ಆ್ಯಪ್ನಗರ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿದ ಭಾರತ, ಆಸೀಸ್ ಆಟಗಾರರು

ಟಿ - 20 ಪಂದ್ಯ ಆರಂಭಕ್ಕೂ ಮುನ್ನ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರ ಆತ್ಮಾಹುತಿ ದಾಳಿಗೆ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ​​

Vijaya Karnataka Web 24 Feb 2019, 7:53 pm
ವಿಶಾಖಪಟ್ಟಣ: ಭಾರತ ಆಸ್ಟ್ರೇಲಿಯಾ ನಡುವಿನ ಟಿ 20 ಪಂದ್ಯದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರಿಗೆ ಗೌರವ ನಮನ ಸಲ್ಲಿಸಲಾಗಿದೆ. ಟಿ - 20 ಪಂದ್ಯ ಆರಂಭಕ್ಕೂ ಮುನ್ನ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.
Vijaya Karnataka Web D0LM2IYXcAAiOjo



ಪುಲ್ವಾಮಾ ದಾಳಿಗೆ ವಿಶ್ವದ ಹಲವು ದೇಶಗಳು ಖಂಡಿಸಿದ್ದವು. ಭಾರತದಲ್ಲಂತೂ ದಾಳಿಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಟೀಂ ಇಂಡಿಯಾದ ಕ್ರಿಕೆಟ್ ಆಟಗಾರರೂ ಸಹ ಉಗ್ರರ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಈ ಹಿನ್ನೆಲೆ ದೇಶ ಪ್ರೇಮ ಮೆರೆದ ಆಟಗಾರರು ಪಂದ್ಯ ಆರಂಭಕ್ಕೂ ಮುನ್ನ ಗೌರವ ನಮನ ಸಲ್ಲಿಸಿದರು. ಆಸ್ಟ್ರೇಲಿಯಾ ತಂಡದವರು ಸಹ ಟೀಂ ಇಂಡಿಯಾಗೆ ಸಾಥ್‌ ನೀಡಿದರು.

ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರ ಆತ್ಮಾಹುತಿ ದಾಳಿಗೆ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು.

ಪುಲ್ವಾಮಾ ದಾಳಿಯ ಸಂಚುಕೋರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ದೃಢ ನಿಶ್ಚಯ ಮಾಡಿರುವ ಭಾರತವು ಹಲವು ಆಯಾಮಗಳಲ್ಲಿ ಕಾರ್ಯಾಚರಿಸುತ್ತಿದೆ. ಉಗ್ರ ದಮನ, ಆರ್ಥಿಕ ನಿಬಂಧನೆ, ನೀರು ತಡೆಯ ಕಟ್ಟೆಚ್ಚರಿಕೆಗಳ ಜತೆ ದೇಶದ ಆಕ್ರೋಶವನ್ನು ಕ್ರಿಕೆಟ್‌ಗೂ ವಿಸ್ತರಿಸಲು ಮುಂದಾಗಿದೆ.

ಭಾರತವು ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಜತೆಗಿನ ಪಂದ್ಯಗಳನ್ನು ಬಹಿಷ್ಕರಿಸುವ ಗಂಭೀರ ಚಿಂತನೆ ನಡೆಸಿದೆ. ಇಷ್ಟೇ ಅಲ್ಲ, ವಿಶ್ವ ಕಪ್‌ ಕೂಟದಿಂದಲೇ ನೆರೆ ರಾಷ್ಟ್ರವನ್ನು ಹೊರಗಿರಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಜತೆ ಆಡಬಾರದು ಎಂಬ ಆಗ್ರಹ ಹೆಚ್ಚುತ್ತಿದ್ದು, ಇದಕ್ಕೆ ಕೇಂದ್ರ ಸರಕಾರ ಮನ್ನಣೆ ನೀಡುವ ಸಾಧ್ಯತೆ ಇದ್ದು, ಇದರ ಸಾಧಕ-ಭಾದಕಗಳ ವಿಮರ್ಶೆ ನಡೆದಿದೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮತ್ತು ಕ್ರಿಕೆಟ್‌ ಆಡಳಿತ ಮಂಡಳಿ (ಐಒಸಿ) ಕ್ರಿಕೆಟ್‌ ಬಹಿಷ್ಕಾರದ ನಿರ್ಧಾರವನ್ನು ಕೇಂದ್ರ ಸರಕಾರಕ್ಕೆ ವಹಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌