ಆ್ಯಪ್ನಗರ

ಪೂಜಾರ ಮಾಡಿದ ಒಂದು ತಪ್ಪು ಭಾರತ ತಂಡಕ್ಕೆ ದುಬಾರಿಯಾಯಿತೆಂದ ಹಾಗ್‌!

ನ್ಯೂಜಿಲೆಂಡ್‌ ತಂಡಕ್ಕೆ 55 ರನ್‌ ಅಗತ್ಯವಿದ್ದ ವೇಳೆ ರಾಸ್‌ ಟೇಲರ್‌ ಅವರ ಕ್ಯಾಚ್‌ ಅನ್ನು ಚೇತೇಶ್ವರ್ ಪೂಜಾರ ಪಡೆದಿದ್ದರೆ ಪಂದ್ಯದ ದಿಕ್ಕು ಭಾರತದ ಪರ ಟರ್ನ್‌ ಆಗುವ ಸಾಧ್ಯತೆ ಇತ್ತು ಎಂದು ಬ್ರಾಡ್‌ ಹಾಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Vijaya Karnataka Web 24 Jun 2021, 4:32 pm

ಹೈಲೈಟ್ಸ್‌:

  • ರಾಸ್‌ ಟೇಲರ್‌ ಕ್ಯಾಚ್‌ ಪೂಜಾರ ಕೈ ಚೆಲ್ಲಿದ್ದು ಭಾರತಕ್ಕೆ ದುಬಾರಿ ಆಯಿತೆಂದ ಹಾಗ್‌.
  • ಭಾರತವನ್ನು ಮಣಿಸಿದ ನ್ಯೂಜಿಲೆಂಡ್‌ಗೆ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಗರಿ.
  • ಭಾರತದ ವಿರುದ್ಧ ಎಂಟು ವಿಕೆಟ್‌ಗಳಿಂದ ಗೆದ್ದು ಚಾಂಪಿಯನ್‌ ಆದ ನ್ಯೂಜಿಲೆಂಡ್.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Taylor-kane-pujara
ಟೇಲರ್‌-ಕೇನ್-ಪೂಜಾರ (ಚಿತ್ರ: ಐಸಿಸಿ ಟ್ವಿಟರ್‌/ಟಿಒಐ)
ಹೊಸದಿಲ್ಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ 55 ರನ್‌ ಅಗತ್ಯವಿದ್ದ ವೇಳೆ ಚೇತೇಶ್ವರ್‌ ಪೂಜಾರ, ರಾಸ್‌ ಟೇಲರ್‌ ಅವರ ಕ್ಯಾಚ್‌ ಚೆಲ್ಲಿದ್ದು ಭಾರತ ತಂಡಕ್ಕೆ ದುಬಾರಿಯಾಯಿತು ಎಂದು ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒತ್ತಡದ ಸನ್ನಿವೇಶದಲ್ಲಿ ಚೇತೇಶ್ವರ್‌ ಪೂಜಾರ, ರಾಸ್‌ ಟೇಲರ್‌ ಅವರ ಕ್ಯಾಚ್‌ ಅನ್ನು ಪಡೆದುಕೊಂಡಿದ್ದರೆ ಸೌಥ್‌ಹ್ಯಾಂಪ್ಟನ್‌ನ ರೋಸ್‌ ಬೌಲ್ ಅಂಗಣದ ಮಹತ್ವದ ಪಂದ್ಯದಲ್ಲಿ ಏನು ಬೇಕಾದರೂ ನಡೆಯುತ್ತಿತ್ತು ಎಂಬುದು ಮಾಜಿ ಸ್ಪಿನ್ನರ್‌ ಅಭಿಪ್ರಾಯ.

ಜಸ್‌ಪ್ರಿತ್‌ ಬುಮ್ರಾ ಬೌಲಿಂಗ್‌ನಲ್ಲಿ ರಾಸ್‌ ಟೇಲರ್‌ ಅವರ ಸುಲಭ ಸ್ಲಿಪ್ ಕ್ಯಾಚ್‌ ಅನ್ನು ಚೇತೇಶ್ವರ್‌ ಪೂಜಾರ ಕೈ ಚೆಲ್ಲಿದರು. ಈ ವೇಳೆ ಕಿವೀಸ್‌ಗೆ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು 50ಕ್ಕೂ ಹೆಚ್ಚಿನ ರನ್‌ಗಳ ಅಗತ್ಯವಿತ್ತು. ಜೀವ ದಾನ ಪಡೆದ ಟೇಲರ್, ಅಜೇಯ 47 ರನ್‌ ಗಳಿಸಿದರು ಹಾಗೂ ಮತ್ತೊಂದು ತುದಿಯಲ್ಲಿ ಕೇನ್‌ ವಿಲಿಯಮ್ಸನ್‌ ಅಜೇಯ 52 ರನ್‌ ಗಳಿಸಿ ತಂಡಕ್ಕೆ ಎಂಟು ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಭಾರತ Vs ನ್ಯೂಜಿಲೆಂಡ್‌ ಪಂದ್ಯದ ಸ್ಕೋರ್‌ಕಾರ್ಡ್

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿದ ಬ್ರಾಡ್‌ ಹಾಗ್‌, ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ್ದರಿಂದ ಭಾರತ ತಂಡ ವಿಷಾದ ಪಡಬೇಕಾಯಿತು ಎಂದು ಹೇಳಿದರು.

"ನ್ಯೂಜಿಲೆಂಡ್‌ ತಂಡದಿಂದ ಅದ್ಭುತ ಪ್ರದರ್ಶನ ಮೂಡಿಬಂದಿದೆ. ಪಂದ್ಯ ಗೆಲ್ಲಲು ಭಾರತ ತಂಡಕ್ಕೂ ಕೂಡ ಬ್ಯಾಕ್‌ ಎಂಡ್‌ನಲ್ಲಿ ಅವಕಾಶ ಲಭ್ಯವಾಗಿತ್ತು. ಅದರಂತೆ ನ್ಯೂಜಿಲೆಂಡ್‌ಗೆ ಗೆಲ್ಲಲು 55 ರನ್‌ ಅಗತ್ಯವಿದ್ದ ವೇಳೆ ರಾಸ್‌ ಟೇಲರ್‌ ಅವರ ಕ್ಯಾಚ್‌ ಅನ್ನು ಪೂಜಾರ ಕೈಚೆಲ್ಲಿದ್ದರು. ಇದು ಭಾರತಕ್ಕೆ ದುಬಾರಿಯಾಯಿತು," ಎಂದರು.

WTC final: ಕಿವೀಸ್ ವಿರುದ್ಧ ಭಾರತದ ಸೋಲಿಗೆ ಪ್ರಮುಖ ಕಾರಣ ತಿಳಿಸಿದ ಕೊಹ್ಲಿ!

"ಇಂದು(ಬುಧವಾರ) ಪಂದ್ಯದ ಕೊನೆಯ ದಿನವಾಗಿದ್ದರಿಂದ ಒತ್ತಡದ ಸನ್ನಿವೇಶವಿತ್ತು. ಹೆನ್ರಿ ನಿಕೋಲ್ಸ್ ಹಾಗೂ ಬಿಜೆ ವ್ಯಾಟ್ಲಿಂಗ್‌ ಆಗಲೇ ಗಾಯಕ್ಕೆ ತುತ್ತಾಗಿದ್ದರು. ಟೇಲರ್‌ ವಿಕೆಟ್‌ ಒಪ್ಪಿಸಿದ್ದರೆ, ಮತ್ತೊಂದು ತುದಿಯಲ್ಲಿ ಅನುಭವಿ ಬ್ಯಾಟ್ಸ್‌ಮನ್ ಇರುತ್ತಿರಲಿಲ್ಲ. ಹಾಗಾಗಿ ಕೊನೆಯ ಹಂತದಲ್ಲಿ ಕೇನ್‌ ವಿಲಿಯಮ್ಸನ್ ದೊಡ್ಡ ಹೊಡೆತಗಳಿಗೆ ಕೈ ಹಾಕುತ್ತಿದ್ದರು. ಆ ಮೂಲ ಒತ್ತಡದ ಸನ್ನಿವೇಶದ ಪಂದ್ಯದಲ್ಲಿ ಏನು ಬೇಕಾದರೂ ನಡೆಯಬಹುದಿತ್ತು. ," ಎಂದು ಬ್ರಾಡ್‌ ಹಾಗ್ ತಿಳಿಸಿದರು.

ಡಬ್ಲ್ಯುಟಿಸಿ ಫೈನಲ್‌ನಲ್ಲಿ ಜಡೇಜಾ ಬದಲು ಈತನಿಗೆ ಅವಕಾಶ ನೀಡಬೇಕಿತ್ತೆಂದ ಜಾವೆದ್‌!

139 ರನ್‌ ಗುರಿ ಹಿಂಬಾಲಿಸಿದ್ದ ನ್ಯೂಜಿಲೆಂಡ್‌ ತಂಡದ ಪರ ಆರಂಭಿಕರಾದ ಡೆವೋನ್‌ ಕಾನ್ವೇ ಹಾಗೂ ಟಾಮ್‌ ಲಥಾಮ್ ಅವರನ್ನು ಆರ್‌ ಅಶ್ವಿನ್ ಔಟ್‌ ಮಾಡಿದ್ದರು. ನಂತರ ಜೊತೆಯಾದ ಕೇನ್ ವಿಲಿಯಮ್ಸನ್ ಹಾಗೂ ರಾಸ್‌ ಟೇಲರ್‌ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 96 ರನ್‌ ಕಲೆಹಾಕಿ ತಂಡವನ್ನು ಗೆಲುವಿನ ದಡ ಸೇರಿಸಿತು.

ಬೇಜವಾಬ್ದಾರಿಯುತ ಶಾಟ್‌ಗೆ ಕೈಹಾಕಿ ಔಟಾದ ಪಂತ್‌ ಬಗ್ಗೆ ಕೊಹ್ಲಿ ಹೇಳಿದ್ದಿದು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌