ಆ್ಯಪ್ನಗರ

ಕೊಹ್ಲಿ ರನ್ ದಾಹ ಕಿಂಚಿತ್ತು ಕುಂದಿಲ್ಲ!

ಏಕದಿನ ಕ್ರಿಕೆಟ್‌ನಲ್ಲಿ 40ನೇ ಶತಕ ಸಾಧನೆ ಮಾಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮಗದೊಂದು ರೋಚಕ ಗೆಲುವು ದಾಖಲಿಸುವಲ್ಲಿ ನೆರವಾಗಿದ್ದಾರೆ. ಆದರೆ ಶತಕಗಳು ತಮ್ಮ ಪಾಲಿಗೆ ಅಂಕಿ ಮಾತ್ರ ಎಂದು ಹೇಳಿದ್ದಾರೆ.

Vijaya Karnataka Web 6 Mar 2019, 11:21 am
ನಾಗ್ಪುರ: ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ 40 ಶತಕಗಳನ್ನು ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾಜನವಾಗಿದ್ದಾರೆ.
Vijaya Karnataka Web virat-kohli-century-03


ಆದರೆ ತಮ್ಮ ಪಾಲಿಗೆ 40ನೇ ಶತಕ ಕೇವಲ ನಂಬರ್ ಮಾತ್ರವಾಗಿದ್ದು, ತಂಡದ ಗೆಲುವಿಗಾಗಿ ಪ್ರತಿಯೊಂದು ಪಂದ್ಯದಲ್ಲೂ ಶ್ರೇಷ್ಠ ನಿರ್ವಹಣೆ ನೀಡಲು ಬಯಸುವುದಾಗಿ ತಿಳಿಸಿದ್ದಾರೆ.

ಇದರಿಂದ ಕೊಹ್ಲಿ ಅವರಲ್ಲಿ ರನ್‌ಗಾಗಿ ಹಸಿವು ಕಿಂಚಿತ್ತು ಕುಂದಿಲ್ಲ ಎಂಬುದು ತಿಳಿದು ಬರುತ್ತದೆ. ಅಲ್ಲದೆ ತಂಡಕ್ಕಾಗಿ ಜವಾಬ್ದಾರಿ ನಿರ್ವಹಿಸುವುದು ನನ್ನ ಕರ್ತವ್ಯ ಎಂದು ಸೇರಿಸಿದ್ದಾರೆ.

120 ಎಸೆತಗಳನ್ನು ಎದುರಿಸಿರುವ ಕೊಹ್ಲಿ 10 ಬೌಂಡರಿಗಳ ನೆರವಿನಿಂದ 116 ರನ್ ಗಳಿಸಿದ್ದರು. ಈ ಮೂಲಕ ಭಾರತ ಸವಾಲಿನ ಮೊತ್ತ ಪೇರಿಸಲು ನೆರವಾಗಿದ್ದರು.

ನಾನು ಕ್ರೀಸಿಗಿಳಿದಾಗ ಬ್ಯಾಟಿಂಗ್ ಮಾಡುವುದು ಕಷ್ಟವೆನಿಸಿತ್ತು. ಹಾಗಾಗಿ ತಲೆ ಕೆಳಗಾಗಿಸಿ ಸಂಪೂರ್ಣ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವ ಯೋಜನೆ ನನ್ನದ್ದಾಗಿತ್ತು ಎಂದರು.

ಐದನೇ ವಿಕೆಟ್‌ಗೆ ವಿಜಯ್ ಶಂಕರ್ ಜತೆಗೆ ಕೊಹ್ಲಿ 81 ರನ್‌ಗಳ ಮಹತ್ವದ ಜತೆಯಾಟದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಸಂಪೂರ್ಣ ಶ್ರೇಯವನ್ನು ಶಂಕರ್‌ಗೆ ನೀಡಲು ಮರೆಯಲಿಲ್ಲ.

ಶಂಕರ್ ಧನಾತ್ಮಕ ಚಿಂತನೆಯೊಂದಿಗೆ ಬ್ಯಾಟಿಂಗ್ ಮಾಡಿದರು. ಇದರಿಂದ ನನ್ನ ಮೇಲಿನ ಒತ್ತಡವು ಕಡಿಮೆಯಾಯಿತು. ಈ ಹಂತದಲ್ಲಿ 275 ರನ್ ಪೇರಿಸುವ ಗುರಿಯನ್ನು ಹೊಂದಿದ್ದೆವು. ಆದರೆ ದುರದೃಷ್ಟವಶಾತ್ ವಿಜಯ್ ರನೌಟ್‌ಗೊಳಗಾದರು. ಇದರಿಂದ ಮತ್ತೆ ಇನ್ನಿಂಗ್ಸ್ ಕಟ್ಟಬೇಕಾಯಿತು ಎಂದು ಕೊಹ್ಲಿ ವಿವರಿಸಿದರು.

ಆದರೂ ಇಂತಹ ನಿಕಟ ಪಂದ್ಯಗಳು ಮುಂಬರುವ ವಿಶ್ವಕಪ್ ಹಿನ್ನಲೆಯಲ್ಲಿ ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ತಂಡಕ್ಕೆ ನೆರವಾಗಲಿದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌