ಅಂಪೈರ್ಗಿಂತಲೂ ಹಿಂದಿಂದ ಬೌಲಿಂಗ್ ಮಾಡಿದ ಭುವನೇಶ್ವರ್!
ಅಂಪೈರ್ ನಿಂದಲೂ ಹಿಂದಿಂದ ಬೌಲಿಂಗ್ ಮಾಡಿದ ಭುವನೇಶ್ವರ್, ಮತ್ತೆ ಡೆಡ್ ಬಾಲ್ ಅಲ್ವೇ ಅಲ್ಲ ಎಂದು ವಾದಿಸಿದ್ದರು. ಆದರೆ ಅಂಪೈರ್ ಅಣತಿಯಂತೆ ಮತ್ತೆ ಬೌಲಿಂಗ್ ಮಾಡಿದಾಗ ಮ್ಯಾಜಿಕ್ ನಡೆದಿತ್ತು. ಆಸಿಸ್ ನಾಯಕ ಔಟಾಗಿದ್ದರು!
Vijaya Karnataka Web 18 Jan 2019, 11:13 am
ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅದ್ಭುತ ಬೌಲಿಂಗ್ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಆಸಿಸ್ನ ಆರಂಭಿಕ ಇಬ್ಬರು ಆಟಗಾರರನ್ನು ಪೆವಿಲಿಯನ್ ಅಟ್ಟುವ ಮೂಲಕ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದಾರೆ. ಪಂದ್ಯದ 3ನೇ ಓವರ್ನಲ್ಲಿ ಶಾರ್ಟ್ ಲೆಂತ್ನಲ್ಲಿ ದಾಳಿ ನಡೆಸಿದ ಭುವನೇಶ್ವರ್, ವಿಧಿಯಿಲ್ಲದೆ ಸ್ಲಿಪ್ನಲ್ಲಿದ್ದ ನಾಯಕ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸುವಂತೆ ಮಾಡಿದರು.
ಪಂದ್ಯದ 9ನೇ ಓವರ್ನಲ್ಲಿ ಅಂಪೈರ್ಗಿಂತ ಹಿಂದೆಯೇ ಚೆಂಡು ಎಸೆದಿದ್ದು, ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು. ಭುವನೇಶ್ವರ್ 'ಅದು ಡೆಡ್ ಬಾಲ್ ಅಲ್ಲ' ಎಂದು ಅಂಪೈರ್ ಜತೆ ವಾದಕ್ಕಿಳಿದರಾದರೂ, ಮತ್ತೆ ಬೌಲಿಂಗ್ ಮಾಡುವಂತೆ ಅಂಪೈರ್ ಸೂಚನೆ ನೀಡಿದರು.
ಅಂಪೈರ್ ಅಣತಿಯಂತೆ 9ನೇ ಓವರ್ನ ಕೊನೆಯ ಎಸೆತವನ್ನು ಮತ್ತೆ ಎಸೆದಾಗ ಮ್ಯಾಜಿಕ್ ನಡೆದಿತ್ತು. ಕಾಂಗರೂ ಪಡೆ ನಾಯಕ ಆ್ಯರನ್ ಫಿಂಚ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದಿದ್ದರು.
Ind vs Aus: ಚಹಾಲ್ ಮ್ಯಾಜಿಕ್, ಆಸ್ಟ್ರೇಲಿಯಾ 101-4
ಭಾರತ ಗೆದ್ದರೆ ಯಾವ್ಯಾವ ಇತಿಹಾಸ ಸೃಷ್ಟಿಯಾಗಲಿದೆ ಗೊತ್ತೆ?
ಆಸಿಸ್ನ ಆರಂಭಿಕ ಇಬ್ಬರು ಆಟಗಾರರನ್ನು ಪೆವಿಲಿಯನ್ ಅಟ್ಟುವ ಮೂಲಕ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದಾರೆ. ಪಂದ್ಯದ 3ನೇ ಓವರ್ನಲ್ಲಿ ಶಾರ್ಟ್ ಲೆಂತ್ನಲ್ಲಿ ದಾಳಿ ನಡೆಸಿದ ಭುವನೇಶ್ವರ್, ವಿಧಿಯಿಲ್ಲದೆ ಸ್ಲಿಪ್ನಲ್ಲಿದ್ದ ನಾಯಕ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸುವಂತೆ ಮಾಡಿದರು.
ಪಂದ್ಯದ 9ನೇ ಓವರ್ನಲ್ಲಿ ಅಂಪೈರ್ಗಿಂತ ಹಿಂದೆಯೇ ಚೆಂಡು ಎಸೆದಿದ್ದು, ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು. ಭುವನೇಶ್ವರ್ 'ಅದು ಡೆಡ್ ಬಾಲ್ ಅಲ್ಲ' ಎಂದು ಅಂಪೈರ್ ಜತೆ ವಾದಕ್ಕಿಳಿದರಾದರೂ, ಮತ್ತೆ ಬೌಲಿಂಗ್ ಮಾಡುವಂತೆ ಅಂಪೈರ್ ಸೂಚನೆ ನೀಡಿದರು.
ಅಂಪೈರ್ ಅಣತಿಯಂತೆ 9ನೇ ಓವರ್ನ ಕೊನೆಯ ಎಸೆತವನ್ನು ಮತ್ತೆ ಎಸೆದಾಗ ಮ್ಯಾಜಿಕ್ ನಡೆದಿತ್ತು. ಕಾಂಗರೂ ಪಡೆ ನಾಯಕ ಆ್ಯರನ್ ಫಿಂಚ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದಿದ್ದರು.
Ind vs Aus: ಚಹಾಲ್ ಮ್ಯಾಜಿಕ್, ಆಸ್ಟ್ರೇಲಿಯಾ 101-4
ಭಾರತ ಗೆದ್ದರೆ ಯಾವ್ಯಾವ ಇತಿಹಾಸ ಸೃಷ್ಟಿಯಾಗಲಿದೆ ಗೊತ್ತೆ?
- ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದ ಭಾರತ ಎಂದೆನಿಸಿಕೊಳ್ಳಲಿದೆ.
- 2018-2019ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಯಾವುದೇ ಸರಣಿಯನ್ನು ಸೋಲದೆ ಅಜೇಯವಾಗಿ ಉಳಿದ ಹೆಗ್ಗಳಿಕೆ ಗಳಿಸಲಿದೆ.
- ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದ ಸಾಧನೆ ಮಾಡಲಿದೆ.
- ಕಾಂಗರೂ ನೆಲದಲ್ಲಿ ಆತಿಥೇಯರ ವಿರುದ್ಧ ಭಾರತ ಆಡುತ್ತಿರುವ 2ನೇ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಇದಾಗಿದ್ದು, 2016ರಲ್ಲಿ ನಡೆದ ಸರಣಿಯಲ್ಲಿ ಭಾರತ 1-4ರ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತ್ತು.