ಆ್ಯಪ್ನಗರ

ಭಾರತ ವಿರುದ್ಧದ ಟಿ20 ಸರಣಿ ಸೋಲಿನ ಬಳಿಕ ನಾಯಕತ್ವ ಬಿಡಲು ಮುಂದಾದ ಮಾಲಿಂಗ

ಆತಿಥೇಯ ಟೀಮ್‌ ಇಂಡಿಯಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಲ್ಲಿ ಹೀನಾಯ ಸೋಲನುಭವಿಸಿದರ ಸಂಪೂರ್ಣ ಹೊಣೆ ಹೊತ್ತ ಶ್ರೀಲಂಕಾ ತಂಡದ ನಾಯಕ ಲಸಿತ್‌ ಮಾಲಿಂಗ ನಾಯಕತ್ವ ಬಿಡಲು ಮುಂದಾಗಿದ್ದಾರೆ.

Vijaya Karnataka Web 12 Jan 2020, 10:00 pm
ಕೊಲಂಬೊ: ಭಾರತ ಪ್ರವಾಸದಲ್ಲಿ ನಡೆದ ಟಿ20 ಕ್ರಿಕೆಟ್‌ ಸರಣಿಯಲ್ಲಿ ಶ್ರೀಲಂಕಾ ತಂಡದ ಹೀನಾಯ ಸೋಲಿನ ಹೊಣೆ ಹೊತ್ತುಕೊಂಡಿರುವ ಅನುಭವಿ ವೇಗಿ ಲಸಿತ್‌ ಮಾಲಿಂಗ ಲಂಕಾ ಪಡೆಯ ನಾಯತ್ವದಿಂದ ಕೆಳಗಿಳಿಯುವ ಇಂಗಿತ ವ್ಯಕ್ತ ಪಡಿಸಿದ್ದಾರೆ.
Vijaya Karnataka Web Lasith Malinga sl captaincy 2020


ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಹಣಾಹಣಿಯ ಮಳೆ ಕಾರಣ ರದ್ದಾದರೆ, ನಂತರದ ಎರಡೂ ಪಂದ್ಯಗಳಲ್ಲಿ ಟೀಮ್‌ ಇಂಡಿಯಾ ಭರ್ಜರಿ ಜಯ ದಾಖಲಿಸಿ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಆದರೆ, ಲಂಕಾ ಪಡೆ ಎಲ್ಲಿಯೂ ಭಾರತ ತಂಡಕ್ಕೆ ದಿಟ್ಟ ಸವಾಲೊಡ್ಡುವ ಸೂಚನೆಯನ್ನೂ ನೀಡಲಿಲ್ಲ.

"ನಮ್ಮ ತಂಡದಲ್ಲಿ ದಿಟ್ಟ ಪ್ರದರ್ಶನ ನೀಡುವ ಸಾಮರ್ಥ್ಯ ಇರಲಿಲ್ಲ," ಎಂದು ಶ್ರೀಲಂಕಾ ತಂಡದ ನಾಯಕ ಮಾಲಿಂಗ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಂಡದ ವೈಫಲ್ಯವನ್ನು ಸಂಪೂರ್ಣವಾಗಿ ತಾವೇ ಹೊತ್ತಿಕೊಳ್ಳುವುದಾಗಿಯೂ ಹೇಳಿದ್ದಾರೆ. "ತಂಡದ ನಾಯಕತ್ವದಿಂದ ಕೆಳಗಿಳಿಯಲು ನಾನು ರೆಡಿ," ಎಂದು ಹೇಳಿದರು.

ಮಹಿಳಾ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟ

ಲಸಿತ್‌ ಮಾಲಿಂಗ, ತಮ್ಮ ನಾಯಕತ್ವದಲ್ಲಿ 2014ರಲ್ಲಿ ಶ್ರೀಲಂಕಾ ತಂಡಕ್ಕೆ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಟ್ಟು 2016ರವರೆಗೆ ನಾಯಕನಾಗಿ ಮುಂದುವರಿದಿದ್ದರು. ಬಳಿಕ 2018ರ ಡಿಸೆಂಬರ್‌ನಲ್ಲಿ ಮರಳಿ ನಾಯಕನ ಜವಾಬ್ದಾರಿ ಪಡೆದರಾದರೂ, ಗಾಯದ ಸಮಸ್ಯೆ ಕಾರಣ ತಂಡದಿಂದ ಹೊರಬಿದ್ದಿದ್ದರು.

ಬಿಗ್‌ ಬ್ಯಾಷ್‌ ಟಿ20 ಲೀಗ್‌: ಮಾರ್ಕಸ್ಟ್‌ ಸ್ಟೊಯ್ನಿಸ್‌ ದಾಖಲೆಯ ಶತಕ!

ಗುವಾಹಟಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದರೂ, ಬಳಿಕ ಇಂದೋರ್‌ನಲ್ಲಿ ನಡೆದ 2ನೇ ಪಂದ್ಯದಲ್ಲಿ ಟೀಮ್‌ ಇಂಡಿಯಾ 7 ವಿಕೆಟ್‌ಗಳ ಜಯ ದಾಖಲಿಸಿತು. ನಂತರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 3ನೇ ಟಿ20-ಐನಲ್ಲಿ ಭಾರತ 78 ರನ್‌ಗಳ ಭರ್ಜರಿ ಜಯ ದಾಖಲಿಸಿ ಸರಣಿ ಗೆದ್ದುಕೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌