ಆ್ಯಪ್ನಗರ

ಧೋನಿಗ್ಯಾಕೆ ನಂ.4 ಸ್ಥಾನವಿಲ್ಲ? ಕೊಹ್ಲಿ ನಿರ್ಣಯ ಬದಲಾಯಿಸಲು ವೀರು ಬಯಕೆ

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಅತ್ಯಂತ ಆಪತ್ಬಾಂಧವ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ನಂ.4 ಕ್ರಮಾಂಕದಲ್ಲಿ ಅತಿ ಹೆಚ್ಚಿನ ಯಶಸ್ಸನ್ನು ಕಂಡಿದ್ದರು.

Times Now 20 Feb 2018, 10:20 pm
ಹೊಸದಿಲ್ಲಿ: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಅತ್ಯಂತ ಆಪತ್ಬಾಂಧವ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ನಂ.4 ಕ್ರಮಾಂಕದಲ್ಲಿ ಅತಿ ಹೆಚ್ಚಿನ ಯಶಸ್ಸನ್ನು ಕಂಡಿದ್ದರು.
Vijaya Karnataka Web india vs south africa virender sehwag reveals why virat kohli doesnt promote ms dhoni up the order
ಧೋನಿಗ್ಯಾಕೆ ನಂ.4 ಸ್ಥಾನವಿಲ್ಲ? ಕೊಹ್ಲಿ ನಿರ್ಣಯ ಬದಲಾಯಿಸಲು ವೀರು ಬಯಕೆ


ಆದರೆ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ನೀಡುವ ಹಾಗೂ ಸೂಕ್ತ ಫಿನಿಶರ್ ಕೊರತೆಯಿಂದಾಗಿ ಧೋನಿಗೆ ಕೆಳ ಕ್ರಮಾಂಕದಲ್ಲಿ ಆಡಿಸಲು ನಿರ್ಧರಿಸಲಾಗಿತ್ತು.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಧೋನಿ ಅವರನ್ನು ನಂ.4 ಸ್ಥಾನದಲ್ಲಿಯೇ ಆಡಿಸಬೇಕು ಎಂದು ಅಭಿಪ್ರಾಪಟ್ಟಿದ್ದಾರೆ.

ಮನೀಷ್ ಪಾಂಡೆ, ಕೇದರ್ ಜಾಧವ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಅನೇಕ ಬ್ಯಾಟ್ಸ್‌ಮನ್‌ಗಳನ್ನು ನಂ.4 ಕ್ರಮಾಂಕದಲ್ಲಿ ಪರೀಕ್ಷಿಸಲಾಗಿತ್ತು. ಆದರೆ ಧೋನಿಗೆ ಹೋಲಿಸಿದರೆ ಯಾರೂ ಸಹ ಯಶ ಸಾಧಿಸಿರಲಿಲ್ಲ.

ಭಾರತೀಯ ಮಧ್ಯಮ ಕ್ರಮಾಂಕದಲ್ಲಿ ಸುಧಾರಣೆಗೆ ಅವಕಾಶವಿದೆ. ಮಹಿಯನ್ನು ನಂ.4 ಸ್ಥಾನದಲ್ಲಿಯೇ ಕಣಕ್ಕಿಳಿಸಬೇಕು ಎಂದು ವೀರು ತಿಳಿಸಿದ್ದಾರೆ.

ಧೋನಿ ಅವರನ್ನು ನಂ.4 ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಯಾಕೆ ಆಡಿಸುತ್ತಿಲ್ಲ ಎಂಬುದಕ್ಕೆ ವೀರು ಕಾರಣ ನೀಡುತ್ತಾರೆ. ಒಂದು ವೇಳೆ ಧೋನಿ ನಂ.4 ಸ್ಥಾನದಲ್ಲಿ ಆಡಿ ಬೇಗನೇ ವಿಕೆಟ್ ಕಳೆದುಕೊಂಡರೆ ಯಾರು ಫಿನಿಶರ್ ಜವಾಬ್ದಾರಿ ವಹಿಸಲಿದ್ದಾರೆ ಎಂಬುದು ಕೊಹ್ಲಿ ಆತಂಕಕ್ಕೆ ಕಾರಣವಾಗಿದೆ. ಆದರೆ ನನ್ನ ಪ್ರಕಾರ ಫಿನಿಶರ್ ಕೆಲಸವನ್ನು ಮನೀಷ್, ಪಾಂಡೆ ಅಥವಾ ಕೇದರ್‌ ವಹಿಸಬೇಕು ಎಂದು ವೀರು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌