ಆ್ಯಪ್ನಗರ

ಕಿಂಗ್‌ ಕೊಹ್ಲಿಯಿಂದ ಕಲಿತ ಪಾಠವನ್ನು ವಿವರಿಸಿದ ಶ್ರೇಯಸ್‌ ಅಯ್ಯರ್‌!

ಟೀಮ್‌ ಇಂಡಿಯಾದ ಹೊಸ ಫಿನಿಷರ್‌ ಆಗಿ ಹೊರಹೊಮ್ಮುತ್ತಿರುವ ಯುವ ಪ್ರತಿಭೆ ಶ್ರೇಯಸ್‌ ಅಯ್ಯರ್‌, ರನ್‌ ಚೇಸಿಂಗ್‌ ಕಲೆಯನ್ನು ಕಲಿತ ಬಗ್ಗೆ ಮಾತನಾಡಿದ್ದಾರೆ. ಟೀಮ್‌ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿಯೇ ತಮಗೆ ಗುರು ಎಂದಿದ್ದಾರೆ.

Vijaya Karnataka Web 26 Jan 2020, 8:37 pm
ಆಕ್ಲೆಂಡ್‌: ಸತತ ಎರಡು ಪಂದ್ಯಗಳಲ್ಲಿ ಟೀಮ್‌ ಇಂಡಿಯಾದ ರನ್‌ ಚೇಸಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಿರುವ ಯುವ ಪ್ರತಿಭೆ ಶ್ರೇಯಸ್‌ ಅಯ್ಯರ್‌, ಗುರಿ ಬೆನ್ನತ್ತಿ ಪಂದ್ಯಗಳನ್ನು ಗೆದ್ದುಕೊಡುವುದರಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ತಮಗೆ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ.
Vijaya Karnataka Web Shreyas Iyer on virat kohli 2020


ಗುರಿ ಎಂಥದ್ದೇ ಇರಲಿ ಬೆನ್ನತ್ತಿ ಜಯ ದಕ್ಕಿಸಿಕೊಳ್ಳುವ ಕೊಹ್ಲಿ ಅವರ ಆಟದಿಂದ ಸಾಕಷ್ಟು ಪಾಠ ಕಲಿತಿರುವುದಾಗಿ ಹೇಳಿಕೊಂಡಿರುವ ಶ್ರೇಯಸ್‌, ಮುಂದಿನ ದಿನಗಳಲ್ಲಿ ತಾವು ಕೂಡ ಅದೇ ರೀತಿಯ ಆಟವನ್ನಾಡುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 59* ಮತ್ತು 44 ರನ್‌ಗಳನ್ನು ಗಳಿಸಿದ 25 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಶ್ರೇಯಸ್‌, ಈ ಮೊದಲು ಸಿಕ್ಸರ್‌ ಸಿಡಿಸಿ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಡುವುದೆಂದರೆ ಅಚ್ಚು ಮೆಚ್ಚು ಎಂದು ಹೇಳಿಕೊಂಡಿದ್ದರು. ಇದೀಗ ಕೊಹ್ಲಿ ಮಾರ್ಗವನ್ನು ಅನುಸರಿಸುವ ಇಂಗಿತ ವ್ಯಕ್ತ ಪಡಿಸಿ ಭಾರತ ತಂಡದ ಭವಿಷ್ಯದ ಫಿನಿಷರ್‌ ಆಗುವ ಇಂಗಿತ ವ್ಯಕ್ತ ಪಡಿಸಿದ್ದಾರೆ.

ರೋಹಿತ್‌, ವಿರಾಟ್‌ ಕೈಕೊಟ್ಟಾಗ ತಂಡವನ್ನು ಗುರಿಮುಟ್ಟಿಸಿದ ಬಗ್ಗೆ ಮಾತನಾಡಿದ ರಾಹುಲ್!

ಟೀಮ್‌ ಇಂಡಿಯಾಗೆ ಹಲವು ಸಮಯದಿಂದ ಕಾಡುತ್ತಿದ್ದ ನಂ.4 ಬ್ಯಾಟ್ಸ್‌ಮನ್‌ನ ಕೊರತೆಯನ್ನು ಶ್ರೇಯಸ್‌ ಅಯ್ಯರ್‌ ನೀಗಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು 4ನೇ ಕ್ರಮಾಂಕದಲ್ಲಿ ಆಡಿದ ಶ್ರೇಯಸ್‌ 33 ಎಸೆತಗಳಲ್ಲಿ 44 ರನ್‌ ಸಿಡಿಸಿದರು. ಆದರೆ ಸಿಕ್ಸರ್‌ ಬಾರಿಸಿ ಅರ್ಧಶತಕ ಬಾರಿಸುವ ಪ್ರಯತ್ನ ನಡೆಸಿ ಕ್ಯಾಚ್‌ ಔಟ್‌ ಆದರು.

ಪಂದ್ಯದಲ್ಲಿ 133 ರನ್‌ಗಳ ಸುಲಭದ ಗುರಿ ಬೆನ್ನತ್ತಿದ್ದ ಭಾರತ ತಂಡ ಕೆಎಲ್‌ ರಾಹುಲ್‌ ಅವರ ಅಜೇಯ 57 ರನ್‌ಗಳ ಬಲದಿಂದ 7 ವಿಕೆಟ್‌ ಜಯ ದಾಖಲಿಸಿ 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ. 3ನೇ ಪಂದ್ಯ ಬುಧವಾರ (ಜ.29ರಂದು) ಹ್ಯಾಮಿಲ್ಟನ್‌ನ ಸೆಡಾನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆಕ್ಲೆಂಡ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ ಮೂಲಕ ವಿಶೇಷ ದಾಖಲೆ ಬರೆದ ಕೆಎಲ್‌ ರಾಹುಲ್!

"ರನ್‌ ಚೇಸ್‌ ಮಾಡುವಾಗ ಓವರ್‌ಗೆ ಎಷ್ಟು ರನ್‌ ಗಳಿಸಿದರೆ ಗುರಿ ಮುಟ್ಟಲು ಸಾಧ್ಯವೆಂಬ ಸ್ಪಷ್ಟ ಲೆಕ್ಕಾಚಾರ ನಿಮ್ಮೊಳಗಿರಬೇಕು. ಇದಕ್ಕೆ ವಿರಾಟ್‌ ಕೊಹ್ಲಿ ಅತ್ಯುತ್ತಮ ಉದಾಹರಣೆ. ಅವರು ಬ್ಯಾಟ್‌ ಮಾಡಲು ಇಳಿದಾಗಲೆಲ್ಲಾ ಇಂಥದ್ದೊಂದು ಲೆಕ್ಕಾಚಾರ ಅವರಲ್ಲಿರುತ್ತದೆ. ವೈಯಕ್ತಿಕವಾಗಿ ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ. ಪ್ರತಿ ಪಂದ್ಯದಲ್ಲೂ ತಂಡಕ್ಕೆ ಜಯ ತಂದುಕೊಡಲು ಅಂತ್ಯದವರೆಗೂ ಹೋರಾಡುತ್ತಾರೆ. ಇದು ಅವರಲ್ಲಿನ ಅತ್ಯುತ್ತಮ ಗುಣ," ಎಂದು ಕಿವೀಸ್‌ ವಿರುದ್ಧದ 2ನೇ ಟಿ20 ಪಂದ್ಯದ ಗೆಲುವಿನ ಬಳಿಕ ಶ್ರೇಯಸ್‌ ಹೇಳಿದ್ದಾರೆ.

ಕಿವೀಸ್‌ ವಿರುದ್ಧ ಸತತ ಎರಡನೇ ಗೆಲುವಿನ ಗುಟ್ಟನ್ನು ಬಿಚ್ಚಿಟ್ಟ ಟೀಮ್‌ ಇಂಡಿಯಾ ಕ್ಯಾಪ್ಟನ್‌!

"ರೋಹಿತ್‌ ಶರ್ಮಾ ಅವರಿಂದಲೂ ಸಾಕಷ್ಟು ಕಲಿತಿದ್ದೇನೆ. ಅವರು ಸಿಕ್ಕ ಅವಕಾಶಗಳನ್ನೆಲ್ಲಾ ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ತಂಡದಲ್ಲಿ ಈ ರೀತಿಯ ಅದ್ಭುತ ವ್ಯಕ್ತಿತ್ವಗಳಿದ್ದು, ನಮ್ಮಂತ ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ. ಇವರಿಂದ ಕಲಿಯುವುದು ಬಹಳಷ್ಟಿದೆ. ಅಂತೆಯೇ ಕಲಿತಿರುವುದನ್ನು ಪ್ರತಿ ಪಂದ್ಯದಲ್ಲಿ ನನ್ನ ಆಟದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ," ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌