Please enable javascript.Shubman Gill,IND vs NZ: 'ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ'-ಗೆಲುವಿನ ಬಳಿಕ ಹಾರ್ದಿಕ್ ಸಲಹೆ ನೆನೆದ ಶುಭಮನ್ ಗಿಲ್‌! - ind vs nz 3rd t20i: 'i wasn't living up to my expectations in t20is. but you gave me confidence'-shubman gill's heartfelt message for hardik - Vijay Karnataka

IND vs NZ: 'ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ'-ಗೆಲುವಿನ ಬಳಿಕ ಹಾರ್ದಿಕ್ ಸಲಹೆ ನೆನೆದ ಶುಭಮನ್ ಗಿಲ್‌!

Authored byರಮೇಶ ಕೋಟೆ | Vijaya Karnataka Web 2 Feb 2023, 2:42 pm
Subscribe

Shubman Gill's heartfelt message for Hardik: ನ್ಯೂಜಿಲೆಂಡ್‌ ವಿರುದ್ಧ ಆರಂಭಿಕ ಎರಡು ಪಂದ್ಯಗಳಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಶುಭಮನ್‌ ಗಿಲ್, ಬುಧವಾರ ಅಹಮದಬಾದ್‌ನಲ್ಲಿ ನಡೆದಿದ್ದ ಮೂರನೇ ಟಿ20 ಪಂದ್ಯದಲ್ಲಿ ಶಕ್ತಿಯುತವಾಗಿ ಕಮ್‌ಬ್ಯಾಕ್‌ ಮಾಡಿದ್ದರು. ಎದುರಿಸಿದ ಕೇವಲ 63 ಎಸೆತಗಳಲ್ಲಿ ಅಜೇಯ 126 ರನ್‌ ಗಳಿಸಿ ಟಿ20 ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕ ಸಿಡಿಸಿದರು. ಆ ಮೂಲಕ ಭಾರತ ತಂಡ 168 ರನ್‌ಗಳ ದಾಖಲೆಯ ಗೆಲುವಿಗೆ ನೆರವಾದರು. ಪಂದ್ಯದ ಬಳಿಕ ಹಾರ್ದಿಕ್‌ ಪಾಂಡ್ಯ ಜೊತೆ ಮಾತನಾಡುವ ವೇಳೆ ಗಿಲ್‌ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಹೈಲೈಟ್ಸ್‌:

  • ನ್ಯೂಜಿಲೆಂಡ್‌ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಶುಭಮನ್ ಗಿಲ್ 63 ಎಸೆತಗಳಲ್ಲಿ ಅಜೇಯ 126 ರನ್‌ ಸಿಡಿಸಿದರು.
  • ಶುಭಮನ್ ಗಿಲ್‌ ಶತಕದ ಬಲದಿಂದ ಭಾರತ ತಂಡ ಅಂತಿಮ ಪಂದ್ಯದಲ್ಲಿ ದಾಖಲೆಯ 168 ರನ್‌ ಗೆಲುವು ಪಡೆಯಿತು.
  • ಪಂದ್ಯಕ್ಕೂ ಮುನ್ನ ನಾಯಕ ಹಾರ್ದಿಕ್‌ ಪಾಂಡ್ಯ ನೀಡಿದ್ದ ಸಲಹೆಯನ್ನು ಹಾರ್ದಿಕ್ ಪಾಂಡ್ಯ ರಿವೀಲ್‌ ಮಾಡಿದ್ದಾರೆ.
Hardik pandya-Shubman Gill
ಹಾರ್ದಿಕ್‌ ಪಾಂಡ್ಯ-ಶುಭಮನ್ ಗಿಲ್‌ (ಚಿತ್ರ: ಬಿಸಿಸಿಐ ಟ್ವಿಟರ್‌)
ಅಹಮದಾಬಾದ್‌: ನ್ಯೂಜಿಲೆಂಡ್‌ ಎದುರು ಆರಂಭಿಕ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸುವ ಮೂಲಕ ಶುಭಮನ್ ಗಿಲ್ ಟೀಕೆಗೆ ಗುರಿಯಾಗಿದ್ದರು. ಆ ಮೂಲಕ ಮೂರನೇ ಪಂದ್ಯದಲ್ಲಿ ಗಿಲ್‌ ಬದಲು ಪೃಥ್ವಿ ಶಾ ಇನಿಂಗ್ಸ್ ಆರಂಭಿಸಬಹುದು ಎಂದು ಭಾವಿಸಲಾಗಿತ್ತು. ಆದರೆ, ನಾಯಕ ಹಾರ್ದಿಕ್‌ ಪಾಂಡ್ಯ ಸೇರಿದಂತೆ ಟೀಮ್‌ ಮ್ಯಾನೇಜ್‌ಮೆಂಟ್‌ ಪಂಜಾಬ್‌ ಮೂಲದ ಆಟಗಾರನಿಗೆ ಮತ್ತೊಂದು ಅವಕಾಶವನ್ನು ನೀಡಿತು.
ಅದರಂತೆ ಮೂರನೇ ಟಿ20 ಪಂದ್ಯದಲ್ಲಿ ಸಿಕ್ಕ ಮತ್ತೊಂದು ಅವಕಾಶವನ್ನು ಶುಭಮನ್ ಗಿಲ್ ಬಳಸಿಕೊಂಡರು. ಎದುರಿಸಿದ 63 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ ಅಜೇಯ 126 ರನ್‌ ಗಳಿಸುವ ಜೊತೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕ ಬಾರಿಸಿದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 234 ರನ್‌ ಕಲೆ ಹಾಕಿತು.

ಬಳಿಕ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ, ಹಾರ್ದಿಕ್‌ ಪಾಂಡ್ಯ (22ಕ್ಕೆ 4) ಸೇರಿದಂತೆ ಭಾರತ ತಂಡದ ಪರಿಣಾಮಕಾರಿ ಬೌಲಿಂಗ್‌ ದಾಳಿಗೆ ನಲುಗಿ ಕೇವಲ 66 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 168 ರನ್‌ಗಳ ಭಾರಿ ಅಂತರದಲ್ಲಿ ಸೋತು ಪ್ರವಾಸಿಗರು ಮುಖಭಂಗ ಅನುಭವಿಸಿದರು. ಶುಭಮನ್ ಗಿಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
IND vs NZ: ಭಾರತ ತಂಡಕ್ಕೆ 168 ರನ್‌ಗಳ ಬೃಹತ್ ಗೆಲುವು, ಸರಣಿ ಜಯ!
ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಅವರ ಜೊತೆ ಸಂಭಾಷಣೆಯಲ್ಲಿ ಶುಭಮನ್ ಗಿಲ್‌, "ನಿರೀಕ್ಷೆಯಂತೆ ಟಿ20 ಕ್ರಿಕೆಟ್‌ನಲ್ಲಿ ನಾನಿನ್ನೂ ಉತ್ತಮ ಪ್ರದರ್ಶನ ತೋರಿಲ್ಲ. ಹಾಗಾಗಿ ಈ ಸ್ವರೂಪದಲ್ಲಿ ಹೆಚ್ಚಿನ ರನ್‌ಗಳನ್ನು ಗಳಿಸಲು ಎದುರು ನೋಡುತ್ತಿದ್ದೇನೆ. 'ನಿಮ್ಮ ಆಟದ ಮೇಲಿ ನಿಮಗೆ ನಂಬಿಕೆ ಇರಲಿ' ಎಂದು ಹೇಳುವ ಮೂಲಕ ಪಂದ್ಯಕ್ಕೂ ಮುನ್ನ ನೀವು ನನಗೆ ವಿಶ್ವಾಸವನ್ನು ತುಂಬಿದ್ದೀರಿ," ಎಂದು ಹೇಳಿದರು.

"ಟಿ20 ಕ್ರಿಕೆಟ್‌ನಲ್ಲಿ ಹೆಚ್ಚುವರಿ ಏನು ಮಾಡಬೇಕು ಅಥವಾ ಏನು ಮಾಡಬಾರದೆಂಬ ಬಗ್ಗೆ ನನಗೆ ಗೊತ್ತಿರಲಿಲ್ಲ. ಕೆಲ ಸಣ್ಣ-ಸಣ್ಣ ಸಂಗತಿಗಳು ನನಗೆ ತುಂಬಾ ನೆರವಾಯಿತು. ನನ್ನ ತಂದೆ ನನಗೆ ಅಭ್ಯಾಸ ಮಾಡಿಸುತ್ತಿದ್ದರು. ಇದರ ಶೇ. 90 ರಷ್ಟು ಶ್ರೇಯ ನನ್ನ ತಂದೆಗೆ ಸಲ್ಲಬೇಕು," ಎಂದು ಶುಭಮನ್ ಗಿಲ್‌ ನಾಯಕ ಹಾರ್ದಿಕ್‌ ಪಾಂಡ್ಯ ತಿಳಿಸಿದರು.
IND vs NZ: 'ಎಂಎಸ್‌ ಧೋನಿ ಇದ್ದಾಗ ಸಿಕ್ಕಾಪಟ್ಟೆ ಸಿಕ್ಸರ್ ಬಾರಿಸುತ್ತಿದ್ದೆ, ಈಗ ಆಗುತ್ತಿಲ್ಲ'- ಹಾರ್ದಿಕ್‌ ಪಾಂಡ್ಯ!
ಮೂರನೇ ಪಂದ್ಯದ ತಮ್ಮ ಇನಿಂಗ್ಸ್‌ನಲ್ಲಿ ಮತ್ತೊಂದು ತುದಿಯಲ್ಲಿ ಕೆಲ ಕಾಲ ಜೊತೆಯಾಟವಾಡಿದ್ದ ಹಾರ್ದಿಕ್‌ ಪಾಂಡ್ಯ ಅವರು ನನಗೆ ನಿಯಂತ್ರಣದಲ್ಲಿರುವಂತೆ ಆಗಾಗ ಹೇಳುತ್ತಿದ್ದರು ಎಂಬ ಅಂಶವನ್ನು ಇದೇ ವೇಳೆ ಯುವ ಬ್ಯಾಟ್ಸ್‌ಮನ್‌ ಬಹಿರಂಗಪಡಿಸಿದ್ದಾರೆ.

"ನಾನು ಹೇಗೆ ಆಡಬೇಕು ಎಂಬ ಬಗ್ಗೆ ಮಾನಸಿಕವಾಗಿ ನನಗೆ ಸ್ಪಷ್ಟತೆ ಇತ್ತು. ಇದನ್ನೇ ಅವರು(ಹಾರ್ದಿಕ್‌ ಪಾಂಡ್ಯ) ನನಗೆ ಹೇಳಿದ್ದರು. ನಾನು ಪ್ರತಿ ಬಾರಿ ಸಿಕ್ಸರ್ ಹೊಡೆದಾಗ, ಅವರು ನನ್ನ ಬಳಿ ಬಂದು ನಿಮ್ಮ ಮೇಲೆ ನಿಯಂತ್ರಣ ಇರಲಿ ಎಂದು ಹೇಳುತ್ತಿದ್ದರು. ಹೆಚ್ಚುವರಿಯಾಗಿ ಏನೂ ಮಾಡಬೇಡಿ ಹಾಗೂ ಕಠಿಣವಾಗಿ ಆಡಲು ಪ್ರಯತ್ನಿಸಬೇಡಿ ಎಂದು ನನಗೆ ಆಗಾಗ ನೆನಪು ಮಾಡುತ್ತಲೇ ಇದ್ದರು, ಅದರಲ್ಲೂ ವಿಶೇಷವಾಗಿ ಮಿಚೆಲ್‌ ಸ್ಯಾಂಟ್ನರ್‌ ಅವರ ಕೊನೆಯ ಓವರ್‌ನಲ್ಲಿ," ಎಂದು ಹಾರ್ದಿಕ್ ಪಾಂಡ್ಯ ಅವರ ಸಲಹೆಯನ್ನು ಗಿಲ್‌ ರಿವೀಲ್‌ ಮಾಡಿದರು.
IND vs NZ: 'ಭಾರತಕ್ಕೆ ಮತ್ತೊಬ್ಬ 360 ಡಿಗ್ರಿ ಆಟಗಾರ ಸಿಕ್ಕಿದ್ದಾರೆ'-ರಾಹುಲ್ ತ್ರಿಪಾಠಿಗೆ ಫ್ಯಾನ್ಸ್‌ ಮೆಚ್ಚುಗೆ!
"ನಾನು ನನ್ನ ಝೋನ್‌ನಲ್ಲಿದ್ದೆ ಹಾಗೂ ಹೊಡೆಯುತ್ತಿದೆ. ಅದರಂತೆ ಮಿಚೆಲ್‌ ಸ್ಯಾಂಟ್ನರ್‌ ಅವರಿಗೂ ಟಾರ್ಗೆಟ್‌ ಮಾಡಲು ಎದುರು ನೋಡುತ್ತಿದೆ. ಆದರೆ, ಇವರನ್ನು ಬಿಟ್ಟು ಬೇರೆ ಬೌಲರ್‌ಗಳನ್ನು ಟಾರ್ಗೆಟ್‌ ಮಾಡಿ ಎಂದು ನೀವು ಹೇಳಿದ್ರಿ. ಏಕೆಂದರೆ ಸ್ಯಾಂಟ್ನರ್‌ ತುಂಬಾ ಚೆನ್ನಾಗಿ ಬೌಲ್ ಮಾಡುತ್ತಿದ್ದರು. ತಾಂತ್ರಿಕವಾಗಿ ಅವರು ಚೆನ್ನಾಗಿದ್ದರು. ಏನೇ ಆಗಲಿ ಇದು ನನ್ನ ಪಾಲಿಗೆ ಪರಿಪೂರ್ಣ ಆಟವಾಗಿತ್ತು," ಎಂದು ಶುಭಮನ್ ಗಿಲ್‌ ತಿಳಿಸಿದರು.

ಭಾರತ Vs ನ್ಯೂಜಿಲೆಂಡ್‌ ಮೂರನೇ ಟಿ20 ಪಂದ್ಯದ ಸ್ಕೋರ್‌ಕಾರ್ಡ್
ರಮೇಶ ಕೋಟೆ
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ