ಆ್ಯಪ್ನಗರ

ರುತುರಾಜ್‌ ಬ್ಯಾಟಿಂಗ್‌ ಭರ್ಜರಿ, ಭಾರತ ಜಯಭೇರಿ

ಆರಂಭಿಕ ಬ್ಯಾಟ್ಸ್‌ಮನ್‌ ರುತುರಾಜ್‌ ಗಾಯಕ್ವಾಡ್‌ (99) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಭಾರತ 'ಎ' ತಂಡ ಅನಧಿಕೃತ ಏಕದಿನ ಸರಣಿಯ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 'ಎ' ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿ, 4-1ರಲ್ಲಿ ಸರಣಿ ವಶಪಡಿಸಿಕೊಂಡಿದೆ.

Vijaya Karnataka Web 23 Jul 2019, 5:00 am
ಎ ತಂಡಗಳ ಏಕದಿನ ಸರಣಿಯಲ್ಲಿ ವಿಂಡೀಸ್‌ಗೆ ಸೋಲು
Vijaya Karnataka Web india a claim 4 1 series win over wi a with 8 wicket win in final one dayer
ರುತುರಾಜ್‌ ಬ್ಯಾಟಿಂಗ್‌ ಭರ್ಜರಿ, ಭಾರತ ಜಯಭೇರಿ

ಆ್ಯಂಟಿಗುವಾ : ಆರಂಭಿಕ ಬ್ಯಾಟ್ಸ್‌ಮನ್‌ ರುತುರಾಜ್‌ ಗಾಯಕ್ವಾಡ್‌ (99) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಭಾರತ 'ಎ' ತಂಡ ಅನಧಿಕೃತ ಏಕದಿನ ಸರಣಿಯ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 'ಎ' ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿ, 4-1ರಲ್ಲಿ ಸರಣಿ ವಶಪಡಿಸಿಕೊಂಡಿದೆ.
ಕೂಲಿಜ್‌ ಕ್ರಿಕೆಟ್‌ ಮೈದಾನದಲ್ಲಿ ಭಾನುವಾರ ನಡೆದ 5ನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ 'ಎ' ತಂಡ 47.4 ಓವರ್‌ಗಳಲ್ಲಿ 236 ರನ್‌ಗಳಿಗೆ ಸರ್ವಪತನಗೊಂಡಿತು. ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆದಿರುವ ದೀಪಕ್‌ ಚಹರ್‌, ನವದೀಪ್‌ ಸೈನಿ ಮತ್ತು ರಾಹುಲ್‌ ಚಹರ್‌ ಭಾರತ 'ಎ' ತಂಡದ ಪರ ತಲಾ ಎರಡು ವಿಕೆಟ್‌ ಉರುಳಿಸಿದರು.
ಬಳಿಕ ಗುರಿ ಬೆನ್ನಟ್ಟಿದ ಟೀಮ್‌ ಇಂಡಿಯಾ 33 ಓವರ್‌ಗಳಲ್ಲಿ 2 ವಿಕೆಟ್‌ಗೆ 237 ರನ್‌ ಗಳಿಸಿ ಜಯದ ಸಂಭ್ರಮ ಆರಚರಿಸಿತು. ರುತುರಾಜ್‌ ಗಾಯಕ್ವಾಡ್‌ 89 ಎಸೆತಗಳಲ್ಲಿ 99 ರನ್‌ ಗಳಿಸಿದರೆ, ಶುಭ್‌ಮನ್‌ ಗಿಲ್‌ 69 ರನ್‌ಗಳ ಕೊಡುಗೆ ನೀಡಿದರು.
ಇತ್ತಂಡಗಳ ನಡುವಣ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್‌ ಸರಣಿ ಜುಲೈ 24ರಂದು ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್‌
ವೆಸ್ಟ್‌ ಇಂಡೀಸ್‌ 'ಎ': 47.4 ಓವರ್‌ಗಳಲ್ಲಿ 236 (ರುದರ್‌ಫೋರ್ಡ್‌ 65, ಆ್ಯಂಬ್ರಿಸ್‌ 61; ನವದೀಪ್‌ ಸೈನಿ 31ಕ್ಕೆ 2, ದೀಪಕ್‌ ಚಹರ್‌ 39ಕ್ಕೆ 2, ರಾಹುಲ್‌ ಚಹರ್‌ 53ಕ್ಕೆ 2).
ಭಾರತ 'ಎ': 33 ಓವರ್‌ಗಳಲ್ಲಿ 2 ವಿಕೆಟ್‌ಗೆ 237 (ರುತುರಾಜ್‌ 99, ಶುಭ್‌ಮನ್‌ 69; ಕೀಮೊ ಪಾರಲ್‌ 37ಕ್ಕೆ 1).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌