ಆ್ಯಪ್ನಗರ

ಭಾರತ vs ದ. ಆಫ್ರಿಕಾ: ದ್ವಿತೀಯ ಟೆಸ್ಟ್‌ಗೆ ಭಾರತದ ಸಂಭಾವ್ಯ XI ಹೀಗಿದೆ

ಮೊದಲ ಟೆಸ್ಟ್ ಪಂದ್ಯದಲ್ಲಿ ನಿರಾಯಾಸವಾಗಿ ಗೆದ್ದಿರುವ ಟೀಮ್‌ ಇಂಡಿಯಾ ತಮ್ಮದು ವಿಶ್ವದ ನಂ.1 ತಂಡ ಎಂಬುದನ್ನು ಸಾಬೀತು ಪಡಿಸಿರುವ ಟೀಮ್‌ ಇಂಡಿಯಾ, ಇದೀಗ ಎರಡನೇ ಟೆಸ್ಟ್‌ನಲ್ಲೂ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದೆ.

Vijaya Karnataka Web 9 Oct 2019, 3:02 pm
ಪುಣೆ: ಮೊದಲ ಟೆಸ್ಟ್‌ನಲ್ಲಿ ಸಿಕ್ಕ 203 ರನ್‌ಗಳ ಭರ್ಜರಿ ಜಯದ ವಿಶ್ವಾಸದಲ್ಲಿರುವ ಟೀಮ್‌ ಇಂಡಿಯಾ, ಇದೀಗ ಇಲ್ಲಿನ ಮಾಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ದ್ವಿತೀಯ ಟೆಸ್ಟ್‌ ಪಂದ್ಯವನ್ನಾಡಲು ಸಜ್ಜಾಗಿದೆ.
Vijaya Karnataka Web virat kohli practice for 2nd test vs sa 2019


ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ರೋಹಿತ್‌ ಶರ್ಮಾ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದರೆ, ಮಯಾಂಕ್‌ ಅಗರ್ವಾಲ್‌ ಚೊಚ್ಚಲ ದ್ವಿಶತಕ ದಾಖಲಿಸಿ ತಂಡದ ಗೆಲುವಿಗೆ ಬಲವಾದರು. ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್‌ 5 ವಿಕೆಟ್‌ ಪಡೆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ವೇಗಿ ಮೊಹಮ್ಮದ್‌ ಶಮಿ 5 ವಿಕೆಟ್‌ ಮತ್ತು ಎಗೈ ಸ್ಪಿನ್ನರ್‌ ರವೀಂದ್ರ ಜಡೇಜಾ 4 ವಿಕೆಟ್‌ ಪಡೆದು ಮ್ಯಾಚ್‌ ವಿನ್ನರ್‌ಗಳೆನಿಸಿದರು.

ಮಹೇಂದ್ರ ಸಿಂಗ್ ಧೋನಿ ಭವಿಷ್ಯದ ಬಗ್ಗೆ ಮಹತ್ತರ ಹೇಳಿಕೆ ನೀಡಿದ ಕೋಚ್ ರವಿಶಾಸ್ತ್ರಿ

ಈ ಮೂಲಕ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಅಖಾಡದಲ್ಲಿ ಟೀಮ್‌ ಇಂಡಿಯಾ ತನ್ನ ಅಗ್ರಸ್ಥಾನ ಕಾಯ್ದುಕೊಂಡಿದೆ. ಚಾಂಪಿಯನ್‌ಷಿಪ್‌ ಆರಂಭಗೊಂಡ ಬಳಿಕ ಭಾರತ ಆಡಿರುವ 3 ಟೆಸ್ಟ್‌ಗಳಲ್ಲಿ ಎಲ್ಲವನ್ನೂ ಗೆದ್ದಿದ್ದು, ದಕ್ಷಿಣ ಆಫ್ರಿಕಾ ಎದುರಿನ ಇನ್ನುಳಿದ 2 ಪಂದ್ಯಗಳನ್ನೂ ಗೆದ್ದು ಅಗ್ರ ಪಟ್ಟವನ್ನು ಮತ್ತಷ್ಟು ಬಲ ಪಡಿಸಿಕೊಳ್ಳುವ ಕಡೆಗೆ ಎದುರು ನೋಡುತ್ತಿದೆ.

ಮತ್ತೊಂದೆಡೆ ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಹೋರಾಟ ಪ್ರದರ್ಶಿಸಿದರೂ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡು 191ಕ್ಕೆ ಆಲ್‌ಔಟ್‌ ಆಗಿ ನಿರಾಸೆ ಅನುಭವಿಸಿದ ದಕ್ಷಿಣ ಆಫ್ರಿಕಾ, ಇದೀಗ ಎರಡನೇ ಟೆಸ್ಟ್‌ ಗೆದ್ದು 1-1ರಲ್ಲಿ ಸರಣಿ ಸಮಬಲ ತಂದುಕೊಳ್ಳುವ ಕಡೆಗೆ ರಣತಂತ್ರ ರೂಪಿಸಿದೆ.

ಬ್ಯಾಕ್ ಟು ಬ್ಯಾಕ್ ಶತಕಗಳ ಮಧ್ಯೆ ಅನಗತ್ಯ ದಾಖಲೆ ಬರೆದ ರೋಹಿತ್ ಶರ್ಮಾ

ಭಾರತದ ಸಂಭ್ಯಾವ 11 ಹೀಗಿದೆ
ಮಯಾಂಕ್‌ ಅಗರ್ವಾಲ್‌, ರೋಹಿತ್‌ ಶರ್ಮಾ, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ರವೀಂದ್ರ ಜಡೇಜಾ, ಆರ್‌. ಅಶ್ವಿನ್‌, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌.

ಮಹೇಂದ್ರ ಸಿಂಗ್ ಧೋನಿ ಈ ಯುಗದ ಶ್ರೇಷ್ಠ ವೈಟ್ ಬಾಲ್ ಕ್ಯಾಪ್ಟನ್; ಒಪ್ತೀರಾ?

ದಕ್ಷಿಣ ಆಫ್ರಿಕಾ ತಂಡ
ಫಾಫ್‌ ಡು'ಪ್ಲೆಸಿಸ್‌ (ನಾಯಕ), ತೆಂಬಾ ಬಾವೂಮ, ತೆಯೂನಿಸ್‌ ಡೆ'ಬ್ರೂಯ್ನ್‌, ಕ್ವಿಂಟನ್‌ ಡಿ;ಕಾಕ್‌ (ವಿಕೆಟ್‌ ಕೀಪರ್‌), ಡೀನ್‌ ಎಲ್ಗರ್‌, ಹೆನ್ರಿಚ್‌ ಕ್ಲಾಸನ್‌, ಕೇಶವ್‌ ಮಹಾರಾಜ್‌, ಏಡನ್‌ ಮಾರ್ಕ್ರಮ್‌, ಸೆನುರಾನ್‌ ಮುತ್ತುಸ್ವಾಮಿ, ಲುಂಗಿ ಎನ್ಗಿಡಿ, ಎನ್ರಿಚ್‌ ನಾರ್ಜೆ, ವೆರ್ನಾನ್‌ ಫಿಲ್ಯಾಂಡರ್‌, ಡೇನ್‌ ಪೀಡ್ತ್‌.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌