ಆ್ಯಪ್ನಗರ

ಲಾರ್ಡ್ಸ್‌ನಲ್ಲಿ ಮಳೆಯದ್ದೇ ಆಟ; ಒಂದು ಎಸೆತ ಕಾಣದೇ ಮೊದಲ ದಿನ ರದ್ದು

ಕೆಟ್ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ ಗುರುವಾರ ಆರಂಭವಾಗಬೇಕಾಗಿರುವ ಪ್ರವಾಸಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನಕ್ಕೆ ಮಳೆ ಅಡ್ಡಿಯಾಗಿದೆ.

Vijaya Karnataka Web 9 Aug 2018, 9:31 pm
ಲಂಡನ್: ಕ್ರಿಕೆಟ್ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ ಗುರುವಾರ ಆರಂಭವಾಗಬೇಕಾಗಿರುವ ಪ್ರವಾಸಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನಕ್ಕೆ ಮಳೆ ಅಡ್ಡಿಯಾಗಿದೆ.
Vijaya Karnataka Web kohli-rohit-06


ಮಳೆಯಂದಾಗಿ ಸಂಪೂರ್ಣ ದಿನದಾಟ ನಷ್ಟವಾಗಿದ್ದು, ಇದರಿಂದಾಗಿ ಟಾಸ್ ಸಹ ಕಾಣದೆ ಇತ್ತಂಡಗಳು ಮೈದಾನ ಬಿಟ್ಟು ತೆರಬೇಕಾಯಿತು.

ಬೆಳಗ್ಗೆಯಿಂದಲೇ ಸುರಿದ ಮಳೆಯಿಂದಾಗಿ ಟಾಸ್ ವಿಳಂಬವುಂಟಾಗಿತ್ತು. ಮಳೆ ಮತ್ತಷ್ಟು ತೀವ್ರತೆ ಪಡೆದ ಹಿನ್ನಲೆಯಲ್ಲಿ ಭೋಜನ ವಿರಾಮವನ್ನು ಬೇಗನೇ ತೆಗೆದುಕೊಳ್ಳಲಾಗಿತ್ತು.

ಇಲ್ಲಿಂದ ಬಳಿಕವೂ ಮೈದಾನಕ್ಕೆ ಸೂರ್ಯ ಕಿರಣ ಬೀಳಲಿಲ್ಲ. ಪರಿಣಾಮ ಟೀ ಬ್ರೇಕ್ ವರೆಗೂ ಪಂದ್ಯ ಆರಂಭವಾಗುವ ಯಾವುದೇ ಸೂಚನೆ ಸಿಗಲಿಲ್ಲ.

ಈ ನಡುವೆ ಸ್ವಲ್ಪ ಬೆಳಕು ಬಂದರೂ ಪದೇ ಪದೇ ಮಳೆ ಸುರಿದಿದ್ದರಿಂದ ಹಿನ್ನಡೆಯಾಯಿತು. ಪಿಚ್ ಸಂಪೂರ್ಣವಾಗಿ ರಕ್ಷಿಸಲಾಗಿತ್ತು. ಅಂತಿಮವಾಗಿ ಪರಿಶೀಲನೆಗಿಳಿದ ಅಂಪೈರ್‌ಗಳು ದಿನದಾಟವನ್ನು ಕೈಬಿಡಲು ನಿರ್ಧರಿಸಿದರು. ಇದರಿಂದಾಗಿ ಬೆಳಗ್ಗಿನಿಂದಲೇ ಕಾದು ಕುಳಿತಿದ್ದ ಅಭಿಮಾನಿಗಳು ನಿರಾಸೆಯಿಂದಲೇ ಹಿಂತಿರುಗಿದರು.


ವಿರಾಟ್ ಬಗ್ಗೆ ಸಚಿನ್ ಅಭಿಪ್ರಾಯ




ಮತ್ತಷ್ಟು ತೀವ್ರತೆ ಪಡೆದ ಮಳೆ...



ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 31 ರನ್ ಅಂತರದ ಸೋಲನುಭವಿಸಿದ ವಿರಾಟ್ ಕೊಹ್ಲಿ ಪಡೆ, ಲಾರ್ಡ್ಸ್‌ ಪಂದ್ಯ ಗೆದ್ದು ಸರಣಿ 1-1ರ ಸಮಬಲ ತಂದುಕೊಳ್ಳಲು ಎದುರು ನೋಡುತ್ತಿದೆ.

ಕಳೆದ ಪಂದ್ಯದಲ್ಲಿ ನಾಯಕ ವಿರಾಟ್‌ ಕೊಹ್ಲಿ (149 ಹಾಗೂ 51) ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಜಯ ದಕ್ಕಿಸಿಕೊಡುವ ಸನಿಹ ತಲುಪಿದ್ದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳ ಸಹಕಾರ ಸಿಗದೇಹೋಯಿತು. ಕೊಹ್ಲಿ ಅಗತ್ಯದ ಸಾಥ್‌ ಸಿಕ್ಕಿದ್ದರೆ ಫಲಿತಾಂಶ ಬೇರೇಯದ್ದೇ ಆಗಿರುತ್ತಿತ್ತು. ಹೀಗಾಗಿ ಇಂತಹ ತಪ್ಪು ಮರುಕಳಿಸದಂತೆ, ಗೆಲ್ಲುವ ಅವಕಾಶಗಳನ್ನು ಬಾಚಿಕೊಳ್ಳುವ ಕಡೆಗೆ ಭಾರತ ತಂಡ ರಣತಂತ್ರ ರೂಪಿಸಿದೆ.

ವಿರಾಟ್ ಕೊಹ್ಲಿ ಸಂದರ್ಶನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌