ಆ್ಯಪ್ನಗರ

ಕಿವೀಸ್‌ ಸೋಲಿಗೆ ಕಾರಣ ವಿವರಿಸಿದ ಕ್ಯಾಪ್ಟನ್‌ ಕೇನ್‌ ವಿಲಿಯಮ್ಸನ್‌

ಪ್ರವಾಸಿ ಭಾರತ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲಿಗೆ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ ಕಾರಣ ಕೊಟ್ಟಿದ್ದಾರೆ. ಆಕ್ಲೆಂಡ್‌ ಕದನದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು.

Vijaya Karnataka Web 24 Jan 2020, 7:12 pm
ಆಕ್ಲೆಂಡ್‌: ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಬಹು ನಿರೀಕ್ಷಿತ ಟಿ20 ಕ್ರಿಕೆಟ್‌ ಸರಣಿ ಶುರುವಾಗಿದ್ದು, ವಿರಾಟ್‌ ಕೊಹ್ಲಿ ನೇತೃತ್ವದ ಟೀಮ್‌ ಇಂಡಿಯಾ ಶುಕ್ರವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್‌ ಭರ್ಜರಿ ಜಯ ದಾಖಲಿಸಿ ಶುಭಾರಂಭ ಮಾಡಿದೆ.
Vijaya Karnataka Web Kane Williamson 1st t20i loss vs ind 2020


ಇಲ್ಲಿನ ಈಡನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್‌ ಕದನದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 203 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಬಳಿಕ ಗುರಿ ಬೆನ್ನತ್ತಿದ ಟೀಮ್‌ ಇಂಡಿಯಾ 19 ಓವರ್‌ಗಳಲ್ಲಿ4 ವಿಕೆಟ್‌ಗೆ 204 ರನ್‌ ಚಚ್ಚಿ ಭರ್ಜರಿ ಜಯ ದಕ್ಕಿಸಿಕೊಂಡಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನೆ ಪಡೆದಿದೆ.

ತವರು ನೆಲದಲ್ಲಿ 200ಕ್ಕೂ ಅಧಿಕ ಮೊತ್ತ ಗಳಿಸಿಯೂ ಟೀಮ್‌ ಇಂಡಿಯಾ ವಿರುದ್ಧ ಹೀನಾಯವಾಗಿ ಸೋತ ಬಳಿಕ ಮಾತನಾಡಿದ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌, 2ನೇ ಟಿ20ಯಲ್ಲಿ ಗೆಲ್ಲಬೇಕಾದರೆ ತಂಡವು ಎಲ್ಲಾ ವಿಭಾಗಗಳಲ್ಲಿ ಸುಧಾರಣೆ ಕಾಣುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಮತ್ತೊಮ್ಮೆ 200+ ಗುರಿ ಮೆಟ್ಟಿನಿಲ್ಲಲು ಕಾರಣ ವಿವರಿಸಿದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ!

"ಸೋತರೂ ಹಲವು ಸಕಾರಾತ್ಮಕ ಅಂಶಗಳು ನಮ್ಮಪಾಲಿಗಿವೆ. ಇಲ್ಲಿ ನಮ್ಮ ಮೊತ್ತವನ್ನು ಕಾಯ್ದುಕೊಳ್ಳುವುದು ಕಷ್ಟವಾಯಿತು. ಇದಕ್ಕೆ ತೇವಾಂಶ ಕೂಡ ಮುಖ್ಯ ಕಾರಣ. ಎದುರಾಳಿಗೆ ಒತ್ತಡ ಹೇರಬೇಕಾದರೆ 200ಕ್ಕೂ ಹೆಚ್ಚು ರನ್‌ ಗಳಿಸಬೇಕು ಎಂಬುದನ್ನು ಅರಿತಿದ್ದೆವು. ಆದರೆ, ಸಂಪೂರ್ಣ ಶ್ರೇಯಸ್ಸು ಟೀಮ್‌ ಇಂಡಿಯಾಗೆ ಸಲ್ಲುತ್ತದೆ. ನಿಜಕ್ಕೂ ಭಾರತ ತಂಡದ ಆಟ ಅತ್ಯುತ್ತಮವಾಗಿತ್ತು," ಎಂದು ವಿಲಿಯಮ್ಸನ್‌ ಹೇಳಿದ್ದಾರೆ.

IND vs NZ ಮೊದಲ ಟಿ20: ಈಡನ್‌ ಪಾರ್ಕ್‌ನಲ್ಲಿ ವಿಶ್ವ ದಾಖಲೆ ಬರೆದ ಬ್ಯಾಟ್ಸ್‌ಮನ್‌ಗಳು!

ಇದೇ ವೇಳೆ ತಮ್ಮ ಬೌಲರ್‌ಗಳು ನಿರ್ಣಾಯಕ ಘಟ್ಟಗಳಲ್ಲಿ ವಿಕೆಟ್‌ ಪಡೆಯುವ ತಂತ್ರ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದು ಕಿವೀಸ್‌ ನಾಯಕ ಅಭಿಪ್ರಾಯ ಪಟ್ಟಿದ್ದಾರೆ.

"ವೇಗದ ಬೌಲರ್‌ಗಳು ಗತಿಯಲ್ಲಿ ಬದಲಾವಣೆ ತರುವುದು ಒಳ್ಳೆಯದೆ. ಆದರೆ ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಏಕೆಂದರೆ ಟೀಮ್‌ ಇಂಡಿಯಾ ಪ್ರತಿ ಹಂತದಲ್ಲೂ ನಮ್ಮ ಮೇಲೆ ಒತ್ತಡ ಹೇರುತ್ತಿತ್ತು. ಆದರೆ, ಇಂತಹ ಸಂದರ್ಭಗಳಲ್ಲಿ ವಿಕೆಟ್‌ ಪಡೆಯುವುದು ಹೇಗೆ ಎಂಬುದನ್ನು ಪತ್ತೆ ಮಾಡಬೇಕಿದೆ. ಮುಂದಿನ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲೂ ಸುಧಾರಣೆಯಾಗಬೇಕಿದೆ," ಎಂದಿದ್ದಾರೆ.

ಐದು ಪಂದ್ಯಗಳ ಟಿ20-ಐ ಸರಣಿಯ 2ನೇ ಪಂದ್ಯ ಕೂಡ ಆಕ್ಲೆಂಡ್‌ನ ಈಡನ್‌ ಪಾರ್ಕ್‌ ಕ್ರೀಡಾಂಗಣದಲ್ಲೇ ಭಾನುವಾರ (ಜ.26) ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌