ಆ್ಯಪ್ನಗರ

ನಂಬಿಕೆಯನ್ನು ಮರು ಪಾವತಿಸುವ ಸಮಯ: ಜಾಧವ್

ತನ್ನ ಸಾಮರ್ಥ್ಯದ ಮೇಲೆ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ವ್ಯವಸ್ಥಾಪಕ ಮಂಡಳಿ ಅತೀವ ನಂಬಿಕೆಯನ್ನಿರಿಸಿರುವುದಕ್ಕೆ ಕೇದರ್ ಜಾಧವ್ ಸಂತಸವನ್ನು ವ್ಯಕ್ತಪಡಿಸಿದ್ದು, ಇದೀಗ ಮರು ಪಾವತಿಸುವ ಸಮಯ ಎಂದು ಹೇಳಿದ್ದಾರೆ.

Vijaya Karnataka Web 3 Mar 2019, 3:18 pm
ಹೈದಾರಾಬಾದ್: ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಭಾರತ ತಂಡವು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ. ಹಿರಿಯ ಅನುಭವಿ ಮಹೇಂದ್ರ ಸಿಂಗ್ ಧೋನಿ ಜತೆ ಮುರಿಯದ ಐದನೇ ವಿಕೆಟ್‌ಗೆ 141 ರನ್‌ಗಳ ಜತೆಯಾಟ ನೀಡಿರುವ ಕೇದರ್ ಜಾಧವ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
Vijaya Karnataka Web kedar-jadhav


ಎಲ್ಲ ಒತ್ತಡಗಳನ್ನು ನಿಭಾಯಿಸಿದ ಜಾಧವ್ ಅಜೇಯ 81 ರನ್ ಗಳಿಸಿದ್ದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು.

ಭಾರತದ ಪರ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿರುವುದು ಸಂತಸ ತಂದಿದೆ. ಕಷ್ಟದ ಸಮಯದಲ್ಲೂ ಎಲ್ಲರೂ ಸ್ಫೂರ್ತಿ ತುಂಬುತ್ತಿದ್ದರು. ಫಿಟ್ ಆದ್ದಾಗೆಲ್ಲ ಆಡುವ ಅವಕಾಶ ದೊರಕಿತ್ತು. ನನ್ನ ಕಷ್ಟದ ಸಂದರ್ಭದಲ್ಲೂ ನನ್ನ ಬೆನ್ನಿಗೆ ನಿಂತಿರುವ ನಾಯಕ ಹಾಗೂ ತಂಡದ ವ್ಯವಸ್ಥಾಪಕ ಮಂಡಳಿಗೆ ಶ್ರೇಯ ಸಲ್ಲಬೇಕು. ಕಷ್ಟದ ಸಮಯದಲ್ಲಿ ಅವರು ಉಳಿಸಿಕೊಂಡಿರುವ ನಂಬಿಕೆಗಳಿಗೆ ಮರುಪಾವತಿ ಮಾಡುವ ಸಮಯವಿದು ಎಂದು ಹೇಳಿದರು.

ಮಗದೊಂದು ನಿರ್ಣಾಯಕ ಇನ್ನಿಂಗ್ಸ್‌ನೊಂದಿಗೆ ಮುಂಬರುವ ವಿಶ್ವಕಪ್‌ನಲ್ಲಿ ಆರನೇ ಕ್ರಮಾಂಕ ತುಂಬುವ ಭರವಸೆಯನ್ನು ಜಾಧವ್ ನೀಡಿದ್ದಾರೆ.

ಕಳೆದ ಒಂದು ವರೆ ವರ್ಷದಲ್ಲಿ ಆರನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡುತ್ತಿದ್ದೇನೆ. ಓರ್ವ ಫಿನಿಶರ್ ರೂಪದಲ್ಲಿ ತಂಡವು ನನ್ನನ್ನು ಎದುರು ನೋಡುತ್ತಿದೆ. ನಾನು ಆರನೇ ಕ್ರಮಾಂಕದಲ್ಲಿ ಆಡಲಿದ್ದೇನೆಂದು ಖಚಿತಪಡಿಸಿದ್ದಾರೆ. ಅದನ್ನೇ ತಂಡವು ನಿರೀಕ್ಷಿಸುತ್ತಿದೆ ಎಂದರು.

ಓರ್ವ ಅರೆ ಕಾಲಿಕ ಸ್ಪಿನ್ನರ್ ಆಗಿರುವ ಹೊರತಾಗಿಯೂ ನಿರಂತರವಾಗಿ ಮಹತ್ವದ ವಿಕೆಟುಗಳನ್ನು ಕಬಳಿಸುವಲ್ಲಿ ಜಾಧವ್ ಯಶಸ್ವಿಯಾಗುತ್ತಿದ್ದಾರೆ. ಆದರೆ ಯಾವುದೇ ಒತ್ತಡಗಳಿಲ್ಲದೇ ಬೌಲಿಂಗ್ ಮಾಡುವುದೇ ಯಶಸ್ಸಿಗೆ ಕಾರಣವಾಗಿದೆ ಎಂದರು.

ನಾನು ಓರ್ವ ವೃತ್ತಿಪರ ಬೌಲರ್ ಆಗಿ ಚಿಂತಿಸುತ್ತಿಲ್ಲ. ಸಾಧ್ಯವಾದಷ್ಟು ಡಾಟ್ ಬಾಲ್ ಎಸೆಯುವುದು ನನ್ನ ಗುರಿಯಾಗಿದೆ. ಈ ವೇಳೆಯಲ್ಲಿ ವಿಕೆಟ್ ಲಭಿಸಿದರೆ ಉತ್ತಮ. ಯಾವುದೇ ಒತ್ತಡಗಳಿಲ್ಲದೆ ನನ್ನ ಬೌಲಿಂಗ್‌ನ್ನು ಆನಂದಿಸುತ್ತಿರುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌