ಹೊಸದಿಲ್ಲಿ: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ಇದೀಗ ದ್ವಿತೀಯ ಪಂದ್ಯದಲ್ಲಿ ತಿರುಗೇಟು ನೀಡುವ ವಿಶ್ವಾಸದಲ್ಲಿದೆ.
ಆದರೆ ಭಾರತದ ತಿರುಗೇಟು ನೀಡುವುದು ಅಷ್ಟು ಸುಲಭವಲ್ಲ ಎಂದು ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಯಾಕೆ ಭಾರತದ ಕಮ್ ಬ್ಯಾಕ್ ಚಾನ್ಸ್ ಕೇವಲ ಶೇಕಡಾ 30ರಷ್ಟು ಮಾತ್ರ ಎಂದು ವೀರು ವಿವರಿಸಿದ್ದಾರೆ.
ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ 208 ರನ್ ಬೆನ್ನತ್ತಿದ ಭಾರತ ಗೆಲುವಿನ ಅವಕಾಶವನ್ನು ಕೈಚೆಲ್ಲಿತ್ತು. ಈ ಮೂಲಕ 72 ರನ್ ಅಂತರದ ಸೋಲಿಗೊಳಗಾದ ವಿರಾಟ್ ಕೊಹ್ಲಿ ಪಡೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಅಂತರದ ಹಿನ್ನಡೆಗೊಳಗಾಗಿತ್ತು.
ಇದೀಗ ಟೆಸ್ಟ್ ಸರಣಿ ಗೆಲ್ಲಲು ಮುಂದಿನ ಎರಡೂ ಪಂದ್ಯಗಳಲ್ಲೂ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.
ಈಗಿನ ಪ್ರಕಾರ ಭಾರತ ಪುನರಾಗಮನ ಮಾಡುವ ಅವಕಾಶ ಶೇಕಡಾ 30ರಷ್ಟು ಮಾತ್ರ. ಹಾಗಾಗಿ ಇಲ್ಲಿಂದ ಮುಂದಕ್ಕೆ ಮತ್ತಷ್ಟು ಕಠಿಣವೆನಿಸಲಿದೆ ಎಂದಿದ್ದಾರೆ.
ಹಾಗೆಯೇ ಸೆಂಚುರಿಯನ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಆಯ್ಕೆಗೆ ಸೂಕ್ತವಾದ ವಾತಾವರಣವಿದೆಯೇ ಎಂಬುದನ್ನು ಟೀಮ್ ಮ್ಯಾನೇಜ್ಮೆಂಟ್ ಪರಿಶೀಲಿಸಬೇಕು ಎಂದರು.
ಆರು ಸ್ಪೆಷಲಿಷ್ಟ್ ಬ್ಯಾಟ್ಸ್ಮನ್ಗಳು ಮತ್ತು ನಾಲ್ಕು ಸ್ಪೆಷಲಿಸ್ಟ್ ಬೌಲರ್ಗಳ ಸಂಯೋಜನೆಯನ್ನು ಕಾಯ್ದುಕೊಳ್ಳುವಂತೆ ವೀರು ವಿವರಿಸಿದರು. ಅಜಿಂಕ್ಯ ರಹಾನೆ ರೂಪದಲ್ಲಿ ಹೆಚ್ಚುವರಿ ಬ್ಯಾಟ್ಸ್ಮನ್ ಆಡಿಸಬಹುದಾಗಿದೆ. ಭಾರತ ಗೆಲ್ಲಬೇಕಾದರೆ ವಿರಾಟ್ ಹಾಗೂ ರೋಹಿತ್ ದೊಡ್ಡ ಪಾತ್ರ ನಿಭಾಯಿಸಬೇಕಿದೆ ಎಂದರು.
ಅದೇ ಹೊತ್ತಿಗೆ ಬ್ಯಾಟ್ಸ್ಮನ್ಗಳಿಗೆ ಕಿವಿಮಾತು ಹೇಳಿರುವ ಸೆಹ್ವಾಗ್, ಆಫ್ ಸೈಡ್ ಬರುವ ಚೆಂಡುಗಳನ್ನು ಬಿಡುವಂತೆ ಸೂಚನೆ ನೀಡಿದರು. ಅಲ್ಲದೆ ಆದಷ್ಟು ನೇರ ಬ್ಯಾಟ್ನಿಂದಲೇ ಆಡಲು ಸೂಚಿಸಿದರು. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಧನಾತ್ಮಕ ಚಿಂತನೆಯೊಂದಿಗೆ ಆಡಲು ಸಲಹೆ ಮಾಡಿದರು.
ಆದರೆ ಭಾರತದ ತಿರುಗೇಟು ನೀಡುವುದು ಅಷ್ಟು ಸುಲಭವಲ್ಲ ಎಂದು ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಯಾಕೆ ಭಾರತದ ಕಮ್ ಬ್ಯಾಕ್ ಚಾನ್ಸ್ ಕೇವಲ ಶೇಕಡಾ 30ರಷ್ಟು ಮಾತ್ರ ಎಂದು ವೀರು ವಿವರಿಸಿದ್ದಾರೆ.
ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ 208 ರನ್ ಬೆನ್ನತ್ತಿದ ಭಾರತ ಗೆಲುವಿನ ಅವಕಾಶವನ್ನು ಕೈಚೆಲ್ಲಿತ್ತು. ಈ ಮೂಲಕ 72 ರನ್ ಅಂತರದ ಸೋಲಿಗೊಳಗಾದ ವಿರಾಟ್ ಕೊಹ್ಲಿ ಪಡೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಅಂತರದ ಹಿನ್ನಡೆಗೊಳಗಾಗಿತ್ತು.
ಇದೀಗ ಟೆಸ್ಟ್ ಸರಣಿ ಗೆಲ್ಲಲು ಮುಂದಿನ ಎರಡೂ ಪಂದ್ಯಗಳಲ್ಲೂ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.
ಈಗಿನ ಪ್ರಕಾರ ಭಾರತ ಪುನರಾಗಮನ ಮಾಡುವ ಅವಕಾಶ ಶೇಕಡಾ 30ರಷ್ಟು ಮಾತ್ರ. ಹಾಗಾಗಿ ಇಲ್ಲಿಂದ ಮುಂದಕ್ಕೆ ಮತ್ತಷ್ಟು ಕಠಿಣವೆನಿಸಲಿದೆ ಎಂದಿದ್ದಾರೆ.
ಹಾಗೆಯೇ ಸೆಂಚುರಿಯನ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಆಯ್ಕೆಗೆ ಸೂಕ್ತವಾದ ವಾತಾವರಣವಿದೆಯೇ ಎಂಬುದನ್ನು ಟೀಮ್ ಮ್ಯಾನೇಜ್ಮೆಂಟ್ ಪರಿಶೀಲಿಸಬೇಕು ಎಂದರು.
ಆರು ಸ್ಪೆಷಲಿಷ್ಟ್ ಬ್ಯಾಟ್ಸ್ಮನ್ಗಳು ಮತ್ತು ನಾಲ್ಕು ಸ್ಪೆಷಲಿಸ್ಟ್ ಬೌಲರ್ಗಳ ಸಂಯೋಜನೆಯನ್ನು ಕಾಯ್ದುಕೊಳ್ಳುವಂತೆ ವೀರು ವಿವರಿಸಿದರು. ಅಜಿಂಕ್ಯ ರಹಾನೆ ರೂಪದಲ್ಲಿ ಹೆಚ್ಚುವರಿ ಬ್ಯಾಟ್ಸ್ಮನ್ ಆಡಿಸಬಹುದಾಗಿದೆ. ಭಾರತ ಗೆಲ್ಲಬೇಕಾದರೆ ವಿರಾಟ್ ಹಾಗೂ ರೋಹಿತ್ ದೊಡ್ಡ ಪಾತ್ರ ನಿಭಾಯಿಸಬೇಕಿದೆ ಎಂದರು.
ಅದೇ ಹೊತ್ತಿಗೆ ಬ್ಯಾಟ್ಸ್ಮನ್ಗಳಿಗೆ ಕಿವಿಮಾತು ಹೇಳಿರುವ ಸೆಹ್ವಾಗ್, ಆಫ್ ಸೈಡ್ ಬರುವ ಚೆಂಡುಗಳನ್ನು ಬಿಡುವಂತೆ ಸೂಚನೆ ನೀಡಿದರು. ಅಲ್ಲದೆ ಆದಷ್ಟು ನೇರ ಬ್ಯಾಟ್ನಿಂದಲೇ ಆಡಲು ಸೂಚಿಸಿದರು. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಧನಾತ್ಮಕ ಚಿಂತನೆಯೊಂದಿಗೆ ಆಡಲು ಸಲಹೆ ಮಾಡಿದರು.