ಆ್ಯಪ್ನಗರ

ಕೆಕೆಆರ್‌ಗೆ ಕಾರಿಯಪ್ಪ ಸೇರ್ಪಡೆ

ಬೌಲರ್‌ ಶಿವಂ ಮಾವಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರ ಬದಲು ಕರ್ನಾಟಕದ ಕೆ.ಸಿ.ಕಾರಿಯಪ್ಪಗೆ ಸ್ಥಾನ ಕಲ್ಪಿಸಲಾಗಿದೆ ಎಂದು ಐಪಿಎಲ್‌ ಫ್ರಾಂಚೈಸಿ ಕೋಲ್ಕೊತಾ ನೈಟ್‌ರೈಡರ್ಸ್‌ ತಂಡದ ಧಣಿಗಳು ಭಾನುವಾರ ಪ್ರಕಟಣೆ ಹೊರಡಿಸಿದ್ದಾರೆ.

Agencies 18 Mar 2019, 5:00 am
ಕೋಲ್ಕೊತಾ: ಬೌಲರ್‌ ಶಿವಂ ಮಾವಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರ ಬದಲು ಕರ್ನಾಟಕದ ಕೆ.ಸಿ.ಕಾರಿಯಪ್ಪಗೆ ಸ್ಥಾನ ಕಲ್ಪಿಸಲಾಗಿದೆ ಎಂದು ಐಪಿಎಲ್‌ ಫ್ರಾಂಚೈಸಿ ಕೋಲ್ಕೊತಾ ನೈಟ್‌ರೈಡರ್ಸ್‌ ತಂಡದ ಧಣಿಗಳು ಭಾನುವಾರ ಪ್ರಕಟಣೆ ಹೊರಡಿಸಿದ್ದಾರೆ.
Vijaya Karnataka Web ipl 2019 warrier cariappa added to kkr squad
ಕೆಕೆಆರ್‌ಗೆ ಕಾರಿಯಪ್ಪ ಸೇರ್ಪಡೆ


ಬೌಲರ್‌ಗಳಾದ ಕಮ್ಲೇಶ್‌ ನಾಗರೋಟಿ ಮತ್ತು ಶಿವಂ ಮಾವಿ ಗಾಯಗೊಂಡಿರುವ ಕಾರಣ 2019ನೇ ಸಾಲಿನ ಐಪಿಎಲ್‌ಗೆ ಅಲಭ್ಯರಾಗಲಿದ್ದಾರೆ ಎಂದು ಇತ್ತೀಚೆಗೆ ಕೋಲ್ಕೊತಾ ತಂಡ ಘೋಷಿಸಿತ್ತು. ನಾಗರಕೋಟಿ ಬದಲಿಗೆ ಕೇರಳ ವೇಗಿ ಸಂದೀಪ್‌ ವಾರಿಯಸ್‌ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದೀಗ ಶಿವಂ ಬದಲಿಗೆ ಸ್ಪಿನ್ನರ್‌ ಕೆ.ಸಿ.ಕಾರಿಯಪ್ಪಗೆ ಸ್ಥಾನ ಕಲ್ಪಿಸಲಾಗಿದೆ. ವಿಶೇಷ ಎಂದರೆ ಕೆಕೆಆರ್‌ ಮೂಲಕವೇ ಕಾರಿಯಪ್ಪ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು.

ಸುನಿಲ್‌ ನರೇನ್‌, ಕುಲ್ದೀಪ್‌ ಯಾದವ್‌ ಮತ್ತು ಪಿಯೂಶ್‌ ಚಾವ್ಲಾ ಜತೆಗೆ ಕಾರಿಯಪ್ಪ ಕೆಕೆಆರ್‌ ತಂಡಕ್ಕೆ ಸೇರ್ಪಡೆಗೊಳ್ಳುವುದರೊಂದಿಗೆ ತಂಡದ ಸ್ಪಿನ್‌ ಬೌಲಿಂಗ್‌ ವಿಭಾಗ ಬಲಗೊಂಡಿದೆ. ಕೋಲ್ಕೊತಾ ತಂಡ ಮಾರ್ಚ್‌ 24ರಂದು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಮೊದಲ ಪಂದ್ಯ ಆಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌