ಆ್ಯಪ್ನಗರ

ಕ್ರಿಕೆಟ್‌ ಗಂಧ-ಗಾಳಿ ಗೊತ್ತಿಲ್ಲದವರೂ ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸುತ್ತಾರೆ: ಅಕ್ಮಲ್‌ ಗರಂ!

ಗಲ್ಲಿ ಕ್ರಿಕೆಟ್‌ನಲ್ಲಿಯೂ ತಂಡವನ್ನು ಮುನ್ನಡೆಸದವರು ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನಿಸುತ್ತಾರೆಂದು ಪಾಕಿಸ್ತಾನ ತಂಡದ ಮಾಜಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಕಮ್ರಾನ್‌ ಅಕ್ಮಲ್ ಕಿಡಿ ಕಾರಿದ್ದಾರೆ.

Vijaya Karnataka Web 3 Jul 2021, 1:14 pm

ಹೈಲೈಟ್ಸ್‌:

  • ವಿರಾಟ್‌ ಕೊಹ್ಲಿ ನಾಯಕತ್ವವನ್ನು ಸಮರ್ಥಿಸಿಕೊಂಡ ಮಾಜಿ ಆಟಗಾರ ಕಮ್ರಾನ್‌ ಅಕ್ಮಲ್‌.
  • ಎಂಎಸ್‌ ಧೋನಿ ನಂತರ ಭಾರತ ತಂಡದ ಅತ್ಯುತ್ತಮ ನಾಯಕ ವಿರಾಟ್‌ ಕೊಹ್ಲಿ ಎಂದ ಪಾಕ್‌ ಮಾಜಿ ಆಟಗಾರ.
  • ತಮ್ಮ ನಾಯಕತ್ವದಲ್ಲಿ ವಿರಾಟ್‌ ಕೊಹ್ಲಿ ಇನ್ನೂ ಭಾರತಕ್ಕೆ ಐಸಿಸಿ ಟ್ರೋಫಿ ಗೆದ್ದು ಕೊಟ್ಟಿಲ್ಲ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Kohli=akmal
ಕೊಹ್ಲಿ-ಅಕ್ಮಲ್‌ (ಚಿತ್ರ: ಟಿಒಐ)
ಹೊಸದಿಲ್ಲಿ: ಇದುವರೆಗೂ ತಮ್ಮ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿರಾಟ್‌ ಕೊಹ್ಲಿ ವಿಫಲರಾಗಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್‌ ವಿರುದ್ಧ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಭಾರತ ಸೋತಿತ್ತು. ಇದಕ್ಕೂ ಮುನ್ನ 2017 ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2019ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿಯೂ ಅಂತಿಮ ಹಂತದಲ್ಲಿ ಟೀಮ್‌ ಇಂಡಿಯಾ ಎಡವಿತ್ತು.
ವಿರಾಟ್‌ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಒಂದೂ ಐಸಿಸಿ ಟ್ರೋಫಿ ಗೆಲ್ಲದ ಬಗ್ಗೆ ಹಲವರು ಟೀಕಿಸಿದ್ದಾರೆ. ಆದರೆ, ಪಾಕಿಸ್ತಾನ ಮಾಜಿ ಆಟಗಾರ ಕಮ್ರಾನ್‌ ಅಕ್ಮಲ್‌, ಎಂಎಸ್‌ ಧೋನಿ ಬಳಿಕ ಭಾರತ ತಂಡಕ್ಕೆ ಅತ್ಯುತ್ತಮ ನಾಯಕ ವಿರಾಟ್‌ ಕೊಹ್ಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೊಹ್ಲಿ ನಾಯಕತ್ವದಿಂದ ಕೆಳಗೆ ಇಳಿಯಬೇಕೆಂದು ಬಯಸುವವರು ಒಮ್ಮೆ ಅವರ ನಾಯಕತ್ವದಲ್ಲಿ ಭಾರತ ತಂಡದ ಸಾಧನೆಯನ್ನು ನೋಡಿ ಹಾಗೂ ಎಂತಹ ಕ್ಲಾಸ್‌ ಆಟಗಾರರನ್ನು ತಂಡಕ್ಕೆ ಪರಿಚಯಿಸಿದ್ದಾರೆಂಬುದನ್ನು ನೋಡಿ ಎಂದಿದ್ದಾರೆ.

ಕ್ರೀಡಾ ನಿರೂಪಕಿ ಸ್ವರಾ ಸವೇರಾ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಅಕ್ಮಲ್‌, "ಮಹೇಂದ್ರ ಸಿಂಗ್‌ ಧೋನಿ ಬಳಿಕ ವಿರಾಟ್‌ ಕೊಹ್ಲಿ ಅತ್ಯುತ್ತಮ ನಾಯಕ. ಅವರು 70 ಶತಕಗಳನ್ನು ಸಿಡಿಸಿದ್ದಾರೆ. ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2019ರ ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿದ್ದಾರೆ. ಈ ಎರಡರಲ್ಲೂ ಭಾರತ ಸೋತಿದೆ ಅದಕ್ಕೆ ಅವರು ಏನು ಮಾಡಬೇಕು? ಐದು ವರ್ಷಗಳ ಕಾಲ ಭಾರತ ನಂ.1 ಸ್ಥಾನದಲ್ಲಿಯೇ ಉಳಿದಿತ್ತು. ಅವರ ಸಾಧನೆ, ಅವರ ಸೇವೆ ಹಾಗೂ ಅವರ ನಾಯಕತ್ವ ಭಯಾನಕವಾಗಿದೆ. ಅದರ ಬಗ್ಗೆ ಯಾವುದೇ ಅನುಮಾನವಿಲ್ಲ. ಅವರು ಅಸಾಧಾರಣ ಆಟಗಾರನಾಗಿದ್ದು, ತಯಾರಿ ನಡೆಸುವ ಹಾದಿ ಅತ್ಯುತ್ತಮವಾಗಿದೆ," ಎಂದು ಕೊಂಡಾಡಿದರು.

ಕ್ಯಾಂಪ್‌ನಿಂದ ಹೊರ ನಡೆದ ಆಟಗಾರರು : ಭಾರತ vs ಶ್ರೀಲಂಕಾ ಓಡಿಐ ಸರಣಿಗೆ ಆರಂಭದಲ್ಲೇ ಹಿನ್ನಡೆ!

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಭಾರತದ ಸೋಲಿನ ಬಗ್ಗೆ ಮಾತನಾಡಿದ ಅಕ್ಮಲ್, ಪಂದ್ಯದ ಫಲಿತಾಂಶವು ಎಲ್ಲಾ ದಿನಗಳ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ವಿರಾಟ್‌ ಕೊಹ್ಲಿ ಜಾಗಕ್ಕೆ ನೀವು ಬೇರೆ ಆಟಗಾರನನ್ನು ನೇಮಿಸಿದರೆ, ಟೀಮ್‌ ಇಂಡಿಯಾ ಐಸಿಸಿ ಟ್ರೋಫಿ ಗೆಲ್ಲುವ ಬಗ್ಗೆ ಯಾವುದೇ ಗ್ಯಾರೆಂಟಿ ಇಲ್ಲ ಎಂದಿದ್ದಾರೆ.

"ಅವರು(ಕೊಹ್ಲಿ) ಅದ್ಭುತ ಆಟಗಾರ, ಅದ್ಭುತ ನಾಯಕ. ಹೀಗಿರುವಾಗ ನಾಯಕತ್ವ ಬದಲಾವಣೆ ಮಾಡುವುದಾದರೆ, ಭಾರತ ತಂಡದ ಐಸಿಸಿ ಟ್ರೋಪಿ ಗೆಲುವಿನ ಬಗ್ಗೆ ಖಚಿತತೆ ಇರುವುದಿಲ್ಲ. ಇವೆಲ್ಲವೂ ಅದೃಷ್ಟವನ್ನು ಅವಲಂಬಿಸಿರುತ್ತವೆ. ಬೆರಳು ತೋರಿಸುವುದು ಸುಲಭ, ಅಂತಹವರಿಗೆ ವಿಶೇಷವಾಗಿ ಕ್ರಿಕೆಟ್‌ ಬಗ್ಗೆ ಹೆಚ್ಚು ಗೊತ್ತಿರುವುದಿಲ್ಲ. ಅಲ್ಲದೆ, ಅಂತಹ ಮಂದಿ ಕನಿಷ್ಠ ಗಲ್ಲಿ ಕ್ರಿಕೆಟ್‌ನಲ್ಲಿಯೂ ತಂಡವನ್ನು ಮುನ್ನಡೆಸಿರುವುದಿಲ್ಲ, ಅಂತಹವರು ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ," ಎಂದು ಪಾಕ್‌ ಆಟಗಾರ ಕಿಡಿ ಕಾರಿದರು.

ಭಾರತ-ಪಾಕಿಸ್ತಾನ ಕ್ರಿಕೆಟ್‌ ಪುನರಾರಂಭಿಸುವುದು ಗಂಗೂಲಿ ಗುರಿ: ಕ್ರಮಾನ್!

"ಅಂತಹ ಯಾವುದೇ ವಿಷಯಗಳಿಂದ ಅವರು(ಕೊಹ್ಲಿ) ಪ್ರಭಾವಿತರಾಗುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಮಾನಸಿಕವಾಗಿ ಬಲಶಾಲಿ, ದೊಡ್ಡ ಸಾಧಕ. ಎಲ್ಲಾ ಮೂರು ಸ್ವರೂಪಗಳಲ್ಲಿ 50ಕ್ಕೂ ಹೆಚ್ಚಿನ ಸರಾಸರಿ ಹಾಗೂ ಹಲವು ಶತಕಗಳನ್ನು ಸಿಡಿಸಿರುವ ಕೊಹ್ಲಿಯ ಹತ್ತಿರ ಬರಲು ಯಾರಿಂದಲೂ ಸಾಧ್ಯವಿಲ್ಲ," ಎಂದು ಕಮ್ರಾನ್‌ ಅಕ್ಮಲ್ ಹೇಳಿದರು.

IND vs ENG: ರಾಹುಲ್‌ ಬದಲು ಈತನಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಎಂದ ಜಾಫರ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌