ಆ್ಯಪ್ನಗರ

ಯಾವುದು ಅತ್ಯುತ್ತಮ ಎಂಬುದನ್ನು ಧೋನಿ ತಿಳಿದಿದ್ದಾರೆ: ಸೌರವ್ ಗಂಗೂಲಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಗದೊಮ್ಮೆ ಸ್ಪಷ್ಟನೆ ನೀಡಿದ್ದು, ಯಾವುದು ಉತ್ತಮ ಎಂಬುದನ್ನು ಸ್ವತ: ಧೋನಿ ಅವರೇ ತಿಳಿದಿದ್ದಾರೆ ಎಂದು ಪ್ರತ್ರಿಕ್ರಿಯಿಸಿದ್ದಾರೆ.

Vijaya Karnataka Web 21 Dec 2019, 1:17 pm
ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಭವಿಷ್ಯ ಎತ್ತ ಸಾಗಲಿದೆ ಎಂಬುದು ಸಾಕಷ್ಟು ವದಂತಿಗಳಿಗೆ ಕಾರಣವಾಗಿದೆ. ಮಹಿ ಭವಿಷ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ನಾಯಕ ಸೌರವ್ ಗಂಗೂಲಿ ಈಗಾಗಲೇ ಅನೇಕ ಬಾರಿ ಸ್ಪಷ್ಟನೆ ನೀಡಿದ್ದಾರೆ. ಇದೀಗ ಧೋನಿ ಭವಿಷ್ಯದ ಬಗ್ಗೆ ಮಗದೊಮ್ಮೆ ಪ್ರತಿಕ್ರಿಯೆ ನೀಡಿರುವ ದಾದಾ, "ತಮಗೇನು ಉತ್ತಮ ಎಂಬುದನ್ನು ಸ್ವತ: ಧೋನಿ ತಿಳಿದಿದ್ದಾರೆ" ಎಂದು ನುಡಿದಿದ್ದಾರೆ.
Vijaya Karnataka Web ಮಹೇಂದ್ರ ಸಿಂಗ್ ಧೋನಿ


"ಇದು ಧೋನಿಗೆ ಬಿಟ್ಟ ವಿಚಾರ. ತುಂಬಾ ಅನುಭವ ಹೊಂದಿರುವ ಧೋನಿ ಅವರಿಗೆ ತಮಗೇನು ಅತ್ಯುತ್ತಮ ಎಂಬುದನ್ನು ತಿಳಿದಿದ್ದಾರೆ" ಎಂದು ಗಂಗೂಲಿ ವಿವರಿಸಿದರು.

2019 ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎದುರಾದ ಸೋಲಿನ ಬಳಿಕ ಕ್ರಿಕೆಟ್ ರಂಗದಿಂದ ಧೋನಿ ದೂರವುಳಿದಿದ್ದಾರೆ. ಕಿವೀಸ್ ವಿರುದ್ಧದ ಸೆಮಿಫೈನಲ್‌ನಲ್ಲಿ ದಿಟ್ಟ ಹೋರಾಟ ನೀಡಿದ ಧೋನಿ, ಅಂತಿಮ ಹಂತದಲ್ಲಿ ರನೌಟ್ ಬಲೆಗೆ ಸಿಲುಕುವ ಮೂಲಕ ಭಾರತದ ವಿಶ್ವಕಪ್ ಕನಸು ಕಮರಿತ್ತು.

ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಆಯ್ಕೆ ಬಗ್ಗೆ ಕ್ಯಾಪ್ಟನ್ ಕೊಹ್ಲಿ ಹೇಳಿದ್ದೇನು?

ಅಲ್ಲಿಂದ ಬಳಿಕ ಯುವ ವಿಕೆಟ್ ಕೀಪರ್ ರಿಷಬ್ ಪಂತ್‌ಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿದ್ದರು. ಈ ನಡುವೆ ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ಹೊಂದಿರುವ ಧೋನಿ, ಕಾಶ್ಮೀರದಲ್ಲಿ ಸೇವೆ ಸಲ್ಲಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು.

ವಿಶ್ವಕಪ್ ಬಳಿಕ ಭಾರತ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಸರಣಿಗಳಲ್ಲಿ ಭಾಗವಹಿಸಿದೆ. ಆದರೆ ಧೋನಿ ಪುನರಾಗಮನ ಮಾಡಿರಲಿಲ್ಲ. ಇದರೊಂದಿಗೆ ವಿಶ್ವಕಪ್ ಬಳಿಕ 2019ನೇ ಸಾಲಿನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾಗವಹಿಸುವರೇ ಎಂಬುದು ಹಲವು ಊಪಾಪೋಹಗಳಿಗೆ ಕಾರಣವಾಗಿದೆ.

'ಜಿಂಗಲ್ ಬೆಲ್, ಜಿಂಗಲ್ ಬೆಲ್, ಜಿಂಗಲ್ ಆಲ್‌ದ ವೇ'; 'ಸಾಂಟಾ ಕ್ಲಾಸ್' ವೇಷಧರಿಸಿ ಮಕ್ಕಳ ಕನಸು ನನಸಾಗಿದ ವಿರಾಟ್ ಕೊಹ್ಲಿ

ವರ್ಷಾರಂಭದಲ್ಲಿ ಭಾರತ ತಂಡವು ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗವಹಿಸಲಿದೆ. ತದಾ ಬಳಿಕ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದಾದ ಬಳಿಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಆಯೋಜನೆಯಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿರುವ ಧೋನಿ ಪಾಲಿಗೆ ಐಪಿಎಲ್‌ ನಿರ್ಣಾಯಕವೆನಿಸಲಿದೆ.

ಪಾಕಿಸ್ತಾನ ವಿರುದ್ಧ ಉಭಯ ಸರಣಿ?
ಪಾಕಿಸ್ತಾನ ವಿರುದ್ದ ಉಭಯ ಸರಣಿ ಪುನರಾರಂಭಿಸಲಾಗುವುದೇ ಎಂಬುದನ್ನು ಕೇಳಿದಾಗ ಇವೆಲ್ಲವೂ ಕೇಂದ್ರ ಸರಕಾರಕ್ಕೆ ಬಿಟ್ಟ ವಿಚಾರ ಎಂದು ಗಂಗೂಲಿ ಪ್ರತಿಕ್ರಿಯಿಸಿದರು. ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ದ್ವಿಪಕ್ಷೀಯ ಸಂಬಂಧ ಹದೆಗೆಟ್ಟಿರುವ ಹಿನ್ನೆಲೆಯಲ್ಲಿ ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿದರೆ ಉಭಯ ಸರಣಿಗಳಲ್ಲಿ ಇತ್ತಂಡಗಳು ಭಾಗವಹಿಸಿಲ್ಲ. ಈ ಹಿನ್ನೆಲೆಯಲ್ಲಿ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಪರಿಸ್ಥಿತಿ ಬದಲಾಗಬಹುದೇ ಎಂಬುದನ್ನು ಪ್ರಶ್ನಿಸಲಾಗಿತ್ತು.

ಭಾರತ ತಂಡದ ಪ್ರತಿಯೊಬ್ಬ ಕ್ರಿಕೆಟಿಗ ಎನ್‌ಸಿಎಗೆ ಒಳಪಟ್ಟಿರಬೇಕು: ಸೌರವ್ ಗಂಗೂಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌