಸಿಲ್ಲ.

ಬಾಂಗ್ಲಾ ವಿರುದ್ದ ಸರಣಿ ಸೋಲಿನ ಮುಖಭಂಗದ ಭೀತಿಯಲ್ಲಿ ಟೀಮ್ ಇಂಡಿಯಾ

ಧೋನಿ ಜುಲೈನಲ್ಲಿಏಕದಿನ ವಿಶ್ವ ಕಪ್‌ನ ಸೆಮಿಫೈನಲ್‌ ಪಂದ್ಯದ ಬಳಿಕ ಟೀಮ್‌ ಇಂಡಿಯಾದಲ್ಲಿಕಾಣಿಸಿಕೊಳ್ಳದಿದ್ದರೂ ಈಗಲೂ ಬಿಸಿಸಿಐನ ವಾರ್ಷಿಕ ಗುತ್ತಿಗೆಗೊಳಪಟ್ಟಿರುವ ಆಟಗಾರನಾಗಿದ್ದಾರೆ.

ಈಡನ್‌ ಗಾರ್ಡನ್ಸ್‌ನಲ್ಲಿನಡೆಯಲಿರುವ ಹಗಲು-ರಾತ್ರಿ ಟೆಸ್ಟ್‌ನಲ್ಲಿಧೋನಿ ವೀಕ್ಷಕ ವಿವರಣೆಧಿಗಾರನಾಗುವ ಸಾಧ್ಯತೆಗಳಿವೆಯೇ ಎಂದು ಅವರಿಗೆ ಹತ್ತಿರವಾಗಿರುವ ಮೂಲಗಳನ್ನು ಪ್ರಶ್ನೆ ಮಾಡಿದಾಗ, 'ಸಾಧ್ಯತೆಗಳಿಲ್ಲ' ಎಂದೇ ಉತ್ತರ ದೊರೆತಿದೆ. ಬಿಸಿಸಿಐನ ಹಾಲಿ ಸಂವಿಧಾನದ ಪ್ರಕಾರ, ಧೋನಿ ವೀಕ್ಷಕ ವಿವರಣೆಗಾರನಾದರೆ ಸ್ವ ಹಿತಾಸಕ್ತಿ ಸಂಘರ್ಷಕ್ಕೊಳಗಾಗಲಿದ್ದಾರೆ. ಯಾವುದೇ ಕ್ರಿಕೆಟಿಗ ಏಕಕಾಲಕ್ಕೆ ಎರಡೆರಡು ಹುದ್ದೆ ಹೊಂದುವಂತಿಲ್ಲ.

ಮಗದೊಂದು ಸ್ಮರಣೀಯ ಶತಕದ ಅಂಚಿನಲ್ಲಿ ರೋಹಿತ್ ಶರ್ಮಾ

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಚೊಚ್ಚಲ ಡೇ-ಟೆಸ್ಟ್ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಭಾರತ ಪ್ರಧಾನಿ ಹಾಗೂ ಬಾಂಗ್ಲಾದೇಶ ಪ್ರಧಾನಿಗಳು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌