ಆ್ಯಪ್ನಗರ

ಮೊಹಾಲಿ ಕದನ ಗೆದ್ದವರು ಸೇಫ್; ಕೊಹ್ಲಿ ಬಳಗವೇ ಫೇವರಿಟ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ದ್ವಿತೀಯ ಟ್ವೆಂಟಿ-20 ಪಂದ್ಯವು ಮೊಹಾಲಿಯಲ್ಲಿ ಬುಧವಾರದಂದು ನಡೆಯಲಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿರುವ ಇತ್ತಂಡಗಳು ಪಂದ್ಯ ಗೆದ್ದು ಸರಣಿ ಸೇಫ್ ಮಾಡುವ ಇರಾದೆಯಲ್ಲಿದೆ.

Vijaya Karnataka Web 18 Sep 2019, 8:52 am
ಮೊಹಾಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ದ್ವಿತೀಯ ಟ್ವೆಂಟಿ-20 ಪಂದ್ಯ ಮೊಹಾಲಿಯಲ್ಲಿ ಇಂದು (ಬುಧವಾರ) ನಡೆಯಲಿದೆ. ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಹಿನ್ನಲೆಯಲ್ಲಿ ಇಲ್ಲಿನ ಪಿಸಿಎ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಸರಣಿಯಲ್ಲಿ ಗೆಲುವಿನ ಆರಂಭ ಪಡೆಯುವ ತವಕ ಉಭಯ ತಂಡಗಳದ್ದಾಗಿದೆ.
Vijaya Karnataka Web team-india-08


ಆಸ್ಟ್ರೇಲಿಯಾದಲ್ಲಿ ನಡಯಲಿರುವ ಟಿ20 ವಿಶ್ವಕಪ್‌ಗೆ ಇನ್ನೂ ಹನ್ನೆರಡು ತಿಂಗಳ ಕಾಲಾವಕಾಶವಿದೆ. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಯೋಜನೆ ರೂಪಿಸುತ್ತಿದ್ದು, ಯುವ ಆಟಗಾರರಿಂದ ಸ್ಥಿರ ಪ್ರದರ್ಶನ ನಿರೀಕ್ಷಿಸುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಯುವ ಆಟಗಾರರಿಗೆ ಕೊಹ್ಲಿ ಹಾಗೂ ಮುಖ್ಯ ಕೋಚ್ ರವಿಶಾಸ್ತ್ರಿ ಸೂಚನೆಯನ್ನು ರವಾನಿಸಿದ್ದಾರೆ.

ತಾಯ್ನಾಡಿನಲ್ಲಿ ಡೆಬ್ಯು ಮಾಡಲಿರುವ ಮಯಾಂಕ್ ಅಗರ್ವಾಲ್

2017ರ ಫೆಬ್ರವರಿಯಲ್ಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ 21 ವರ್ಷದ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಯುವ ಆಟಗಾರ ಎಂದು ಪರಿಗಣಿಸಲಾಗದು. ಹೀಗಾಗಿ ಭವಿಷ್ಯದಲ್ಲಿ ಖಾಯಂ ಸ್ಥಾನಕ್ಕೆ ಪಂತ್ ಬುಧವಾರದ ಪಂದ್ಯದಲ್ಲಿ ಮಿಂಚಲೇಬೇಕಾದ ಒತ್ತಡದಲ್ಲಿದ್ದಾರೆ.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದಲ್ಲಿರುವಂತೆ ನೋಡಿಕೊಳ್ಳಲು ಕೊಹ್ಲಿಗೆ ಇನ್ನೂ ಮುಕ್ತ ಅವಕಾಶವಿರುವ ಕಾರಣ, ತಮಗೆ ದೊರೆಯುವ ಅವಕಾಶಗಳೆಲ್ಲವನ್ನೂ ಪಂತ್ ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ. ಪಂತ್‌ಗೆ ಹೆಚ್ಚು ಹೆಚ್ಚು ಅವಕಾಶ ನೀಡುವಂತೆ ಕೊಹ್ಲಿ ಮೇಲೆ ಬಾಹ್ಯ ಒತ್ತಡಗಳೂ ಇವೆ.

ತೀವ್ರ ಒತ್ತಡದಲ್ಲಿ ರಿಷಬ್ ಪಂತ್; ಅವಕಾಶಕ್ಕಾಗಿ ಹಾತೊರೆಯುತ್ತಿರುವ ಸಂಜು, ಕಿಶನ್!

ಬೌಲಿಂಗ್ ವಿಭಾಗದ ಬಗ್ಗೆ ಹೇಳಬೇಕೆಂದರೆ, ಕುಲ್‌ದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಲ್ ತಂಡದಲ್ಲಿ ಸ್ಥಾನ ಪಡೆದಿರುವ ಹೊರತಾಗಿಯೂ ಸತತ ಎರಡನೇ ಸರಣಿಗೆ ಆಯ್ಕೆಯಾಗಿರುವ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಮತ್ತು ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮೇಲೂ ಒತ್ತಡ ಇದೆ.

ವಿಶ್ವಕಪ್‌ಗೂ ಮುನ್ನ ಕನಿಷ್ಠ ಪಕ್ಷ 20 ಪಂದ್ಯಗಳನ್ನಾಡಲಿರುವ ಟೀಮ್ ಇಂಡಿಯಾದಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕಿಂಚಿತ್ತಾದರೂ ರನ್ ಗಳಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಿದೆ. ಈ ವಿಭಾಗದಲ್ಲಿ ಟೀಮ್ ಇಂಡಿಯಾ ಇಲ್ಲಿಯ ತನಕ ಬಲಗೊಂಡಿಲ್ಲ.

ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರನಾಗಿ ಗುರುತಿಸಿಕೊಳ್ಳದ ಶ್ರೇಯಸ್ ಅಯ್ಯರ್ ಮತ್ತು ಮನೀಶ್ ಪಾಂಡೆಗೂ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.

ಅತ್ತ ಟಿ20 ಶ್ರೇಯಾಂಕದಲ್ಲಿ ಭಾರತಕ್ಕಿಂತ ಮೇಲಿರುವ ಕ್ವಿಂಟನ್ ಡಿ ಕಾಕ್ ಸಾರಥ್ಯದ ಹರಿಣ ಪಡೆ ಆತಿಥೇಯರ ಕಾರ್ಯತಂತ್ರಗಳನ್ನು ಬುಡಮೇಲು ಮಾಡುವ ವಿಶ್ವಾಸದಲ್ಲಿದೆ. ಬ್ಯಾಟಿಂಗ್‌ಗೆ ಸ್ವರ್ಗವಾಗಿರುವ ಮೊಹಾಲಿಯಲ್ಲಿ ಇತ್ತಂಡಗಳಿಂದ ರನ್ ಮಳೆ ಸುರಿಸುವ ನಿರೀಕ್ಷೆಯಿದ್ದು, ಭಾರತ ಗೆಲ್ಲುವ ನೆಚ್ಚಿನ ತಂಡವಾಗಿ ಆಖಾಡಕ್ಕಿಳಿಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌