ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್ಶಿಪ್ಗಾಗಿನ ಹರಾಜು ಪ್ರಕ್ರಿಯೆ ಡಿಸೆಂಬರ್ 18ರಂದು ಜೈಪುರದಲ್ಲಿ ನಡೆಯಲಿದೆ ಎಂಬುದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಚಿತಪಡಿಸಿದೆ.
ಇದರೊಂದಿಗೆ ಪ್ರತಿ ಸಾಲಿನಲ್ಲೂ ಬೆಂಗಳೂರಿನಲ್ಲಿ ನಡೆದುಕೊಂಡು ಬರುತ್ತಿರುವ ಹರಾಜು ಇದೇ ಮೊದಲ ಬಾರಿಗೆ ಪಿಂಕ್ ಸಿಟಿ ಜೈಪುರಕ್ಕೆ ಸ್ಥಳಾಂತರಗೊಂಡಿದೆ.
ಹಾಗೆಯೇ ಒಂದೇ ದಿನದಲ್ಲಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಟ್ಟು 70 ಆಟಗಾರರು ಹರಾಜಿಗೆ ಒಳಗಾಗಲಿದ್ದಾರೆ. ಇದರಲ್ಲಿ 50 ಭಾರತೀಯ ಹಾಗೂ 20 ವಿದೇಶಿ ಆಟಗಾರರು ಸೇರಿಕೊಂಡಿದ್ದಾರೆ.
ಒಟ್ಟು 145.25 ಕೋಟಿ ರೂ.ಗಳ ಹರಾಜು ಮೊತ್ತದಲ್ಲಿ ಎಲ್ಲ ತಂಡಗಳು ಶ್ರೇಷ್ಠ ಆಟಗಾರರನ್ನು ಒಳಗೊಂಡಿರಲಿದೆ.
ಯುವರಾಜ್ ಸಿಂಗ್ ಹಾಗೂ ಗೌತಮ್ ಗಂಭೀರ್ ಹರಾಜಿಗೆ ಲಭ್ಯವಾಗಲಿದ್ದು, ಎಷ್ಟು ಮೊತ್ತಕ್ಕೆ ಮಾರಾಟವಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಅಂದ ಹಾಗೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ 2019ನೇ ಸಾಲಿನ ಐಪಿಎಲ್ ಹರಾಜು ವಿದೇಶಕ್ಕೆ ಸ್ಥಳಾಂತರವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಆತಿಥ್ಯ ತಾಣವಾಗಿ ದುಬೈ ಹಾಗೂ ದಕ್ಷಿಣ ಆಫ್ರಿಕಾ ಹೆಸರುಗಳು ಕೇಳಿ ಬರುತ್ತಿವೆ.
ಇದರೊಂದಿಗೆ ಪ್ರತಿ ಸಾಲಿನಲ್ಲೂ ಬೆಂಗಳೂರಿನಲ್ಲಿ ನಡೆದುಕೊಂಡು ಬರುತ್ತಿರುವ ಹರಾಜು ಇದೇ ಮೊದಲ ಬಾರಿಗೆ ಪಿಂಕ್ ಸಿಟಿ ಜೈಪುರಕ್ಕೆ ಸ್ಥಳಾಂತರಗೊಂಡಿದೆ.
ಹಾಗೆಯೇ ಒಂದೇ ದಿನದಲ್ಲಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಟ್ಟು 70 ಆಟಗಾರರು ಹರಾಜಿಗೆ ಒಳಗಾಗಲಿದ್ದಾರೆ. ಇದರಲ್ಲಿ 50 ಭಾರತೀಯ ಹಾಗೂ 20 ವಿದೇಶಿ ಆಟಗಾರರು ಸೇರಿಕೊಂಡಿದ್ದಾರೆ.
ಒಟ್ಟು 145.25 ಕೋಟಿ ರೂ.ಗಳ ಹರಾಜು ಮೊತ್ತದಲ್ಲಿ ಎಲ್ಲ ತಂಡಗಳು ಶ್ರೇಷ್ಠ ಆಟಗಾರರನ್ನು ಒಳಗೊಂಡಿರಲಿದೆ.
ಯುವರಾಜ್ ಸಿಂಗ್ ಹಾಗೂ ಗೌತಮ್ ಗಂಭೀರ್ ಹರಾಜಿಗೆ ಲಭ್ಯವಾಗಲಿದ್ದು, ಎಷ್ಟು ಮೊತ್ತಕ್ಕೆ ಮಾರಾಟವಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಅಂದ ಹಾಗೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ 2019ನೇ ಸಾಲಿನ ಐಪಿಎಲ್ ಹರಾಜು ವಿದೇಶಕ್ಕೆ ಸ್ಥಳಾಂತರವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಆತಿಥ್ಯ ತಾಣವಾಗಿ ದುಬೈ ಹಾಗೂ ದಕ್ಷಿಣ ಆಫ್ರಿಕಾ ಹೆಸರುಗಳು ಕೇಳಿ ಬರುತ್ತಿವೆ.