ಆಕ್ಲೆಂಡ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 0-1ರ ಅಂತರದ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ ಇದೀಗ ದ್ವಿತೀಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಕದನ ಎಡೆನ್ ಪಾರ್ಕ್ನಲ್ಲಿ ಶುಕ್ರವಾರದಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ 80 ರನ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು. ಇದು ಟ್ವೆಂಟಿ-20 ಇತಿಹಾಸದಲ್ಲೇ ಭಾರತದ ಅತಿ ಹೀನಾಯ (ರನ್ ಅಂತರದಲ್ಲಿ) ಸೋಲಾಗಿದೆ.
ಇದೀಗ ಸರಣಿ ವಶಪಡಿಸಿಕೊಳ್ಳಲು ಮುಂದಿನ ಎರಡು ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹಾಗಾಗಿ ಎರಡನೇ ಪಂದ್ಯದಲ್ಲಿ ಮಾಡು ಇಲ್ಲವೇ ಮಾಡಿ ಪರಿಸ್ಥಿತಿ ಎದುರಾಗಿದೆ.
ಒಂದು ವೇಳೆ ಆಕ್ಲೆಂಡ್ ಪಂದ್ಯದಲ್ಲಿ ಸೋಲನುಭವಿಸಿದರೆ ಭಾರತದ ಸತತ ಸರಣಿ ಗೆಲುವುಗಳ ದಾಖಲೆಗೆ ಬ್ರೇಕ್ ಬೀಳಲಿದೆ. ಭಾರತ ತನ್ನ ಕೊನೆಯ 10 ಟಿ-20 ಸರಣಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದೆ.
ಮೊದಲ ಪಂದ್ಯದಲ್ಲಿ ಲೆಕ್ಕಾಚಾರಗಳೆಲ್ಲ ತಲೆಕೆಳಗಾದ ಹಿನ್ನಲೆಯಲ್ಲಿ ನಾಯಕ ರೋಹಿತ್ ಶರ್ಮಾಗೆ ತಲೆನೋವು ಸೃಷ್ಟಿಯಾಗಿದೆ. ಹಾಗಾಗಿ ಈ ಎಲ್ಲ ಒತ್ತಡಗಳನ್ನು ಹೇಗೆ ನಿಭಾಯಿಸಲಿದ್ದಾರೆ ಹಾಗೂ ಸೂಕ್ತ ಸಂಯೋಜನೆಯ ತಂಡವನ್ನು ಹೇಗೆ ರಚಿಸಲಿದ್ದಾರೆ ಎಂಬುದು ಕುತುಹೂಲವೆನಿಸಿದೆ.
ಆರಂಭಿಕರಾದ ರೋಹಿತ್ ಜತೆಗೆ ಶಿಖರ್ ಧವನ್ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡುವುದು ಮುಖ್ಯವೆನಿಸಿದೆ. ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ ತಮ್ಮ ತಮ್ಮನ್ನು ತಿದ್ದಿಕೊಳ್ಳುವ ಇರಾದೆಯಲ್ಲಿದ್ದಾರೆ. ಹಿರಿಯ ಅನುಭವಿ ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಸಹ ಪಂದ್ಯವನ್ನು ಅಚ್ಚುಕಟ್ಟಾಗಿ ಫಿನಿಶಿಂಗ್ ಮಾಡಬೇಕಿದೆ. ಇನ್ನು ಯುವ ಶುಭಮನ್ ಗಿಲ್ ಹಾಗೂ ಬ್ಯಾಟ್ಸ್ಮನ್ ಹಾಗೂ ಅರೆ ಕಾಲಿಕ ಸ್ಪಿನ್ನರ್ ಕೇದರ್ ಜಾಧವ್ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಆಲ್ರೌಂಡರ್ಗಳಾದ ಕೃುಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ಹಾಗೂ ವಿಜಯ್ ಶಂಕರ್ ಪ್ರಭಾವಿ ಎನಿಸಿಕೊಳ್ಳುವಲ್ಲಿ ವಿಫಲವಾಗಿದ್ದರು. ಹಾಗಾಗಿ ಮೂವರಲ್ಲಿ ಓರ್ವನನ್ನು ಕೈಬಿಟ್ಟು ಕುಲ್ದೀಪ್ ಯಾದವ್ಗೆ ಅವಕಾಶ ನೀಡಿದರೆ ಅಚ್ಚರಿಯೇನಿಲ್ಲ.
ಇನ್ನೊಂದೆಡೆ ಯುಜ್ವೇಂದ್ರ ಚಹಲ್ ಸ್ಪಿನ್ ಅಸ್ತ್ರವಾಗಲಿದ್ದಾರೆ. ವೇಗಿಗಳ ಪಡೆಯಲ್ಲಿ ಭುವನೇಶ್ವರ್ ಕುಮಾರ್ ಜತೆ ಖಲೀಲ್ ಅಹ್ಮದ್ ಜಾಗದಲ್ಲಿ ಕಾಣಿಸಿಕೊಳ್ಳಲು ಮೊಹಮ್ಮದ್ ಸಿರಾಜ್ ಹಾಗೂ ಸಿದ್ದಾರ್ಥ್ ಕೌಲ್ ಜತೆ ನಿಕಟ ಪೈಪೋಟಿ ಕಂಡುಬಂದಿದೆ.
ಅತ್ತ ಗೆಲುವಿನ ಉತ್ಸಾಹದಲ್ಲಿರುವ ನ್ಯೂಜಿಲೆಂಡ್, ದ್ವಿತೀಯ ಪಂದ್ಯವನ್ನು ಗೆದ್ದು ಸರಣಿ ಗೆಲ್ಲುವ ತವಕದಲ್ಲಿದೆ. ಈ ಮೂಲಕ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲಿದೆ. ಆರಂಭಿಕರಾದ ಕಾಲಿನ್ ಮನ್ರೊ ಹಾಗೂ ಟಿಮ್ ಸೀಫರ್ಟ್ ಭರ್ಜರಿ ಫಾರ್ಮ್ ಕಂಡುಕೊಂಡಿದ್ದಾರೆ. ಇವರಿಗೆ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಉತ್ತಮ ಬೆಂಬಲ ನೀಡುತಿದ್ದಾರೆ. ಬೌಲರ್ಗಳನ್ನು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಹಾಗಾಗಿ ನಿರ್ಣಾಯಕ ಕದನ ಗೆಲ್ಲಲು ಭಾರತ ಎಲ್ಲ ವಿಭಾಗದಲ್ಲೂ ಅಧಿಕಾರಯುತ ಪ್ರದರ್ಶನ ನೀಡಬೇಕಿದೆ.
ಪಂದ್ಯಾರಂಭ: ಬೆಳಗ್ಗೆ 11.30ಕ್ಕೆ ಸರಿಯಾಗಿ (ಭಾರತೀಯ ಕಾಲಮಾನ)
ತಂಡಗಳು ಇಂತಿದೆ:
ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಡಗ್ ಬ್ರೇಸ್ವೆಲ್, ಕಾಲಿನ್ ಡಿ'ಗ್ರ್ಯಾಂಡ್ಹೋಮ್, ಲಾಕಿ ಫಗ್ರ್ಯುಸನ್, ಸ್ಕಾಟ್ ಕುಗ್ಗಲೇಜಿನ್, ಕಾಲಿನ್ ಮನ್ರೊ, ಡಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್, ಇಶ್ ಸೋಧಿ, ಟಿಮ್ ಸೌಥೀ, ರಾಸ್ ಟೇಲರ್, ಬ್ಲೇರ್ ಟಿಕ್ನರ್ ಮತ್ತು ಜಿಮ್ಮಿ ನೀಶಮ್.
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂ.ಎಸ್ ಧೋನಿ, ಕೃಣಲ್ ಪಾಂಡ್ಯ, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಖಲೀಲ್ ಅಹ್ಮದ್, ಶುಭಮನ್ ಗಿಲ್, ವಿಜಯ ಶಂಕರ್, ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಸಿರಾಜ್.
ಇದೀಗ ಸರಣಿ ವಶಪಡಿಸಿಕೊಳ್ಳಲು ಮುಂದಿನ ಎರಡು ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹಾಗಾಗಿ ಎರಡನೇ ಪಂದ್ಯದಲ್ಲಿ ಮಾಡು ಇಲ್ಲವೇ ಮಾಡಿ ಪರಿಸ್ಥಿತಿ ಎದುರಾಗಿದೆ.
ಒಂದು ವೇಳೆ ಆಕ್ಲೆಂಡ್ ಪಂದ್ಯದಲ್ಲಿ ಸೋಲನುಭವಿಸಿದರೆ ಭಾರತದ ಸತತ ಸರಣಿ ಗೆಲುವುಗಳ ದಾಖಲೆಗೆ ಬ್ರೇಕ್ ಬೀಳಲಿದೆ. ಭಾರತ ತನ್ನ ಕೊನೆಯ 10 ಟಿ-20 ಸರಣಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದೆ.
ಮೊದಲ ಪಂದ್ಯದಲ್ಲಿ ಲೆಕ್ಕಾಚಾರಗಳೆಲ್ಲ ತಲೆಕೆಳಗಾದ ಹಿನ್ನಲೆಯಲ್ಲಿ ನಾಯಕ ರೋಹಿತ್ ಶರ್ಮಾಗೆ ತಲೆನೋವು ಸೃಷ್ಟಿಯಾಗಿದೆ. ಹಾಗಾಗಿ ಈ ಎಲ್ಲ ಒತ್ತಡಗಳನ್ನು ಹೇಗೆ ನಿಭಾಯಿಸಲಿದ್ದಾರೆ ಹಾಗೂ ಸೂಕ್ತ ಸಂಯೋಜನೆಯ ತಂಡವನ್ನು ಹೇಗೆ ರಚಿಸಲಿದ್ದಾರೆ ಎಂಬುದು ಕುತುಹೂಲವೆನಿಸಿದೆ.
ಆರಂಭಿಕರಾದ ರೋಹಿತ್ ಜತೆಗೆ ಶಿಖರ್ ಧವನ್ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡುವುದು ಮುಖ್ಯವೆನಿಸಿದೆ. ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ ತಮ್ಮ ತಮ್ಮನ್ನು ತಿದ್ದಿಕೊಳ್ಳುವ ಇರಾದೆಯಲ್ಲಿದ್ದಾರೆ. ಹಿರಿಯ ಅನುಭವಿ ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಸಹ ಪಂದ್ಯವನ್ನು ಅಚ್ಚುಕಟ್ಟಾಗಿ ಫಿನಿಶಿಂಗ್ ಮಾಡಬೇಕಿದೆ. ಇನ್ನು ಯುವ ಶುಭಮನ್ ಗಿಲ್ ಹಾಗೂ ಬ್ಯಾಟ್ಸ್ಮನ್ ಹಾಗೂ ಅರೆ ಕಾಲಿಕ ಸ್ಪಿನ್ನರ್ ಕೇದರ್ ಜಾಧವ್ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಆಲ್ರೌಂಡರ್ಗಳಾದ ಕೃುಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ಹಾಗೂ ವಿಜಯ್ ಶಂಕರ್ ಪ್ರಭಾವಿ ಎನಿಸಿಕೊಳ್ಳುವಲ್ಲಿ ವಿಫಲವಾಗಿದ್ದರು. ಹಾಗಾಗಿ ಮೂವರಲ್ಲಿ ಓರ್ವನನ್ನು ಕೈಬಿಟ್ಟು ಕುಲ್ದೀಪ್ ಯಾದವ್ಗೆ ಅವಕಾಶ ನೀಡಿದರೆ ಅಚ್ಚರಿಯೇನಿಲ್ಲ.
ಇನ್ನೊಂದೆಡೆ ಯುಜ್ವೇಂದ್ರ ಚಹಲ್ ಸ್ಪಿನ್ ಅಸ್ತ್ರವಾಗಲಿದ್ದಾರೆ. ವೇಗಿಗಳ ಪಡೆಯಲ್ಲಿ ಭುವನೇಶ್ವರ್ ಕುಮಾರ್ ಜತೆ ಖಲೀಲ್ ಅಹ್ಮದ್ ಜಾಗದಲ್ಲಿ ಕಾಣಿಸಿಕೊಳ್ಳಲು ಮೊಹಮ್ಮದ್ ಸಿರಾಜ್ ಹಾಗೂ ಸಿದ್ದಾರ್ಥ್ ಕೌಲ್ ಜತೆ ನಿಕಟ ಪೈಪೋಟಿ ಕಂಡುಬಂದಿದೆ.
ಅತ್ತ ಗೆಲುವಿನ ಉತ್ಸಾಹದಲ್ಲಿರುವ ನ್ಯೂಜಿಲೆಂಡ್, ದ್ವಿತೀಯ ಪಂದ್ಯವನ್ನು ಗೆದ್ದು ಸರಣಿ ಗೆಲ್ಲುವ ತವಕದಲ್ಲಿದೆ. ಈ ಮೂಲಕ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲಿದೆ. ಆರಂಭಿಕರಾದ ಕಾಲಿನ್ ಮನ್ರೊ ಹಾಗೂ ಟಿಮ್ ಸೀಫರ್ಟ್ ಭರ್ಜರಿ ಫಾರ್ಮ್ ಕಂಡುಕೊಂಡಿದ್ದಾರೆ. ಇವರಿಗೆ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಉತ್ತಮ ಬೆಂಬಲ ನೀಡುತಿದ್ದಾರೆ. ಬೌಲರ್ಗಳನ್ನು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಹಾಗಾಗಿ ನಿರ್ಣಾಯಕ ಕದನ ಗೆಲ್ಲಲು ಭಾರತ ಎಲ್ಲ ವಿಭಾಗದಲ್ಲೂ ಅಧಿಕಾರಯುತ ಪ್ರದರ್ಶನ ನೀಡಬೇಕಿದೆ.
ಪಂದ್ಯಾರಂಭ: ಬೆಳಗ್ಗೆ 11.30ಕ್ಕೆ ಸರಿಯಾಗಿ (ಭಾರತೀಯ ಕಾಲಮಾನ)
ತಂಡಗಳು ಇಂತಿದೆ:
ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಡಗ್ ಬ್ರೇಸ್ವೆಲ್, ಕಾಲಿನ್ ಡಿ'ಗ್ರ್ಯಾಂಡ್ಹೋಮ್, ಲಾಕಿ ಫಗ್ರ್ಯುಸನ್, ಸ್ಕಾಟ್ ಕುಗ್ಗಲೇಜಿನ್, ಕಾಲಿನ್ ಮನ್ರೊ, ಡಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್, ಇಶ್ ಸೋಧಿ, ಟಿಮ್ ಸೌಥೀ, ರಾಸ್ ಟೇಲರ್, ಬ್ಲೇರ್ ಟಿಕ್ನರ್ ಮತ್ತು ಜಿಮ್ಮಿ ನೀಶಮ್.
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂ.ಎಸ್ ಧೋನಿ, ಕೃಣಲ್ ಪಾಂಡ್ಯ, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಖಲೀಲ್ ಅಹ್ಮದ್, ಶುಭಮನ್ ಗಿಲ್, ವಿಜಯ ಶಂಕರ್, ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಸಿರಾಜ್.