ಆ್ಯಪ್ನಗರ

ಚೊಚ್ಚಲ ದ್ವಿಶತಕದ ಬಳಿಕ ಮುಂದಿನ ಗುರಿಯೇನೆಂದು ಬಾಯ್ಬಿಟ್ಟ ಹಿಟ್‌ಮ್ಯಾನ್‌!

ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರಂಭಕಾರನಾಗಿ ಪದಾರ್ಪಣೆ ಮಾಡಿದ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ರೋಹಿತ್‌ ಶರ್ಮಾ, ಇದೀಗ ರಾಂಚಿ ಟೆಸ್ಟ್‌ನಲ್ಲಿ ವೃತ್ತಿ ಜೀವನದ ಚೊಚ್ಚಲ ದ್ವಿಶತಕ ಬಾರಿಸಿ ಅಬ್ಬರಿದ್ದಾರೆ.

Vijaya Karnataka Web 20 Oct 2019, 8:15 pm
ರಾಂಚಿ: ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಮಿಂಚಬಲ್ಲೆ ಎಂಬುದನ್ನು ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ ಸಾಬೀತು ಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ನ ಚೊಚ್ಚಲ ದ್ವಿಶತಕ ದಾಖಲಿಸಿದ ರೋಹಿತ್‌, ತಮ್ಮ ಮುಂದಿನ ಗುರಿಗಳ ಕುರಿತಾಗಿ ಮಾತನಾಡಿದ್ದಾರೆ.
Vijaya Karnataka Web rohit sharma on double hundred 2019


ಹರಿಣ ಪಡೆಯ ವಿರುದ್ಧದ ಸರಣಿಯಲ್ಲಿ ರೋಹಿತ್‌ ಆಡಿದ ಒಟ್ಟು ನಾಲ್ಕು ಇನಿಂಗ್ಸ್‌ಗಳಲ್ಲಿ ಮೂರರಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. 3 ಪಂದ್ಯಗಳಿಂದ ಒಟ್ಟು 529 ರನ್‌ಗಳನ್ನು ಬಾರಿಸಿರುವ ಹಿಟ್‌ಮ್ಯಾನ್‌, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ 500+ ರನ್‌ ಗಳಿಸಿದ ಮೊತ್ತ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನೂ ಬರೆದಿದ್ದಾರೆ.

ಭಾರತ vs ದ. ಆಫ್ರಿಕಾ 3ನೇ ಟೆಸ್ಟ್‌ score ಪಡೆಯಲು ಕ್ಲಿಕ್‌ ಮಾಡಿ

ಇನ್ನು 3ರ್ನ ಹಾಗೂ ಅಂತಿಮ ಟೆಸ್ಟ್‌ ಪಂದ್ಯದ 2ನೇ ದಿನವಾದ ಭಾನುವಾರ ಸತತ 2 ಸಿಕ್ಸರ್‌ಗಳೊಂದಿಗೆ 200 ರನ್‌ಗಳ ಗಡಿ ದಾಟಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಅವರು, ದಿನದಾಟ ಮಂದ ಬೆಳಕಿನ ಕಾರಣ ನಿಗದಿತ ಸಮಯಕ್ಕೂ ಮೊದಲೇ ಅಂತ್ಯಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

"ಇಲ್ಲಿ ರನ್‌ ಗಳಿಸುವುದರ ಕಡೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ ವಿದೇಶಿ ಸರಣಿಗಳಲ್ಲಿ ರನ್‌ ಗಳಿಸುವುದು ಮುಖ್ಯ. ಅದು ವಿಭಿನ್ನ ಸವಾಲು. ಆ ಸವಾಲನ್ನು ಮೆಟ್ಟಿನಿಲ್ಲುವುದನ್ನು ಎದುರು ನೋಡುತ್ತಿದ್ದೇನೆ," ಎಂದು ಚೊಚ್ಚಲ ದ್ವಿಶತಕದ ಬಳಿಕ ತಮ್ಮ ಮುಂದಿನ ಗುರಿ ಏನೆಂಬುದನ್ನು ರೋಹಿತ್‌ ಬಿಚ್ಚಿಟ್ಟಿದ್ದಾರೆ.

ಸಿಕ್ಸ್‌ ಹೊಡೆದು ದ್ವಿಶತಕ ಬಾರಿಸಿದ ಹಿಟ್‌ಮ್ಯಾನ್‌, ಸೆಹ್ವಾಗ್‌, ಗವಾಸ್ಕರ್‌ ಎಲೈಟ್‌ ಸಾಲಿಗೆ ರೋಹಿತ್‌!

ಇದೇ ವೇಳೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾದ ಓಪನರ್‌ ಆಗಿ ಆಡಿದ ಅನುಭವದ ಕುರಿತಾಗು ಮಾತನಾಡಿದ ರೋಹಿತ್‌, "ಖಂಡಿತಾ ಇದು ಅತ್ಯಂತ ಸವಾಲಿನ ಸಂಗತಿ. ಏಕೆಂದರೆ ಇದಕ್ಕೂ ಮುನ್ನ ನಾನು ಕವಲ 30 ಪಂದ್ಯಗಳನ್ನಷ್ಟೇ ಆಡಿದ್ದೆ. ಹೀಗಿರುವಾಗ ನನ್ನೆದುರು ಇರಿಸಲಾದ ಸವಾಲು ಬಹಳ ಕಠಿಣವಾಗಿತ್ತು. ಇದು ಅತ್ಯಂತ ಸವಾಲಿನ ಸಂಗತಿ ಎಂದೇ ಹೇಳಬಹುದು," ಎಂದಿದ್ದಾರೆ.

ಹಿಟ್‌ಮ್ಯಾನ್‌ ರೋಹಿತ್‌ಗೆ ಟಿ20ಯಲ್ಲೂಂದು ದ್ವಿಶತಕ ಸಿಡಿಸೋದಷ್ಟೇ ಬಾಕಿ!

ಆರಂಭಿಕನಾಗಿ ಯಶಸ್ಸು ಕಂಡ ಕುರಿತಾಗಿ ಮಾತನಾಡಿ, "6ನೇ ಮತ್ತು 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವುದಕ್ಕಿಂತಲೂ ಆರಂಭಿಕನಾಗಿ ಆಡುವುದು ವಿಭಿನ್ನವಾಗಿರುತ್ತದೆ. ಇದಕ್ಕಾಗಿ ನೀವು ಹೇಗೆ ಸಜ್ಜಾಗಿದ್ದೀರಿ, ನಿಮ್ಮ ಮನದೊಳಗೆ ಏನನ್ನು ಆಲೋಚಿಸುತ್ತಿದ್ದೀರಿ, ಸಾಧಿಸಲು ಏನು ಮಾಡಬೇಕು ಎಂಬುದನ್ನು ಯೋಚಿಸಿದ್ದೀರಿ ಎಂಬುದರ ಮೇಲೆ ಎಲ್ಲವೂ ನಿರ್ಧರಿತವಾಗಿರುತ್ತದೆ. ಹೊಸ ಚೆಂಡನ್ನು ಎದುರಿಸುವುದಕ್ಕೂ 40-50 ಓವರ್‌ಗಳ ಹಳೆಯ ಚೆಂಡನ್ನು ಎದುರಿಸುವುದಕ್ಕೂ ಬಹಳಾ ವ್ಯತ್ಯಾಸವಿದೆ. ಅಂದಹಾಗೆ ನನ್ನ ತಂತ್ರಗಾರಿಕೆಯಲ್ಲಿ ನಾನೇನು ಬದಲಾವಣೆ ತಂದುಕೊಂಡಿಲ್ಲ," ಎಂದು ಹೇಳಿದ್ದಾರೆ.

ಅನಗತ್ಯ ಕಾರಣ ಕೊಟ್ಟ ಡೀನ್‌ ಎಲ್ಗರ್‌ಗೆ ಬಿಸಿ ಮುಟ್ಟಿಸಿದ ಟೀಮ್‌ ಇಂಡಿಯಾ ಫ್ಯಾನ್ಸ್‌!

"ಹೊಸ ಚೆಂಡು ಎಂತಹ ಪರಿಸ್ಥಿತಿಯಲ್ಲೂ ಕೊಂಚ ಸ್ವಿಂಗ್‌ ಪಡೆದುಕೊಳ್ಳುತ್ತದೆ. ಪುಣೆ ಮತ್ತು ರಾಂಚಿ ಟೆಸ್ಟ್‌ನ ಆರಂಭದಲ್ಲಿ ಇದನ್ನು ಕಂಡಿದ್ದೇವೆ. ಹೊಸ ಚೆಂಡನ್ನು ಎದುರಿಸುವಾಗ ಯಾವ ಚೆಂಡನ್ನು ಆಡಬೇಕು ಯಾವ ಚೆಂಡನ್ನು ಬಿಡಬೇಕು ಎಂಬುದನ್ನು ನೀವು ನಿರ್ಧರಿಸಬೇಕು. ಹೀಗಾಗಿ ರನ್‌ ಗಳಿಸಲು ಮುಂದಾಗುವುದಕ್ಕಿಂತಲೂ ಹೊಂದಿಕೊಳ್ಳಲು ಹೆಚ್ಚೆ ಸಮಯ ತೆಗೆದುಕೊಂಡೆ. ಹೊಸ ಚೆಂಡಿನ ಎದುರು ನೇರವಾಗಿ ಹೊಡೆಬಡಿಯ ಆಟಕ್ಕೆ ಮುಂದಾಗುವುದು ಸೂಕ್ತವಲ್ಲ," ಎಂದು ತಮ್ಮ ಯಶಸ್ಸಿನ ಹಿಂದಿರುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌