ಆ್ಯಪ್ನಗರ

ಟೀಮ್ ಇಂಡಿಯಾ ಮುಂದಿನ ಗುರಿಯ ಬಗ್ಗೆ ಮನದಾಳವನ್ನು ಬಿಚ್ಚಿಟ್ಟ ರವಿಶಾಸ್ತ್ರಿ

ಎರಡನೇ ಬಾರಿಗೆ ಭಾರತ ರಾಷ್ಟ್ರೀಯ ಪುರುಷ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿರುವ ರವಿಶಾಸ್ತ್ರಿ ಅತೀವ ಸಂತಸವನ್ನು ವ್ಯಕ್ತಪಡಿಸಿದ್ದು, ಮುಂದಿನ ಯೋಜನೆ ಹಾಗೂ ಗುರಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Vijaya Karnataka Web 17 Aug 2019, 3:43 pm
ಮುಂಬಯಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಎರಡನೇ ಬಾರಿಗೆ ಮಾಜಿ ಆಟಗಾರ ರವಿಶಾಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಟೀಮ್ ಇಂಡಿಯಾ ಜತೆಗೆ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿರುವ ರವಿಶಾಸ್ತ್ರಿ, ತಮ್ಮ ಅನಿಸಿಕೆಗಳನ್ನು ಬಿಸಿಸಿಐ ಟಿವಿ ಜತೆಗೆ ಹಂಚಿಕೊಂಡಿದ್ದಾರೆ.
Vijaya Karnataka Web ravi-shastri-01


ಮೊದಲನೆಯದಾಗಿ ನನ್ನ ಮೇಲೆ ನಂಬಿಕೆಯನ್ನಿರಿಸಿ ಕೋಚ್ ಆಗಿ ಪುನರಾಯ್ಕೆ ಮಾಡಿರುವುದಕ್ಕೆ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾದ ಕಪಿಲ್ ದೇವ್, ಅಂಶುಮನ್ ಗಾಯಕ್‌ವಾಡ್ ಹಾಗೂ ಶಾಂತ ರಂಗಸ್ವಾಮಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ.

ಮುಂದಿನ 26 ತಿಂಗಳುಗಳ ಕಾಲ ಭಾರತ ತಂಡದ ಭಾಗವಾಗಲು ಸಾಧ್ಯವಾಗಿರುವುದು ನನ್ನ ಪಾಲಿಗೆ ದೊರಕಿದ ವಿಶೇಷ ಗೌರವವಾಗಿದೆ. ಈ ತಂಡದಲ್ಲಿ ನನಗೆ ನಂಬಿಕೆಯಿದೆ. ಕೆಲವೇ ಕೆಲವು ತಂಡಗಳು ಮಾತ್ರ ಬಿಟ್ಟು ಹೋಗಿರುವ ದೊಡ್ಡ ಪರಂಪರೆಯನ್ನು ಬಿಟ್ಟು ಹೋಗಲು ಸಾಧ್ಯವಿದೆ ಎಂಬ ಕಾರಣಕ್ಕಾಗಿ ನಾನು ಕೋಚ್ ಆಗಿದ್ದೇನೆ ಎಂದು ನುಡಿದರು.

ಅದೇ ನನ್ನ ಮುಖ್ಯ ಧ್ಯೇಯ ಆಗಿದ್ದು, ಅದೇ ಹಾದಿಯಲ್ಲಿದ್ದೇವೆ. ಯಾವುತ್ತೂ ಸುಧಾರಣೆಗೆ ಅವಕಾಶವಿದೆ. ಯುವ ಆಟಗಾರರ ಪ್ರವೇಶವಾಗುತ್ತಿದ್ದಂತೆಯೇ ಇದು ತುಂಬಾನೇ ಉತ್ಸಾಹಭರಿತ ಸಮಯವಾಗಿರಲಿದೆ ಎಂದರು.

ತಪ್ಪುಗಳಿಂದ ಪಾಠಗಳನ್ನು ಕಲಿಯಬೇಕು. ಯಾರು ಕೂಡಾ ಪರಿಪೂರ್ಣರಲ್ಲ. ಒಂದು ಕೆಟ್ಟ ದಿನವನ್ನು ಹಾಗೆಯೇ ಹೋಗುವಂತೆ ಬಿಡಬಾರದು. ಪಂದ್ಯದ ಮೇಲೆ ಗಮನ ಹರಿಸುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆ ಯುದ್ಧವನ್ನು ಹೇಗೆ ಗೆಲ್ಲಬಹುದು ಎಂಬುದೇ ನಮ್ಮ ಪ್ರಯತ್ನವಾಗಿರಲಿದೆ ಎಂದು ಸೇರಿಸಿದರು.

ಕಳೆದ ಮೂರು ವರ್ಷಗಳ ನಿರ್ವಹಣೆಯನ್ನು ಗಮನ ಹರಿಸಿದರೆ ಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿದ್ದೇವೆ. ಇದು ನಿಜಕ್ಕೂ ಅದ್ಭುತ. ನಾನು ಈಗಾಗಲೇ ಹೇಳಿದಂತೆ ಅಂತಹ ಗುಣಮಟ್ಟದ ರೇಖೆಯನ್ನು ಎಳೆದಿದ್ದೇವೆ. ಇಲ್ಲಿ ಬೇರೆ ಯಾವುದೇ ಮಾರ್ಗಗಳಿಲ್ಲ. ನೀವದನ್ನು ಮಾಡಲೇ ಬೇಕು. ಕನಿಷ್ಠ ಅದಕ್ಕಾಗಿ ಪ್ರಯತ್ನಿಸಬೇಕು. ಹಾಗಾಗಿ ಯುವ ಆಟಗಾರರು ತಂಡವನ್ನು ಪ್ರವೇಶಿಸಲು ಹೆಚ್ಚಿನ ಸಮಯದ ಹೂಡಿಕೆ ಮಾಡಲಾಗುತ್ತಿದೆ. ಈ ಮೂಲಕ ಅತ್ಯುತ್ತಮ ಸಂಯೋಜನೆಯನ್ನು ರೂಪಿಸಲಿದ್ದೇವೆ ಎಂದರು.

ಕಳೆದ ನಾಲ್ಕೈದು ವರ್ಷಗಳಲ್ಲಿ ಫೀಲ್ಡಿಂಗ್‌ನಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ವಿಶ್ವದಲ್ಲಿ ಶ್ರೇಷ್ಠ ಫೀಲ್ಡಿಂಗ್ ತಂಡವನ್ನಾಗಿ ಮಾಡುವುದು ಗುರಿಯಾಗಿದೆ. ಹಾಗಾಗಿ ಈ ತಂಡಕ್ಕಾಗಿ ಆಡುವವರು ಫೀಲ್ಡಿಂಗ್‌ನಲ್ಲೂ ಅತ್ಯುನ್ನತ್ತ ಮಟ್ಟದಲ್ಲಿರಬೇಕು ಎಂಬುದನ್ನು ಮೆಲುಕು ಹಾಕಿದರು.

ತಂಡದ ಸಾಧನೆ ಬಗ್ಗೆ ಕೇಳಿದಾಗ, ಅನೇಕ ದಾಖಲೆಗಳನ್ನು ಬರೆದಿದ್ದೇವೆ. ಯಾವುದೇ ದೇಶಕ್ಕೂ ತೆರಳಿ ಅವರದ್ದೇ ನೆಲದಲ್ಲಿ ಮಣಿಸುವ ನಂಬಿಕೆಯನ್ನು ಹೊಂದಿದ್ದೇವೆ. ಟೆಸ್ಟ್ ಕ್ರಿಕೆಟ್‌ನಲ್ಲೂ ಸ್ಮರಣೀಯ ಕ್ಷಣಗಳನ್ನು ಪಡೆದಿದ್ದೇವೆ. ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವನ್ನು ಗಳಿಸಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿ ಸೋತರೂ ಸಾಕಷ್ಟು ಕಲಿತಿದ್ದೇವೆ. ಇಂಗ್ಲೆಂಡ್‌ನಲ್ಲೂ ನಿಕಟ ಪೈಪೋಟಿ ನೀಡಿ ಸೋತಿದ್ದೇವೆ. ಇವೆಲ್ಲವೂ ಕಲಿಕಾ ಕಾಲಘಟ್ಟವಾಗಿದ್ದು, ನಮ್ಮನ್ನು ಮತ್ತಷ್ಟು ಪ್ರಬಲವನ್ನಾಗಿ ಮಾಡಿದೆ. ಸ್ಕೋರ್ ಪಟ್ಟಿಯಿಂದ ನಿಜಾಂಶವೂ ಹೊರಬರಲಾರದು. ಆದರೆ ಸ್ಕೋರ್ ಬೋರ್ಡ್ ನಿಗದಿಯಾದ್ದರಿಂದ ಅದನ್ನೇ ಹಿಂಬಾಲಿಸುತ್ತೇನೆ. ಓರ್ವ ಕೋಚ್ ಆಗಿ ಹೇಗೆ ಸುಧಾರಣೆ ಮಾಡಬಹುದು ಎಂಬುದರಲ್ಲಿ ನಂಬಿಕೆಯನ್ನಿರಿಸಿದ್ದೇನೆ. ಆಟಗಾರರು ಅದೇ ರೀತಿ ಯೋಚಿಸುತ್ತಿದ್ದಾರೆ. ಒಟ್ಟಾರೆಯಾಗಿ ಇದೇ ತರಹದ ಸ್ಥಿರ ಪ್ರದರ್ಶನ ಮುಂದುರಿಸುವುದು ತಂಡದ ಗುರಿಯಾಗಿದೆ ಎಂದರು.

ಮುಂದಿನ ಎರಡು ವರ್ಷಗಳಲ್ಲಿ ಸುಗಮ ಪರಿವರ್ತನೆ ಮಾಡುವುದು ಗುರಿಯಾಗಿದೆ. ಅನೇಕ ಯುವ ಆಟಗಾರರು ತಂಡವನ್ನು ಸೇರಲಿದ್ದಾರೆ. ಮೂರು-ನಾಲ್ಕು ಬೌಲರ್‌ಗಳನ್ನು ಗುರಿತಿಸಬೇಕಿದೆ. ಇವೆಲ್ಲವೂ ಸವಾಲಾಗಿದ್ದು, ನನ್ನ ಅಧಿಕಾರಾವಧಿ ಮುಗಿಯುವಾಗ ತಂಡವು ಸಂತಸದ ಹಂತದಲ್ಲಿರಬೇಕು. ಈ ಮೂಲಕ ಹೊಸ ಕ್ರಿಕೆಟ್ ಪರಂಪರನೆಯನ್ನು ನಿರ್ಮಾಣ ಮಾಡಬಹುದಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌