ಲಂಡನ್: 'ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ ಫೈನಲ್ ಪಂದ್ಯದಲ್ಲಿ ಫಖಾರ್ ಜಮಾನ್ ಅವರ ಬ್ಯಾಟಿಂಗ್ ಶೈಲಿ ಎದುರಿಸಲು ಕಷ್ಟವಾಯಿತು,' ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೋಹ್ಲಿ ಹೇಳಿಕೊಂಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡವು ಎಡಗೈ ಓಪನರ್ ಫಖಾರ್ ಜಮಾನ್ (144) ರನ್ಗಳ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 338 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕ್ ಬ್ಯಾಟ್ಸ್ಮನ್ ಫಖಾರ್ ಜಮಾನ್ ಅವರನ್ನು ಬುಮ್ರಾ ಪೆವಿಲಿಯನ್ಗೆ ಹಾದಿ ತೋರಿಸಿದ್ದರು. ಬುಮ್ರಾ ಎಸೆತದಲ್ಲಿ ಫಖಾರ್ ಬ್ಯಾಟ್ಗೆ ಟಚ್ ಆದ ಚೆಂಡು ಧೋನಿ ಕೈ ಸೇರಿತ್ತು. ಅಂಪೈರ್ ಔಟ್ ಎಂದು ನಿರ್ಧಾರ ಪ್ರಕಟಿಸಿದ್ದರು. ಆದರೆ, ಬುಮ್ರಾ ನೋ ಬೌಲ್ ಮಾಡಿರುವುದು ಬೆಳಕಿಗೆ ಬಂತು. ಬುಮ್ರಾ ಮಾಡಿರುವ ಈ ತಪ್ಪನ್ನೂ ನಾಯಕನಾಗಿ ಕೋಹ್ಲಿ ಸಮರ್ಥಿಸಿಕೊಂಡರು.
'ಅಜರ್ ಅಲಿ ಅವರಂತಹ ಸಾಂಪ್ರದಾಯಿಕ ಶೈಲಿಯ ಬ್ಯಾಟ್ಸ್ಮನ್ ಆಡುವಾಗ ಅವರನ್ನು ಸಾಮಾನ್ಯ ತಂತ್ರ ಬಳಸಿ ಕಟ್ಟಿ ಹಾಕಲು ಸಾಧ್ಯವಿಲ್ಲ. ನಾನು ಎಲ್ಲಾ ವಿಭಾಗದಲ್ಲಿಯೂ ಎಡವಿದ್ದೇವೆ. ಈ ಸೋಲು ವೈಯಕ್ತಿಕವಾಗಿ ನೋವು ತಂದಿದೆ,' ಎಂದು ಬೇಸರ ವ್ಯಕ್ತಪಡಿಸಿದರು.
ಜಮಾನ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ವೇಳೆ ಒಬ್ಬ ನಾಯಕನಾಗಿ ಬೌಲರ್ಸ್ಗೆ ಎಲ್ಲ ತರಹದ ಸಲಹೆ ಸೂಚನೆಗಳನ್ನು ನೀಡಿದ್ದೆ. ಆದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಕೋಹ್ಲಿ ವಿವರಣೆ ನೀಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡವು ಎಡಗೈ ಓಪನರ್ ಫಖಾರ್ ಜಮಾನ್ (144) ರನ್ಗಳ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 338 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕ್ ಬ್ಯಾಟ್ಸ್ಮನ್ ಫಖಾರ್ ಜಮಾನ್ ಅವರನ್ನು ಬುಮ್ರಾ ಪೆವಿಲಿಯನ್ಗೆ ಹಾದಿ ತೋರಿಸಿದ್ದರು. ಬುಮ್ರಾ ಎಸೆತದಲ್ಲಿ ಫಖಾರ್ ಬ್ಯಾಟ್ಗೆ ಟಚ್ ಆದ ಚೆಂಡು ಧೋನಿ ಕೈ ಸೇರಿತ್ತು. ಅಂಪೈರ್ ಔಟ್ ಎಂದು ನಿರ್ಧಾರ ಪ್ರಕಟಿಸಿದ್ದರು. ಆದರೆ, ಬುಮ್ರಾ ನೋ ಬೌಲ್ ಮಾಡಿರುವುದು ಬೆಳಕಿಗೆ ಬಂತು. ಬುಮ್ರಾ ಮಾಡಿರುವ ಈ ತಪ್ಪನ್ನೂ ನಾಯಕನಾಗಿ ಕೋಹ್ಲಿ ಸಮರ್ಥಿಸಿಕೊಂಡರು.
'ಅಜರ್ ಅಲಿ ಅವರಂತಹ ಸಾಂಪ್ರದಾಯಿಕ ಶೈಲಿಯ ಬ್ಯಾಟ್ಸ್ಮನ್ ಆಡುವಾಗ ಅವರನ್ನು ಸಾಮಾನ್ಯ ತಂತ್ರ ಬಳಸಿ ಕಟ್ಟಿ ಹಾಕಲು ಸಾಧ್ಯವಿಲ್ಲ. ನಾನು ಎಲ್ಲಾ ವಿಭಾಗದಲ್ಲಿಯೂ ಎಡವಿದ್ದೇವೆ. ಈ ಸೋಲು ವೈಯಕ್ತಿಕವಾಗಿ ನೋವು ತಂದಿದೆ,' ಎಂದು ಬೇಸರ ವ್ಯಕ್ತಪಡಿಸಿದರು.
ಜಮಾನ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ವೇಳೆ ಒಬ್ಬ ನಾಯಕನಾಗಿ ಬೌಲರ್ಸ್ಗೆ ಎಲ್ಲ ತರಹದ ಸಲಹೆ ಸೂಚನೆಗಳನ್ನು ನೀಡಿದ್ದೆ. ಆದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಕೋಹ್ಲಿ ವಿವರಣೆ ನೀಡಿದರು.